ಬೀದಿನಾಟಕದ ಮೂಲಕ ಮತದಾನ ಜಾಗೃತಿ

ಲೋಕದರ್ಶನವರದಿ

ಹಾವೇರಿ18: ಪ್ರತಿಯೊಬ್ಬ ಪ್ರಜೆಯು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಕಂಜಿರಾ (ತಮಟೆ) ಬಾರಿಸುವುದರ ಮೂಲಕ ಬೀದಿನಾಟಕವನ್ನು ಉದ್ಘಾಟಿಸಿ ಮಾತನಾಡಿ ತಾಲೂಕ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿಯಾದ ಅನ್ನಪೂರ್ಣ ಮುದುಕಮ್ಮನವರ ಹೇಳಿದರು.

ಜಿಲ್ಲಾ  ಪಂಚಾಯತಿ,  ಹಾಗೂ ತಾಲೂಕ ಲೋಕ ವಯಸ್ಕರ ಶಿಕ್ಷಣ ಸಮಿತಿ  ಮತ್ತು ತಾಲೂಕ ಪಂಚಾಯತಿ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ನಿಲ್ದಾಣದಲ್ಲಿ ವಿವಿಧ ಗ್ರಾಮಗಳಿಗೆ ಹೋಗುವ ನೆರೆದ ಸಾರ್ವಜನಿಕರಿಗೆ ಬೀದಿನಾಟಕದ ಮೂಲಕ ಮತದಾರರ ಜಾಗೃತಿ ಜರುಗಿಸಲಾಯಿತು.

 ಸದರಿ ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ವಾಹನಗಳ ಮೂಲಕ ಸ್ಟಿಕ್ಕರ್ಸ ಹಾಗೂ ಕರಪತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂಧರ್ಭದಲ್ಲಿ ಮತದಾನ ಅತ್ಯಂತ ಪವಿತ್ರ ಹಕ್ಕು, ಪ್ರಜಾಪಭುತ್ವದ ಬಲವರ್ದನೆಗಾಗಿ ಎಲ್ಲಾರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಹಾಗೂ ಮತದಾನದಲ್ಲಿ ಭಾಗವಹಿಸುವದು ಎಲ್ಲರ ಕರ್ತವ್ಯವಾಗಿದೆೆ ಎಂದು ತಿಳಿಸಿದರು. 

ಜಿಲ್ಲಾ ಮತ್ತು ತಾಲೂಕಾ ವಯಸ್ಕರ ಶಿಕ್ಷಣ ಮತ್ತು  ತಾಲೂಕ ಪಂಚಾಯತ ಸಿಬ್ಬಂದಿ ವರ್ಗದವರು, ಹಾಜರಿದ್ದರು.