ಕೆಎಲ್‌ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

World Environment Day celebrated on the premises of KLE Educational Institute

ಕೆಎಲ್‌ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ 

ಮಾಂಜರಿ, 05 : ಇಂದಿನ ದಿನಗಳಲ್ಲಿ ಮಾನವ ಚಟುವಟಿಕೆಗಳಿಂದ ಉಂಟಾಗುತ್ತಿರುವ ಪರಿಸರ ಹಾನಿಯ ಪ್ರಮಾಣ ಹೆಚ್ಚುತ್ತಿರುವುದರಿಂದ, ನವೀನ ಹಾಗೂ ಪರಿಣಾಮಕಾರಿ ಪರಿಸರ ನೀತಿಗಳ ಅಗತ್ಯವೇನು ಎಂಬ ಪ್ರಶ್ನೆಗೆ ನಾವು ತಕ್ಷಣ ಉತ್ತರ ಹುಡುಕಬೇಕಾಗಿದೆ. ಭಾರತದಲ್ಲಿ ಹಾಗೂ ಕರ್ನಾಟಕದಂತಹ ರಾಜ್ಯಗಳಲ್ಲಿ ಪರಿಸರ ಸಂಬಂಧಿತ ನೀತಿಗಳನ್ನು ಸಮಗ್ರವಾಗಿ ಪರಿಗಣಿಸಿ, ಶಾಶ್ವತ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ಪಶುಪಕ್ಷಿ, ಹಕ್ಕಿಗಳು, ಸಸ್ಯ ಸಂಪತ್ತುಗಳ ನಾಶವು ವೇಗವಾಗಿ ನಡೆಯುತ್ತಿದೆ. ಕರ್ನಾಟಕದ  ಅರಣ್ಯ ಪ್ರದೇಶಗಳು ಮತ್ತು ನದೀ ತೀರಗಳ ಬಳಿಯ ಜೈವ ವೈವಿಧ್ಯತೆ ಅತ್ಯಂತ ಅಪಾಯದಲ್ಲಿದೆ. ದೇಶದ ಮಟ್ಟದಲ್ಲಿ ಸುಮಾರು 25ಅ ಜೈವವೈವಿಧ್ಯತೆ ಕೊರತೆಯು ಕಂಡುಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಈ ಪ್ರಮಾಣವು ಇನ್ನಷ್ಟು ಭಯಾನಕವಾಗಿದೆ. ನಾವು ತಕ್ಷಣ ಇವುಗಳ ಸಂರಕ್ಷಣೆಗೆ ಮುಂದಾಗದೆ ಹೋದರೆ ಪರಿಸರ ಸಮತೋಲನವೇ ಕುಸಿಯಬಹುದು. ಎಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಪ್ರಭಾಕರ್ ಕೋರೆ ಹೇಳಿದರು 

ಅವರು ಗುರುವಾರರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿನಟ್ಟಿ ಮಾತನಾಡುತ್ತಿದ್ದರು 

ಪ್ರತಿವರ್ಷ ನಮ್ಮ ದೇಶದಲ್ಲಿ 400 ಮಿಲಿಯನ್ ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಅದರಲ್ಲೂ ಸುಮಾರು 11 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರಗಳಲ್ಲಿ ಸೇರುತ್ತಿದೆ ಎಂಬ ಅಂದಾಜು ಇದೆ. 

ಈ ಕಾರಣದಿಂದ ಪ್ಲಾಸ್ಟಿಕ್ ಮಾಲಿನ್ಯ ನಮ್ಮ ಕಾಲದ ಗಂಭೀರ ಪರಿಸರ ಸಮಸ್ಯೆಯಾಗಿದೆ. ಈ ಥೀಮ್‌ನ ಉದ್ದೇಶ ವ್ಯಕ್ತಿಗಳು, ಸಮುದಾಯಗಳು, ಕೈಗಾರಿಕೆಗಳು ಹಾಗೂ ಸರ್ಕಾರಗಳು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ತ್ಯಜಿಸುವ ವಿಧಾನಗಳ ಬಗ್ಗೆ ಪುನರಾಲೋಚನೆ ಮಾಡಲು ಪ್ರೇರೇಪಿಸುವುದಾಗಿದೆ. 

