ಕಾರವಾರ 10: ರಾಮ ಮಂದಿರ ನಿರ್ಮಾಣ, ಕಾಶಿ ಅಭಿವೃದ್ಧಿ, ಹೊಸ ಲೋಕಸಭಾ ಕಟ್ಟಡ ಕಟ್ಟಿದ್ದು, 33 ಮಹಿಳಾ ಮೀಸಲಾತಿ ಕಾನೂನು,ಜಿಎಸ್ ಟಿ ಜಾರಿ ಎಲ್ಲವೂ ಬಿಜೆಪಿ ಸಾಧನೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು. ಮೋದಿ ಸರ್ಕಾರಕ್ಕೆ 11 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರವಾರದ ಪತ್ರಿಕಾ ಭವನದಲ್ಲಿ ಮಂಗಳವಾರಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ವಿಕಸಿತ ಭಾರತದ ಕಲ್ಯಾಣದ ಗುರಿಯಲ್ಲಿ ಮೋದಿಸರ್ಕಾರಕ್ಕೆ ಹನ್ನೊಂದು ವರ್ಷ ಅಗಿದೆ. ಬಡವರಿಗಾಗಿ ಎಲ್ಲಾ ಮಾಡಿದ್ದೇವೆ ಎಂದ ಅವರು ಅಮೃತ ಕಾಲದ ಸಂಗತಿಗಳನ್ನು ವಿವರಿಸಿದರು. 2047 ಕ್ಕೆ ತಲುಪುವ ಹೊತ್ತಿಗೆ ಏನೇನು ಮಾಡಬೇಕೆಂದು ಸಹ ಪಕ್ಷದಲ್ಲಿ ಚರ್ಚೆಯಾಗಿದೆ. ಮೋದಿ ಜಗತ್ತಿಗೆ ನೇತೃತ್ವ ಕೊಟ್ಟ ಕಾರಣ ಬಿಜೆಪಿಗೆ ಗರ್ವ ಇದೆ. ಎನ್. ಡಿ. ಎ.ಗೆ ಅಭಿಮಾನ ಇದೆ ಎಂದರು.
2014 ರಲ್ಲಿ ನಾವು ಅಧಿಕಾರಕ್ಕೆ ಬಂದೆವು. ಸಬ್ ಕಾ ಸಾತ್, ಸಬ್ ಕಾ ವಿಶ್ವಾಸ, ಸಬ್ ಕಾ ವಿಕಾಸ್ ಎಂಬಂತೆ 140 ಕೋಟಿ ಜನರನ್ನು ನಾವು ತಲುಪಿದ್ದೇವೆ. ಯಾರನ್ನು ಬೇಧ ಭಾವ ಮಾಡಿಲ್ಲ. ಯಾರನ್ನು ತುಷ್ಠಿಕರಣ ಮಾಡಿಲ್ಲ ಎಂದರು. ದೇಶ ಮೊದಲು, ದೇಶಕ್ಕಾಗಿ ನಾವು ಎಂಬುದನ್ನು ಬಿಂಬಿಸಲು ಯಶಸ್ವಿಯಾಗಿದ್ದೇವೆ. ಇಷ್ಟು ದಿನ ಇದನ್ನು ಮೂಡಿಸಲು ಹಿಂದೆ ಅಧಿಕಾರದಲ್ಲಿದ್ದವರು ವಿಫಲರಾದ ಕಾರಣ ಅಭಿವೃದ್ಧಿ ಗೆ ಹಿನ್ನೆಡೆಯಾಯಿತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಸರಿಯಾಗಿದೆ ಎಂದು ಸಂಸದ ಕಾಗೇರಿ ಹೇಳಿದರು.ಬಡವರ ಕಲ್ಯಾಣಕ್ಕಾಗಿ ಆದ್ಯತೆ ಯಿಂದ ಕೆಲಸ ಮಾಡಿದ್ದೇವೆ. ಸುಶಾನ ತಂದಿದ್ದೇವೆ. ರೈತರಿಗೆ ಸಹಾಯ ಮಾಡಿದ್ದೇವೆ. ಸಮುದಾಯದ ಒಳಿತಿಗೆ ಕೆಲಸ ಮಾಡಿದ್ದೇವೆ ಎಂದರು.ಜಗತ್ತಿಗೆ ಭಾರತದ ಶಕ್ತಿ ಗೊತ್ತಾಗಿದೆ ಎಂದರು. ಹಗರಣಗಳ ಸರಮಾಲೆ ದೇಶ: ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಭಾರತ ಭಿಕ್ಷುಕರ ದೇಶ,ಬಡವರ ದೇಶ,ಭ್ರಷ್ಟಾಚಾರದ ದೇಶ ಎಂದು ಇತರೆ ದೇಶಗಳು ಹೇಳುತ್ತಿದ್ದವು. ಈಗ ಅದು ಬದಲಾಗಿದೆ.ಸೈನ್ಯದ ಶಕ್ತಿ ಹೆಚ್ಚಿದೆ :ಸೈನ್ಯದ ಶಕ್ತಿ ಹೆಚ್ಚಿದೆ.
