ಬಡವರ ಆರೋಗ್ಯ ಕಸಿದುಕೊಂಡ ಕಾಂಗ್ರೆಸ್ ಸರ್ಕಾರ : ಮ್ಯಾಗೇರಿ

Congress government has taken away the health of the poor: Mageri

ಶಿಗ್ಗಾವಿ 29  : ಬಡವರ ಪಾಲಿಗೆ ಜನ ಓಷಧಿ ಕೇಂದ್ರಗಳು ಕಡಿಮೆ ದರದಲ್ಲಿ ಕೈಗೆ ಎಟಕುವ ದರದಲ್ಲಿ ಅನಾರೋಗ್ಯವಂತ ಬಡವರಿಗೆ ಓಷಧಿಗಳು ಸಿಗುತ್ತಿರುವ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನ ಓಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಮಾಡಿರುವ ಕಾಂಗ್ರೆಸ್ ಸರಕಾರ ಬಡವರ ಆರೋಗ್ಯ ಕಸಿದುಕೊಂಡಿದೆ ಎಂದು ಶಿಗ್ಗಾವಿ ನಿಕಟ ಪೂರ್ವ ಬಿಜೆಪಿ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.   

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಒಂದಿಲ್ಲ ಒಂದು ಬಡವರು ಹಾಗೂ ಮಧ್ಯಮ ವರ್ಗದ ಜನರ ಹೊಟ್ಟೆ ಮೇಲೆ ಹೊಡೆಯುತ್ತಾ ಬಂದಿದೆ ದಿನನಿತ್ಯ ಬಳಕೆಯ ಹಾಲು ಡಿಜೇಲ ಸ್ಟಾಂಪು ಹಾಲ್ಕೋಹಾಲು ಬಸ್ ಚಾರ್ಜು ವಿದ್ಯುತ್ ದರ ತೆರಿಗೆ ಸೇರಿ ಹತ್ತು ಹಲವಾರು ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಸಿ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಆಡಳಿತ ಮಾಡುತ್ತಿದ್ದಾರೆ ವಸ್ತುಗಳ ಬೆಲೆ ಇಳಿಸಬೇಕು ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನ ಓಷಧಿ ಕೇಂದ್ರಗಳ ಬಂದ್ ಮಾಡುವ ಆದೇಶ ಹಿಂಪಡೆಯಬೇಕು ಬಡ ರೋಗಿಗಳ ಶಾಪದಿಂದ ವಿಮೋಚನೆ ಆಗಬೇಕೆಂದು ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.