ಕಂಪ್ಲಿ:09 ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಸಹ ಕಾರ್ಯದರ್ಶಿಯಾಗಿ ಕಂಪ್ಲಿ ನಿವಾಸಿ ಡಿ.ಮೌನೇಶ ಆಯ್ಕೆಗೊಂಡಿದ್ದಾರೆ.ಬೆಂಗಳೂರಿನ ಶೇಷಾದ್ರಿಪುರಂ ವಿಶ್ವಕರ್ಮ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ವಿಶ್ವಕಮ ಸಮಾಜದ ಕಚೇರಿಯಲ್ಲಿ ನಡೆದ ಅಧ್ಯಕ್ಷರ, ಪದಾಧಿಕಾರಿಗಳ ಹಾಗೂ ನಿರ್ದೇಶಕರ ಪದಗ್ರಹಣ ಸಮಾರಂಭದಲ್ಲಿ ಸಮಾಜದ ರಾಜ್ಯಾಧ್ಯಕ್ಷ ಈಶ್ವರ ಆಚಾರ್ ಅವರು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಸಹ ಕಾರ್ಯದರ್ಶಿಯಾಗಿ ಡಿ. ಮೌನೇಶ ಆಯ್ಕೆ ಪ್ರಮಾಣ ಪತ್ರ ನೀಡಿದರು ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಉಮೇಶ್ ಆಚಾರ್, ರಾಜ್ಯಾಧ್ಯಕ್ಷ ಈಶ್ವರ ಆಚಾರ್,ಉಪಾಧ್ಯಕ್ಷ ರಾಮಣ್ಣ ಬಡಿಗೇರ ಕಾರ್ಯಧ್ಯಕ್ಷ ಬಾಬು ಪತ್ತಾರ್,ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರ, ಸೇರಿದಂತೆ ಸಮಾಜದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಮುಖಂಡರು ಇದ್ದರು.