ಬಿ. ಶ್ರೀರಾಮುಲುಗೆ ಬಿಜೆಪಿಯಿಂದ ಅಗೌರವ : ಡಾ. ಕೆ.ಎನ್‌.ಪಾಟೀಲ್‌

B. Sriramulu disrespected by BJP: Dr. K.N.Patil

ಬಿ. ಶ್ರೀರಾಮುಲುಗೆ ಬಿಜೆಪಿಯಿಂದ ಅಗೌರವ : ಡಾ. ಕೆ.ಎನ್‌.ಪಾಟೀಲ್‌

ಕೊಪ್ಪಳ  25: ವಾಲ್ಮೀಕಿ ಸಮಾಜದ ಹಾಗೂ ಹಿಂದುಳಿದ ವರ್ಗಗಳ ಜನನಾಯಕ ಬಿ. ಶ್ರೀರಾಮುಲು ರವರಿಗೆ ಬಿಜೆಪಿ ಪಕ್ಷ ಅಗೌರವದಿಂದ ನಡೆಸಿಕೊಂಡಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕೊಪ್ಪಳ ಜಿಲ್ಲಾಧ್ಯಕ್ಷ ಡಾ. ಕೆ.ಎನ್ .ಪಾಟೀಲ್ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಶ್ರೀರಾಮುಲು ರವರು1999ನೇ ಇಸವಿಯಿಂದ ಇಲ್ಲಿಯವರಿಗೆ ಸುಮಾರು 30 ವರ್ಷಗಳ ಕಾಲ ಸಾಮಾನ್ಯ ಕಾರ್ಯಕರ್ತನಿಂದ ಶಾಸಕ, ಸಚಿವ, ಸಂಸದ ಪದವಿಗಳನ್ನು ಪರಿಪೂರ್ಣವಾಗಿ ನಿಭಾಯಿಸಿಕೊಂಡು ಕಳಂಕ ರಹಿತ ಆಡಳಿತ ಪಕ್ಷನಿಷ್ಠೆಯಿಂದ ಕಾರ್ಯ ನಿರ್ವಹಿಸಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ವಾಲ್ಮೀಕಿ ನಾಯಕ ಸಮಾಜದ ಮತಗಳನ್ನು ಒಟ್ಟುಗೂಡಿಸಿ ಸಮರ್ಥವಾಗಿ ಪಕ್ಷ ಕಟ್ಟುವಲ್ಲಿ ಶ್ರೀರಾಮುಲುರವರ ಪಾತ್ರವಹಿಸಿ ಯಶಸ್ವಿಯಾದರು ಹಾಗೂ ಈಗಿರುವ ಮುಖಂಡರು  ಮರೆತಿರಬಹುದು ಬಿ.ಎಸ್‌. ಯಡಿಯೂರ​‍್ಪ ಅವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಶ್ರೀರಾಮುಲು ರವರು ಇದ್ದರು.  

2018ರ ಚುನಾವಣೆಯಲ್ಲಿ ಶ್ರೀರಾಮುಲುರವರು ಕಾಲಿಗೆ ಚಕ್ರ ಕಟ್ಟಿಕೊಂಡು ಸುಮಾರು 86 ಕ್ಷೇತ್ರಗಳಲ್ಲಿ ಸುತ್ತಾಡಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಕಾರಣ ಬಿ. ಶ್ರೀರಾಮುಲುರವರಾಗಿದ್ದರು ಹಾಗೂ ವಾಲ್ಮೀಕಿ ಸಮಾಜಕ್ಕೆ ಉಪಮುಖ್ಯಮಂತ್ರಿ ಸ್ಥಾನದ ಆಸೆ ತೋರಿಸಿ ಮೋಸ ಮಾಡಿದರೂ ಸಹ ತಾಳ್ಮೆ ಕಳೆದುಕೊಳ್ಳದೆ ಪಕ್ಷ ಕೊಟ್ಟ ಕೆಲಸವನ್ನು ಚಾಚು ತಪ್ಪದೆ ಮಾಡುತ್ತ ಬಂದಿದ್ದಾರೆ ಆದ್ದರಿಂದ ಬಿಜೆಪಿ ಪಕ್ಷದ ಹೈಕಮಾಂಡ್‌ರವರು  ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರಲು ಮೂರನೇ ಸ್ಥಾನದಲ್ಲಿರುವ ವಾಲ್ಮೀಕಿ ಸಮುದಾಯದ ಅವಶ್ಯಕತೆ ಇದೆ ಹಾಗೂ ಬಿ. ಶ್ರೀರಾಮುಲುರವರ ಸಂಘಟನೆಯು ಬೇಕಾಗಿದೆ, ಆದ್ದರಿಂದ ಬಿ. ಶ್ರೀರಾಮುಲುರವರನ್ನು ಕರ್ನಾಟಕ ರಾಜ್ಯದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಹಾಗೂ ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ನೇಮಕ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದ ಅವರುಶಾಸಕ ಜಿ ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ರವರಿಗೆ ಹಗುರವಾಗಿ ಅವಮಾನಕರವಾಗಿ ಮಾತನಾಡಿದ್ದನ್ನು ವಾಲ್ಮೀಕಿ ಸಮುದಾಯ ಖಂಡಿಸುತ್ತದೆ, ವಾಲ್ಮೀಕಿ ಸಮುದಾಯದ ಯಾವುದೇ ವ್ಯಕ್ತಿಗೆ ಅನ್ಯಾಯವಾದರೆ ಸಮುದಾಯ ಅವರ ಬೆನ್ನಿಗೆ ನಿಲ್ಲುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರಾದ ಶರಣಪ್ಪ ನಾಯಕ್, ಸುರೇಶ್ ಡೊಣ್ಣಿ, ಜೋಗದ ನಾರಾಯಣಪ್ಪ, ವೀರಭದ್ರ​‍್ಪ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.