ಬಕ್ರೀದ್ ಹಬ್ಬದ ಪ್ರಯುಕ್ತ ಮೆಹಬೂಬ್ ಖಾನ್ ರಿಂದ ಪರಸ್ಪರ ಶುಭಾಶಯ ವಿನಿಮಯ

Mehboob Khan exchanges greetings on the occasion of Bakrid

ಬಕ್ರೀದ್ ಹಬ್ಬದ ಪ್ರಯುಕ್ತ ಮೆಹಬೂಬ್ ಖಾನ್ ರಿಂದ ಪರಸ್ಪರ ಶುಭಾಶಯ ವಿನಿಮಯ

ಕೊಪ್ಪಳ 09: ಮುಸ್ಲಿಂ ಸಮುದಾಯದ ಪವಿತ್ರ ತ್ಯಾಗ ಬಲಿದಾನದ ಪ್ರತೀಕ ಈ ದುಲ್ ಆದಾ ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ ಕೊಪ್ಪಳ ನಗರದ ಹಳೆಯ ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಬಿ ಎಸ್ ಪಿ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿ ಯಾಗಿರುವ ಹಾಗೂ ಕೊಪ್ಪಳ ನಗರದ ಅಲ್ಪಸಂಖ್ಯಾತ ಮುಖಂಡರಾಗಿರುವ ಮಹಬೂಬ್ ಖಾನ್ ರವರು ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡು ಭಾಗಿಯಾದ ಪ್ರತಿಯೊಬ್ಬರಿಗೂ ಶುಭಾಶಯ ಕೋರಿದರು.  ಈ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಖಾಜಿ ಅಬ್ಬಾಸ್ ಅಲಿ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.