ಧಾರವಾಡ 11: ಕನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಹೊಸದಾಗಿ ನೇಮಕಗೊಂಡ ಅಭಿಯಂತರರುಗಳಿಗೆ 30 ದಿನಗಳ ಕಡ್ಡಾಯ ತರಬೇತಿಯನ್ನು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡದಲ್ಲಿ ದಿ. 05 ರಿಂದ 04 ರವರೆಗೆ ಹಮ್ಮಿಕೊಳ್ಳಲಾಗಿದೆ.
ಸದರಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಕ:11.06.2025ರಂದು ಕೈಗೊಳ್ಳಲಾಗಿದೆ. ಮೊದಲು ಜಲ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ತರಬೇತಿ ಸಂಯೋಜಕರಾದ ಪ್ರೊ. ಬಿ. ವೈ. ಬಂಡಿವಡ್ಡರ ಇವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಈ 30 ದಿನದ ತರಬೇತಿಯಲ್ಲಿ ಇಂಜೀನೀಯರುಗಳಿಗೆ ತಾಂತ್ರಿಕ ಹಾಗೂ ಆಡಳಿತ ವಿಷಯಗಳಲ್ಲದೇ ಕೃಷಿಗೆ ಸಂಬಂಧಪಟ್ಟ ವಿಷಯಗಳು, ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಕಾಯ್ದೆಗಳು, ನೀರಾವರಿ ನಿರ್ವಹಣೆಯಲ್ಲಿ ಸಹಭಾಗಿತ್ವದ ಮಹತ್ವ, ಉಸ್ತುವಾರಿ ಮತ್ತು ಮೌಲ್ಯಮಾಪನ ಹಾಗೂ ಅಭಿಯಂತರರ ಪಾತ್ರ, ಮಣ್ಣಿನ ಆರೋಗ್ಯ ಮತ್ತು ಪರೀಕ್ಷೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಏಅಖಖ), ಕರ್ನಾಟಕ ಆರ್ಥಿಕ ಸಂಹಿತೆ (ಏಈಅ), ಖಜಾನೆ-2, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಊಖಒಖ), ಮಾಹಿತಿ ಹಕ್ಕು ಅನಧಿನಿಯಮ (ಖಖಿಋ), ಇಲಾಖಾ ವಿಚಾರಣೆಗಳು, ವ್ಯಕ್ತಿತ್ವ ಅಭಿವೃದ್ಧಿ, ಸಮಯ ಹಾಗೂ ಒತ್ತಡ ನಿರ್ವಹಣೆ ವಿಷಯಗಳು, ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ಕೈಕೊಳ್ಳಲಾಗಿದೆ.
ಆಣೆಕಟ್ಟುಗಳ ನಿರ್ವಹಣೆ, ಸೂಕ್ಷ್ಮ ನೀರಾವರಿ ಯೋಜನೆಯ ಸಂಪೂರ್ಣ ವಿನ್ಯಾಸ ಮತ್ತು ಸವಳು-ಜವಳು ಭಾದಿತ ಸಮಸ್ಯಾತ್ಮಕ ಮಣ್ಣುಗಳ ನಿರ್ವಹಣೆಗಾಗಿ ಅಂತರ ಬಸಿಗಾಲುವೆ ಅಳವಡಿಸಿರುವ ಕ್ಷೇತ್ರಗಳಿಗೆ ಕ್ಷೇತ್ರ ಭೇಟಿಗಳನ್ನು ಕೂಡ ಕೈಕೊಳ್ಳಲಾಗಿದೆ. ಈ ಎಲ್ಲ ವಿಷಯಗಳೊಂದಿಗೆ ಅಭಿಯಂತರುಗಳ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಮಹತ್ವ ಕೊಟ್ಟು, ಸರ್ವರನ್ನೂ ಉತ್ತಮ ಸಂಭಾಷಣಗಾರರನ್ನಾಗಿಸುವುದಲ್ಲದೆ ಕ್ಷೇತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಕಾರ್ಯತತ್ಪರರನ್ನಾಗಿಸಲಾಗುತ್ತದೆ ಎಂದರು.ನಂತರ ಉದ್ಘಾಟಕರಾದ ಡಾ. ಶಿವಕುಮಾರ ಕೆ.ಎ.ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಮಾಜಿಕ ಅರಣ್ಯ ವಿಭಾಗ, ಧಾರವಾಡ ಇವರು ಮಾತನಾಡಿ ಸದರಿ ತರಬೇತಿಯು ಹೊಸದಾಗಿ ನೇಮಕಗೊಂಡ ಅಭಿಯಂತರರಿಗೆ ಅವಶ್ಯಕವಾಗಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಮ್ಮ ಸ್ವಂತ ಅನುಭವಗಳೊಂದಿಗೆ ಅಭಿಯಂತರರುಗಳಿಗೆ ಕಿವಿ ಮಾತು ಹೇಳಿದರು. ಅವರ ಮಾತನ್ನು ಮುಂದುವರಿಸುತ್ತ ನಾವು ತರಬೇತಿಯಲ್ಲಿ ಬೋಧಿಸುವ ವಿಷಯಗಳನ್ವಯ ಮಾಹಿತಿ ಪಡೆದುಕೊಂಡು ದಿನನಿತ್ಯ ಕೆಲಸಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಶಿಬಿರಾರ್ಥಿಗಳ ಉತ್ಸಾಹವನ್ನು ನೋಡಿ ನಾನು ಕೂಡಾ ಒಂದು ಗಂಟೆ ಬಿಡುವಿನ ಸಮಯದಲ್ಲಿ ಮಾರ್ಗದರ್ಶನ ನೀಡುತ್ತೇನೆ ಎಂದು ತಿಳಿಸಿದರು.