2025ರ ವೇಳೆಗೆ, ಭಾರತವು ಗಂಭೀರವಾದ ಪ್ಲಾಸ್ಟಿಕ್ ಮಾಲಿನ್ಯದ ಸಂಕಷ್ಟವನ್ನು ಎದುರಿಸುತ್ತಿದೆ. ಪ್ರತಿ ವರ್ಷ 3.5 ಮಿಲಿಯನ್ ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸಲಾಗುತ್ತಿದ್ದು, ಇದರ ಬಹುಪಾಲು ಸಂಗ್ರಹವಾಗದೇ ಅಥವಾ ತಕ್ಕಮಟ್ಟಿಗೆ ನಿರ್ವಹಣೆ ಆಗದೆ ಉಳಿಯುತ್ತದೆ.ವಿಶೇಷವಾಗಿ ನಗರ ಪ್ರದೇಶಗಳು ಏಕಬಾರಿಯ ಪ್ಲಾಸ್ಟಿಕ್‌ನಿಂದ ನೀರಿನ ಕಾಲುವೆಗಳು ತಡೆದುಕೊಳ್ಳುವುದು, ಜಲಮೂಲಗಳು ಮಾಲಿನ್ಯಗೊಳ್ಳುವುದು ಮತ್ತು ವನ್ಯಜೀವಿಗಳಿಗೆ ಹಾನಿಯುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೆಲವೊಂದು ಏಕಬಾರಿ ಪ್ಲಾಸ್ಟಿಕ್ ವಸ್ತುಗಳ ದೇಶವ್ಯಾಪ್ತಿ ನಿಷೇಧ ಮತ್ತು ಜಾಗೃತಿ ಹೆಚ್ಚಾದರೂ, ಪಾಲನೆಯಲ್ಲಿನ ಅಸ್ಥಿರತೆ ಮತ್ತು ಪುನರ್ ಬಳಕೆಗೆ ಮೂಲಸೌಕರ್ಯದ ಕೊರತೆ ದೊಡ್ಡ ಸಮಸ್ಯೆಯಾಗಿ ಉಳಿದಿವೆ.ನಿರ್ದಿಷ್ಟ ಪರಿಸರ ಸಮಸ್ಯೆಯನ್ನು ಹೈಲೈಟ್ ಮಾಡಲು ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಗೆ ನಿರ್ದಿಷ್ಟ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. 2025 ರ ವಿಶ್ವ ಪರಿಸರ ದಿನದ ಥೀಮ್ 'ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು'. 2025 ರ ವಿಶ್ವ ಪರಿಸರ ದಿನದ ಘೋಷವಾಕ್ಯವೆಂದರೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿ ಸುಸ್ಥಿರತೆಯನ್ನು ಅಳವಡಿಸಿಕೊಳ್ಳುವುದು. ಬಹು  ಮುಖ್ಯವಾಗಿದೆ ಎಂದು ಡಾ ಪ್ರಭಾಕರ್ ಕೋರೆ ಹೇಳಿದರು  

ಈ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಜ್ಯೋತಿ ತಮ್ಮ ಗೌಡ ಬಿಎಸ್ ಅಂಬಿ ಕೆ ಬಿ ಶಿಂಧೆ ಪಾರ್ಥ ಸಾರಥಿ ನಂದಾ ಶ್ರೀಮತಿ ಮಹುವಾ ಎಂ ಎಸ್ ಕಾನಡೆ ವಿ ಡಿ ನಾಯ್ಕ್‌ ಎಸ್ ಬಿ ಕುಂಬಾರ್ ಎಸ್ ಎಸ್ ನಿಡಗುಂದೆ ವಿನಾಯಕ್ ಪಾಟೀಲ್ ಅಕ್ಷತಾ ಮನೆ ಸಂತೋಷ್ ಹಿರೇಮಠ ಬಿಎಸ್ ಜಕಾತಿ ಎಸ್ ಡಿ ಮನೆ ಮಹಾಂತೇಶ್ ಮೈಶಾಳೆ ಎಸ್ ಕೆ ಕಾಂಬಳೆ ಎಂ ಆರ್ ನಾಗರಾಜ್ ಎಂ ಎಸ್ ಸಾಳುಕೆ ಎ ಡಿ ಜಾದವ್ ಪಿ ಎ ಡಿಗ್ಗೆವಾಡಿ ಜಿ ಪಿ ಕಾಂಬಳೆ  ಎ ಎಸ್ ಶಿರಗಾವಿ ಟಿ ಎಸ್ ಬಾಕಳೆ ಸರೋಜಿನಿ ಬಾಕಳೆ ಹಾಗೂ ಇನ್ನಿತರ ಶಿಕ್ಷಕರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಹಾಜರಿದ್ದರು