ಶಿಗ್ಗಾವಿ 26: ಪಟ್ಟಣದ 16, 17, 18 ನೇ ವಾರ್ಡುಗಳಲ್ಲಿ ಹಾದು ಹೋಗಿದ್ದ 33 ಕೆ ವಿ ವಿದ್ಯುತ್ ಸಂಪರ್ಕ ಜಾಲ ಅಲ್ಲಿನ ನೂರಾರು ವಾಸಿಗಳಿಗೆ ಅಪಾಯ ತಂದೊಡ್ಡುವ ಹಂತದಲ್ಲಿತ್ತು ಅದನ್ನು ಸುಮಾರು 33 ಲಕ್ಷ ವೆಚ್ಚದಲ್ಲಿ ಪುನರ್ ಕಾಮಗಾರಿ ನಿರ್ಮಾಣ ಮಾಡಿ ಮಾರ್ಗ ಬದಲಾಯಿಸಲಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು. ಪಟ್ಟಣದ ಹೊರವಲಯದಲ್ಲಿ ವಿದ್ಯುತ್ ಸಂಪರ್ಕ ಜಾಲದ ಮಾರ್ಗ ಬದಲಾವಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಸಂದರ್ಭದಲ್ಲಿ ರಿಯಾಜ್ ಅಹ್ಮದಸಾಬ್ ಹುಲಗೂರ, ಮಕಬುಲ್ಸಾಬ್ ಜಮಾದಾರ, ಮುಕ್ತಾರ ಮಿಯಾನವರ, ಮುನಾಫ ದಖನಿ, ಖಾಜಾ ಜೂಡಿಗಾರ, ಹಜರೆಸಾಬ್ ಮತ್ತಿಕಟ್ಟಿ, ಅದ್ದು ಸಾನಗಾರ, ಶಫಿ ಸಂಶಿ, ಸೇರಿದಂತೆ ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.