ಕೃಷಿ ಹೊಂಡಕ್ಕೆ ಬಿದ್ದು ಮಗು ಸಾವು

Child dies after falling into farm pond

ಕಾಗವಾಡ 11 : ಕೃಷಿ  ಹೊಂಡಕ್ಕೆ ಬಿದ್ದು ಐದು ವರ್ಷದ ಮಗು ಸಾವಣಪ್ಪಿರುವ ಘಟನೆ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ. ಮನೋಜ್ ಗಿಡ್ಡಪ್ಪ ವಡ್ಡರ (5) ಮೃತ ಬಾಲಕ.

ಆಟವಾಡುವ ವೇಳೆ ಮನೆ ಪಕ್ಕದ ಜಮೀನಿನಲ್ಲಿ ಇದ್ದ ಕೃಷಿ ಹೊಂಡಕ್ಕೆ ಆಯತಪ್ಪಿ ಬಿದ್ದು ಮಗು ಮೃತಪಟ್ಟಿದೆ.ಸ್ಥಳಕ್ಕೆ ಅಥಣಿ ಪೊಲೀಸರು ಭೆಟೀನೀಡಿ ಪರೀಶೀಲನೆ ನಡೆಸಿದರು. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.