ಗಣಿತ ವಿಷಯಕ್ಕೆ ಶ್ರೀನಿವಾಸ್ ರಾಮಾನುಜನ್ ಅವರ ಕೊಡುಗೆ ಅಪಾರ: ರಾಧಾರಾಣಿ
ಕೊಪ್ಪಳ 24: ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು.
ರಾಷ್ಟ್ರೀಯ ಗಣಿತ ದಿನಾಚರಣೆಯ ಅಂಗವಾಗಿ ಗಣಿತದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರಿ್ಡಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಗಣಿತ ಉಪನ್ಯಾಸಕರಾದ ರಾಧಾರಾಣಿ ಮೇಡಂ ರವರು ಅಂಕಗಣಿತ, ಬೀಜಗಣಿತ, ರೇಖಾಗಣಿತದ ಬಗ್ಗೆ, ಗಣಿತ ವಿಷಯಕ್ಕೆ ಶ್ರೀನಿವಾಸ್ ರಾಮಾನುಜನ್ ಅವರ ಕೊಡುಗೆಗಳ ಬಗ್ಗೆ, ಗಣಿತದಲ್ಲಿ ಭಾರತೀಯರ ಕೊಡುಗೆಗಳ ಬಗ್ಗೆ ವಿಸ್ತಾರವಾಗಿ ಉಪನ್ಯಾಸ ನೀಡಿದರು.ಜೀರೋ ಮತ್ತು ಅನಂತದ ಬಗ್ಗೆ ಮಾಹಿತಿ ನೀಡಿದರುವಿಜ್ಞಾನ ಕೇಂದ್ರದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಸಿದ್ಧಲಿಂಗೇಶ್ ಹಮ್ಮಿಗಿ ರವರು ಮಾತನಾಡುತ್ತಾ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಷಯ. ವಿಜ್ಞಾನ ಕೇಂದ್ರದಲ್ಲಿ ನಡೆಯುವ ಈ ರೀತಿಯ ತರಬೇತಿಯಿಂದಾಗಿ ಹೆಚ್ಚು ಹೆಚ್ಚು ಜನರಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡುತ್ತಿದೆ. ಗಣಿತ ಶಿಕ್ಷಕರಿಗೆ ಇದೊಂದು ಉತ್ತಮ ಅವಕಾಶ ಆಗಿದೆ. ರಾಧಾರಾಣಿ ಮೇಡಂ ರವರು ವಿಸ್ತಾರವಾಗಿ ಗಣಿತದ ಬಗ್ಗೆ ಉಪನ್ಯಾಸ ಮಾಡಿದ್ದಾರೆ.
ಗಣಿತ ಎಂದರೆ ಅದು ಕಠಿಣ ಎಂದುಕೊಳ್ಳದೇ ಅದನ್ನು ಸತತ ಪರಿಶ್ರಮದಿಂದ ಸರಳವಾಗಿ ಮಾಡಬಹುದಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ವಿಜ್ಞಾನ ಕೇಂದ್ರದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು. ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿಗಳಾದ ಗವಿಸಿದ್ದೇಶ್ವರಸ್ವಾಮಿ ಬೆಣಕಲ್ ಮಠ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಯ ಬಗ್ಗೆ ಮತ್ತು ವಿಜ್ಞಾನ ಕೇಂದ್ರದಲ್ಲಿ ಇರುವ ವಿಜ್ಞಾನದ ಮಾದರಿಗಳ ಬಗ್ಗೆ, ಮುಂದಿನ ದಿನಗಳಲ್ಲಿ ಎರಡು ಹೊಸ ಥಿಮ್ಯಾಟಿಕ್ ಗ್ಯಾಲರಿಗಳನ್ನು ಅಳವಡಿಸುವ ಬಗ್ಗೆ, ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರಿಗೆ ಮಾಹಿತಿಯನ್ನು ನೀಡಿದರು.
ವಿಜ್ಞಾನ ಕೇಂದ್ರವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿಗಳಾದ ಗವಿಸಿದ್ದೇಶ್ವರಸ್ವಾಮಿ ಬೆಣಕಲ್ ಮಠ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜ್ಞಾನ ಕೇಂದ್ರದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಸಿದ್ಧಲಿಂಗೇಶ್ ಹಮ್ಮಿಗಿ ಸರ್, ಡಯಟ್ ನ ಉಪನ್ಯಾಸಕರಾದ ಶೇಖರ್ ಸರ್, ಪ್ರಭಾರಿ ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ತಗಡಿನಮನಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಯ್ಯದ್ ಮೆಹಬೂಬ್ ಹುಸೇನ್, ಹನುಮರಡ್ಡಿ ಹಳ್ಯಾಳ, ಕನಕಪ್ಪ, ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಶೇಖರ್ ಅಂಕದ್, ಗಣಿತ ವೇದಿಕೆಯ ಕಾರ್ಯದರ್ಶಿಗಳಾದ ನಜೀರ್ ಅಹ್ಮದ್ ಸರ್, ಗಣಿತ ವೇದಿಕೆಯ ಸಂಚಾಲಕರಾದ ಶರಣಬಸನಗೌಡ್ರು, ಕ್ಯೂರೇಟರ್ ಮೈಲಾರ್ಪ, ಸಿಬ್ಬಂದಿಗಳಾದ ಫಕೀರಸಾಬ್, ಮಹಾಲಿಂಗಪ್ಪ, ಶಂಕ್ರ್ಪ, ಪೂಜಾ, ರಾಜಾಭಕ್ಷಿ, ನಬೀಲ್ ಪಾಷ ಸೇರಿದಂತೆ 59 ಕ್ಕೂ ಹೆಚ್ಚಿನ ಗಣಿತ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಿಜ್ಞಾನ ಕೇಂದ್ರದ ಶಿಕ್ಷಣ ಸಹಾಯಕ ಫಕೀರಸಾಬ್ ನಿರೂಪಿಸಿದರು, ಸರ್ಕಾರಿ ಪ್ರೌಢಶಾಲೆ ಗುಳದಳ್ಳಿಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಮಂಗಲಾ ರವರು ಪ್ರಾರ್ಥಿಸಿದರು, ತಾಂತ್ರಿಕ ಸಹಾಯಕ ಮಹಾಲಿಂಗಪ್ಪ ಸ್ವಾಗತಿಸಿದರು, ತಂತ್ರಜ್ಞ ಶಂಕ್ರ್ಪ ವಂದಿಸಿದರು