ಸತತ ಪರಿಶ್ರಮವೇ ಸಾಧನೆಗೆ ಮಾರ್ಗ: ಮಲ್ಲಿಕಾರ್ಜುನ ತೊದಲಬಾಗಿ
ಕೊಪ್ಪಳ 30: ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ಸತತ ಪರಿಶ್ರಮದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ಅವರು ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಬೆಳಕು ಚಾರಿಟೇಬಲ್ ಟ್ರಸ್ಟ್ ಹಾಗೂ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅರಿವಿನ ಅಂಗಳ ಕಾರ್ಯಕ್ರಮವನ್ನು ಉಧ್ಘಾಟಿಸಿ ವಿದ್ಯಾರ್ಥಿಗಳಳನ್ನು ಉದ್ದೇಶಿಸಿ ಮಾತನಾಡುತ್ತಾ,ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಆ ಕ್ಷೇತ್ರದಲ್ಲಿ ಹೆಚ್ಚು ಪರಿಶ್ರಮವನ್ನು ಪಡಬೇಕು.ನಾನು ಕೂಡಾ ಹತ್ತನೇಯ ತರಗತಿಯಲ್ಲಿ ಆಂಗ್ಲ ಭಾಷೆಯಲ್ಲಿ ಕೇವಲ 39 ಅಂಕಗಳನ್ನು ಪಡೆದ ವಿದ್ಯಾರ್ಥಿಯಾಗಿದ್ದು,ಸತತ ಪರಿಶ್ರಮವನ್ನು ಪಡುತ್ತಾ ನನ್ನ ಓದಿನ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದರ ಜೊತೆಯಲ್ಲಿ ಸತತವಾದ ಪರಿಶ್ರಮದ ಫಲವಾಗಿ 5 ಸರಕಾರಿ ನೌಕರರಿಗಳ ಆಹ್ವಾನ ಬಂದಿದವು.ಆದರೂ ಕೂಡಾ ಉನ್ನತ ಅಧಿಕಾರಿಯಾಗಬೇಕು ಎಂಬ ಹಂಬಲದಿಂದ ಹೆಚ್ಚು ಹೆಚ್ಚು ಅಧ್ಯಾಯನ ಮಾಡಿದ ಫಲವಾಗಿ ಇಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದೆನೆ.ವಿದ್ಯಾರ್ಥಿಗಳು ಕೂಡಾ ಓದಿನ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ್ಪ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿ,ಬೆಳಕು ಚಾರಿಟೇಬಲ್ ಬೆಂಗಳೂರು ವತಿಯಿಂದ ಪ್ರತಿ ತಿಂಗಳ ಒಬ್ಬ ಮಾದರಿಯ ವ್ಯಕ್ತಿಗಳನ್ನು ಕರೆಸಿ ಅವರ ಮೂಲಕ ಅವರು ನಡೆದ ಬಂದ ದಾರಿ ಹಾಗೂ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸುವ ಮೂಲಕ ಅವರಲ್ಲಿ ಕೂಡಾ ಸಾಧನೆ ಮಾಡುವ ಹಂಬಲ ಬರಲಿ ಎಂಬ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಮಾತನಾಡಿ,ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರಿಂದ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚುವ ಮಾಡಲು ಸಹಾಯ ಮಾಡುತ್ತದೆ.ಸಾಧನೆ ಮಾಡಿದ ವ್ಯಕ್ತಿಗಳನ್ನು ಕರೆಸಿ ಅವರ ಸಾಧನೆ ಮಾಡಿದ ಮಾರ್ಗವನ್ನು ಮಕ್ಕಳಿಗೆ ತಿಳಿಸಿ ಕೊಡುವ ಅರಿವಿನ ಅಂಗಳ ಕಾರ್ಯಕ್ರಮ ಬಹಳ ವಿಭಿನ್ನ ಹಾಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಮತ್ತು ಮೆಲುಸ್ತವಾರಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಟಕ ಅಕಾಡಮಿಯ ಸದಸ್ಯರಾದ ಚಾಂದಪಾಷಾ ಕಿಲ್ಲೇದಾರ,ಗ್ರಾ.ಪಂ.ಸದಸ್ಯರಾದ ಮಂಜುನಾಥ ನಡವಲಮನಿ,ಜಿಲ್ಲಾ ಪಂಚಾಯತನ ರಾಮಣ್ಣ,ಎಸ್.ಡಿ.ಎಂ.ಸಿಯ ಉಪಾಧ್ಯಕ್ಷರಾದ ಮಂಗಳಾ ವಾಲಿಕಾರ,ಸದಸ್ಯರಾದ ಮೈಲಪ್ಪ ಕಂಬದಮನಿ,ಬಾಬಾ ಕಿಲ್ಲೇದಾರ,ಬಸವರಾಜ ಮತ್ತೂರು,ಗವಿಸಿದ್ದಮ್ಮ ಹಿರೇಮಠ,ಸುಹಾನಬೇಗಂ,ಪ್ರಭಾವತಿ ಹಳೇಮನಿ,ಉರ್ದು ಶಾಲೆಯ ಅಧ್ಯಕ್ಷರಾದ ಹುಸೇನಸಾಬ ಕಮ್ಮಾರ,ಶಿಕ್ಷಕರಾದ ಜ್ಯೋತಿಲಕ್ಷ್ಮೀ,ಪೂರ್ಣಿಮಾ ತುಪ್ಪದ,ಮೇರಾಜುನ್ನಿಸಾ,ಭಾರತಿ ಉಪಾಧ್ಯಯ,ಗಂಗಮ್ಮ ಕಪರಶೆಟ್ಟರ,ಹನುಮವ್ವ, ರಾಜಾ ಹುಸೇನ,ಗೀತಾ ಕುರಿ,ನಗ್ಮಾ,ಜಲಜಾಕ್ಷಿ,ವೀಣಾ,ಸುಜಾತ ಕುರಿ,ರಿಜ್ವಾನಬೇಗಂ,ನಾಜೀಯಾಬೇಗಂ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಮಮತಾ ನಿರೂಪಿಸಿದರು.
ಶಿಕ್ಷಕರಾದ ಹನುಮಂತಪ್ಪ ಸ್ವಾಗತಿಸಿ ಭಾರತಿ ಹವಳೆ ವಂದಿಸಿದರು.