ತದನಂತರ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ಗೀರೀಶ ಎನ್ ಮರಡ್ಡಿ ಯವರು ಮಾತನಾಡಿ ಹೊಸದಾಗಿ ನೇಮಕಗೊಂಡ ಅಭಿಯಂತರರುಗಳಿಗೆ ತರಬೇತಿಯು ಅವಶ್ಯವಾಗಿದ್ದು, ಇಲಾಖೆಯ ಕಾನೂನಿನ ಚೌಕಟ್ಟಿನ ಅಡಿ ಕೆಲಸಗಳನ್ನು ಕೈಗೊಂಡು ಸರ್ವಜನಿಕರಿಗೆ ಅನುಕೂವಾಗುವಂತೆ ನಿರ್ವಹಣೆ ಮಾಡಲು ತಮ್ಮ ವೃತ್ತಿ ಜೀವನದ ಅನುಭವಗಳ ಉದಾಹರಣೆಯೊಂದಿಗೆ ತಿಳಿಸಿದರು. ತರಬೇತಿಯ ಸಮಯದಲ್ಲಿ ಅಭಿಯಂತರರು ಪಾಲಿಸಬೇಕಾದ ನಿಯಮಗಳ ಕುರಿತು ತಿಳಿಸಿಕೊಟ್ಟರು. ಅಭಿಯಂತರರರು ಈ 30 ದಿನಗಳ ತರಬೇತಿಯಲ್ಲಿ ಎಲ್ಲಾ ವಿಷಯಗಳ ಕುರಿತು ಕೂಲಂಕುಷವಾಗಿ ತಿಳಿದುಕೊಂಡು ತಮ್ಮ ತಮ್ಮ ಕೇತ್ರ ವ್ಯಾಪ್ತಿಯಲ್ಲಿ ಬರುವ ಕೆಲಸಗಳ ನಿರ್ವಹಣೆ ಮಾಡಲು ಸರ್ವ ಸನ್ನದ್ದರಂತೆ ಇರಬೇಕು ಎಂದು ತಿಳಿಸಿಕೊಟ್ಟರು. ಮುಂದುವರೆದು ಎಲ್ಲಾ ಅಭಿಯಂತರರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ನೀರು ಬಳಕೆದಾರರ ಸಹಕಾರ ಸಂಘಗಳ ರಚನೆ, ಪುನಃಶ್ಚೇತನಗೊಳಿಸುವ ಕುರಿತು ಕ್ರಮಕೈಗೊಂಡು, ಕೊನೆಯ ಹಂತದ ರೈತನಿಗೆ ನೀರು ತಲುಪಿದಾಗ ಮಾತ್ರ ಸರ್ಕಾರ ಹಮ್ಮಿಕೊಂಡ ಈ ತರಬೇತಿಯು ಯಶಸ್ವಿಗೊಂಡಹಾಗೆ ಎಂದು ತಿಳಿಸಿದರು.ತರಬೇತಿಯ ಸಹ ಸಂಯೋಜಕರು ಶ್ರೀ ಚಂದ್ರ್ಪ ಓಲೇಕಾರ ಇವರು ಸ್ವಾಗತಿಸಿದರು ಹಾಗೂ ಫಕ್ಕಿರೇಶ ಅಗಡಿ ವಂದಿಸಿದರು. ಅನುರಾಧಾ ಮಳಗಿ ಕಾರ್ಯಕ್ರಮವನ್ನು ನಿರೂಪಿಸಿದರು.