ಹಾಲಿನ ದರ ಇಳಿಸಿ ಸ್ವಚ್ಛಂದ ಪರಿಸರಕ್ಕೆ ನಾಂದಿಯಾಗಲಿ: ಪಾಲನಕರ
ಗದಗ 31: ಸಾಮಾಜಿಕವಾಗಿ ಸಮುದಾಯದ ಹಿರಿಯ ನಾಗರಿಕರ, ಮಹಿಳೆಯರ, ಮಕ್ಕಳ, ಮತ್ತು ನವಜಾತ ಶಿಶುಗಳ ಆರೋಗ್ಯವೃದ್ಧಿಗಾಗಿ ಮತ್ತು ಅವರ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಹಾಲು ಮಹತ್ವದ ಪಾತ್ರ ವಹಿಸುತ್ತದೆ. ಹಾಲು ಪ್ರತಿಯೊಬ್ಬ ಮನುಷ್ಯ ನಿಗೆ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು, ಮತ್ತು ಮಕ್ಕಳ ಬೆಳವಣಿಗೆಗೆ ಅತ್ಯಾವಶ್ಯಕವಾದ ಮೂಲಭೂತ ಅಗತ್ಯ ವಸ್ತುಗಳಲ್ಲಿ ಒಂದಾಗಿರುತ್ತದೆ.
ಆದರೆ ಘನ ರಾಜ್ಯ ಸರಕಾರವು ಈ ಒಂದು ದೈನಂದಿನ ಸಾಮಾಜಿಕ ಆರೋಗ್ಯ ವೃದ್ಧಿಯ ಅಗತ್ಯ ವಸ್ತುವಾದ ಹಾಲಿನ ದರವನ್ನು ಮೇಲಿಂದ ಮೇಲೆ ಏರಿಸುವುದರಿಂದ ಬಡ ಜನಸಾಮಾನ್ಯರು ಹಾಲಿನ ಉತ್ಪನ್ನಗಳನ್ನು ಪಡೆಯಲು ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಆರಂಭದಿಂದಲೇ ನಂದಿನಿ ಹಾಲಿನ ದರವನ್ನು ಲೀಟರ್ಗೆ 4 ರೂಪಾಯಿ ಏರಿಕೆ ಮಾಡುವ ಮೂಲಕ ಬಡ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಏಕಾಏಕಿ ನಾಲ್ಕು ರೂಪಾಯಿ ಏರಿಸಿರುವದು ವಿಷಾದನೀಯವಾಗಿದೆ.ಅದೇ ಸಾಮಾಜಿಕ ಜನಸಾಮಾನ್ಯರ ಜೀವಕ್ಕೆ ಮಾರಕವಾದ ಆಲ್ಕೋ ಹಾಲ್ ಬಳಕೆಯಿಂದ ಯುವ ಪೀಳಿಗೆಯು ಕರಳು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಬಲಿಯಾಗುತ್ತಿರುವರು. ಅದರಂತೆ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಜರ್ದಾ, ಖೈನಿ, ಗುಟ್ಕಾ, ಮತ್ತು ಮಾದಕ ವ್ಯೆಸನದಿಂದಾಗಿ ಜನಸಾಮಾನ್ಯರ ಆರೋಗ್ಯದ ಮೇಲೆ ಮಾರಕ ದುಷ್ಪರಿಣಾಮ ಉಂಟಾಗುತ್ತದೆ. ಇದರಿಂದಾಗಿ ಯುವ ಪೀಳಿಗೆಯು ಸಾವಿನದವಡೆಗೆ ತಲುಪುವಂತಾಗಿರುತ್ತದೆ. ಇಂತಹ ಸಾಮಾಜಿಕವಾಗಿ ಮಾರಕವಾದ ವಸ್ತುಗಳ ಬೆಲೆ ಏರಿಕೆಯಿಂದ ದುಷ್ಟಟಗಳಿಗೆ ಬಲಿಯಾಗುವದನ್ನಾದರೂ ಅಲ್ಪ ಪ್ರಮಾಣದಲ್ಲಿ ನಿಯಂತ್ರಿಸುವ ಪ್ರಯತ್ನವಾದರೂ ಮಾಡಿದಂತಾಗುತ್ತದೆ. ಇದರಿಂದ ಅರೋಗ್ಯವಂತ ಹಾಗೂ ಸುಂದರ ಸ್ವಚ್ಛಂದ ಪರಿಸರಕ್ಕೆ ನಾಂದಿಯಾಗುತ್ತದೆ.ಆದುದರಿಂದ ಘನ ರಾಜ್ಯ ಸರಕಾರವು ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾದ ಮಾದಕ ದ್ರವ್ಯ, ಆಲ್ಕೋಹಾಲ್ಗಳ ದರಗಳನ್ನು ಏರಿಸಿ ಜನಸಾಮಾನ್ಯರು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಲು ನೆರವುದಾಯಕವಾಗುತ್ತದೆ. ಅದರಂತೆ ಸಾಮಾಜಿಕವಾಗಿ ಜನಸಾಮಾನ್ಯರ ಆರೋಗ್ಯದ ವೃದ್ಧಿಗೆ ನೆರವುದಾಯಕವಾದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಇಳಿಸುವ ಮೂಲಕ ಜನಸಾಮಾನ್ಯರ ಆರೋಗ್ಯ ವೃದ್ಧಗೆ ಮುಂದಾಗಲು ಆರೋಗ್ಯ ಮಾರಕ ಆಲ್ಕೋಹಾಲ್ ದರ ಏರಿಸಿ, ಆರೋಗ್ಯದಾಯಕ ಹಾಲಿನ ದರ ಇಳಿಸಿ ಎಂದು ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಸಹನಾ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.