ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರೀಶೀಲನಾ ಸಭೆ
ಹಾವೇರಿ 05: ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ ಅದರಂತೆ ಸಂಬಂಧಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರದಿಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ ಎಂ ಹಿರೇಮಠ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿಯು ಕಾಟಾಚಾರಕ್ಕೆ ನೀಡುವಂತಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಬೇಜವಾಬ್ದಾರಿಯನ್ನು ಬಿಟ್ಟು ಆಸಕ್ತಿಯಿಂದ ನಿಖರವಾದ ಮಾಹಿತಿ ