ಕಾರವಾರ 11: ಜಿಲಾ ್ಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ‘ಬಾಲಮಂದಿರ ಪ್ರೌಢಶಾಲೆಯಲ್ಲಿ’ “ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಅದರ ನಿಯಂತ್ರಣ” ಕುರಿತು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು.
ಜಿಲ್ಲಾತಂಬಾಕು ನಿಯಂತ್ರಣ ಕೋಶದಜಿಲ್ಲಾ ಸಮಾಜ ಕಾರ್ಯಕರ್ತರಾದ ಜಿ. ಎಮ್. ನದಾಫ್ರವರು ಆಗಮಿಸಿ, “ತಂಬಾಕು ಸೇವನೆಯುಆರೋಗ್ಯದ ಮೇಲೆ ಅತ್ಯಂತಕೆಟ್ಟ ಪರಿಣಾಮ ಬೀರುತ್ತಿದ್ದು, ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗಿತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ತಂಬಾಕು ಮತ್ತುಅದರ ಉತ್ಪನ್ನಗಳಿಂದ ದೂರವಿದ್ದುಆರೋಗ್ಯವಂತರಾಗಿರಬೇಕು” ಎಂದುಅವರು ನುಡಿದರು. ಹಾಗೂ ಈಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಸಚಿತ್ರ ವಿವರಣೆ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಅರಿವು ಮೂಡಿಸಿದರು. ನಂತರಎಲ್ಲರಿಂದ ಪ್ರಮಾಣ ವಚನ ಬೋಧಿಸಲಾಯಿತು.ಆರಂಭದಲ್ಲಿ ಬಾಲಮಂದಿರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರತ್ನಾಕರಎಸ್. ಮಡಿವಾಳ ಎಲ್ಲರಿಗೂ ಸ್ವಾಗತಕೋರಿದರು.ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ, “ವಿದ್ಯಾರ್ಥಿಗಳು ಮಾಧಕ ವಸ್ತುಗಳ ದಾಸರಾಗದೇತಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ನುಡಿದರು.ಈ ಕಾರ್ಯಕ್ರಮದಲ್ಲಿಆರೋಗ್ಯಇಲಾಖೆಯ ಸಿಬ್ಬಂದಿ ಚಿತ್ರಾನಂದ ಹಾಗೂ ಬಾಲಮಂದಿರ ಪ್ರೌಢಶಾಲೆಯ ಶಿಕ್ಷಕಿಯರಾದ ಗೀತಾ ಇ. ಐಸಾಕ್, ತೀರ್ಥಾ ಪಿ.ಕಾಮತ, ಶ್ರೀಮತಿ ಅನುರಾಧಾಆರ್.ಬಾಂದೂಡಕರ, ಹನಿಫಾಬಿ ಎ. ಶೇಖ್, ಕು. ವಿಜೇತಾ ವಿ. ಹರೇ್ಲಕರ, ಆರ್.ಡಿ. ನೀರಾವರಿ, ಕೋಮಲ ಎಸ್. ಮನಕನೆ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.