ಹೆಣ್ಣು ಸಬಲೀಕರಣವೆ ದೇಮಗುವಿನಶದ ಉಜ್ವಲ ಭವಿಷ್ಯ: ವಿಜಯಲಕ್ಷ್ಮಿ

Women empowerment is the bright future of Demguvinash: Vijayalakshmi

ಹೆಣ್ಣು  ಸಬಲೀಕರಣವೆ ದೇಮಗುವಿನಶದ ಉಜ್ವಲ ಭವಿಷ್ಯ: ವಿಜಯಲಕ್ಷ್ಮಿ  

ಬಳ್ಳಾರಿ 25 : ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಹಾಗೂ ಭಾರತೀಯ ವೈದಕೀಯ ಸಂಘದ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಅಂಗವಾಗಿ ಸರಕಾರಿ ಬಾಲಕಿಯರ ಪ್ರೌಢ ಶಾಲೆ ನಗರದಲ್ಲಿ  ಮತ್ತು ಸರಕಾರಿ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆಯಲ್ಲಿ  ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಡಾಽಽ ದಿವ್ಯಾ ಅವರು ಸಾಹಸದ ಕಥೆಯನ್ನು ಹೇಳುತ್ತ ಮಕ್ಕಳಲ್ಲಿ ಈ ದಿನದ ಉದ್ದೇಶವನ್ನು ತಿಳಿಸಿದರು. ಹಾಗೆಯೆ ಡಾಽಽ ಅರುಣಾ ಅವರು ಮಕ್ಕಳಲ್ಲಿ ಜೀವನದ ಗುರಿಯನ್ನು ಹುಡುಕುವುದು ಹಾಗೂ ಅದರ ನಿಟ್ಟಿನಲ್ಲಿ ಚಲಿಸುವುದು ಎಷ್ಟು ಅತ್ಯಗತ್ಯ ಎನ್ನುವುದನ್ನು ಮನವರಿಕೆ ಮಾಡಿದರು. ಪ್ರಮುಖರಾದ ಸಂಪನ್ಮೂಲ ವ್ಯಕ್ತಿಗಳಾದ ಎಸ್‌. ವಿಜಯಲಕ್ಷ್ಮೀ ಶಾಖಾ ವ್ಯವಸ್ಥಾಪಕರು ಈಕಂಋ ಅವರು ಮಾತನಾಡುತ್ತಾ, ಹೆಣ್ಣು ಸಬಲೀಕರಣವೆ ದೇಮಗುವಿನಶದ ಉಜ್ವಲ ಭವಿಷ್ಯವಾಗಿದೆ. ಹಾಗೂ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಬರುವ ಅವಕಾಶ ಹಾಗೂ ಸಾಧನೆಯನ್ನು ಉಪಯೋಗಿಸಿಕೊಂಡಲ್ಲಿ ತಮ್ಮ ಜೀವನದ ಉದ್ದೇಶವನ್ನು ಮುಟ್ಟಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಡಾಽಽ ಸಂಗೀತಾ ಋಂ ಕಾರ್ಯದರ್ಶಿ ಮಾತನಾಡುತ್ತಾ ಹೆಣ್ಣು ಮಗುವಿನ ಬೆಳವಣಿಗೆ ಗರ್ಭದಿಂದ ಗೋರಿಯವರೆಗೆ ಸಹಾಸಕರ ಪ್ರತಿ ಹೆಜ್ಜೆಯಲ್ಲಿಯೂ ಹಲವಾರು ತೊಂದರೆಗಳನ್ನು ಎದುರಿಸುತ್ತಾ ಬೆಳೆಯುತ್ತಾರೆ. ಹಾಗಾಗಿಯೇ ಬೇಟಿ ಪಚವೋ ಬೇಟಿ ಪಡಾವೋ ಯೋಜನೆಯ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಜೊತೆಗೆ 500 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು  ಆವರಣದಲ್ಲಿ  ಪಾಲ್ಗೊಂಡಿದ್ದರು.