ಪೆಹಲ್ಗಾಮ್ ನಂತರ ನಾವು ಯುದ್ಧ ಗೆದ್ದು, ಅಪರೇಶನ್ ಸಿಂಧೂರದಲ್ಲಿ ಸಾಧನೆ ಮಾಡಿದ್ದೇವೆ ಎಂದರು ಬಾಂಬ್ ಸ್ಪೂಟದ ಘಟನೆ ಕಡಿಮೆಯಾಗಿವೆ ಎಂದರು. ಇದಕ್ಕೆ ಎನ್ ಡಿ ಎ ಸರ್ಕಾರ ಕಾರಣ ಎಂದರು.ಆರ್ಥಿಕವಾಗಿ ಸಬಲರಾಗಿದ್ದೇವೆ. ಈಗ ನಾವು ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿದ್ದೇವೆ ಎಂದು ಸಂಸದ ಕಾಗೇರಿ ಬಣ್ಣಿಸಿದರು.ಮೋದಿ ಇದಕ್ಕೆ ಕಾರಣ. ದೇಶದ ಬಡತನ ರೇಖೆಯಿಂದ 26 ಕೋಟಿ ಜನ ಮೇಲೆ ಬಂದಿದ್ದಾರೆ ಎಂದು ಸಂಸದ ಕಾಗೇರಿ ನುಡಿದರು. ರಾಷ್ಟ್ರೀಯ ಸಂಘದ ವಿಚಾರಗಳು ಗ್ರಾಮ ಮಟ್ಟಕ್ಕೆ ಒಯ್ದಿದ್ದೇವೆ.ಜನರಿಗೆ 14 ವಿಷಯ ತಲುಪಲು ಯತ್ನಿಸುತ್ತೇವೆ.ನಾರಿ ಶಕ್ತಿ ಸಬಲತೆ, ವ್ಯವಹಾರ ಸರಳ ಮಾಡುವುದು, ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.10.33 ಕೋಟಿ ಜನರಿಗೆ ಉಜ್ವಲ ಗ್ಯಾಸ್, ಬಡವರಿಗೆ ಮನೆ, ಜಲ ನಿರ್ಮಲ ದಲ್ಲಿ 19 ಕೋಟಿ ಜನರಿಗೆ ತಲುಪಿದೆ. 11 ಕೋಟಿ ರೈತರಿಗೆ ಫಸಲ್ ಭೀಮಾ ತಲುಪಿದೆ ಎಂದರು. ಎಸ್ ಸಿ ಎಸ್ಟಿಗೆ 17 ಸಾವಿರ ಕೋಟಿ ಸಾಲ ನೀಡಿದ್ದೇವೆ ಎಂದರು.ಗರೀಬ್
ಕಲ್ಯಾಣ ಯೋಜನೆಯಲ್ಲಿ 20ಕೋಟಿ ಜನರಿಗೆ ಪಡಿತರ ಕೊಟ್ಟಿದ್ದೇವೆ ಎಂದರು.ಮಾಜಿ ಶಾಸಕ ಸುನೀಲ್, ರೂಪಾಲಿ ನಾಯ್ಕ, ಎನ್.ಎಸ್ .ಹೆಗಡೆ ಕರ್ಕಿ ,ಮಾಜಿ ಅಧ್ಯಕ್ಷ ಎಂ.ಜಿ.ಹೆಗಡೆ, ವೆಂಕಟೇಶ ನಾಯ್ಕ, ವಾಳ್ಕೆ,ರವಿರಾಜ ಅಂಕೋಲೇಕರ್, ಸಂಜಯ್ ಸಾಳುಂಕೆ, ರಾಜೇಂದ್ರ ನಾಯ್ಕ,ಗೋವಿಂದ ನಾಯ್ಕ ಉಪಸ್ಥಿತರಿದ್ದರು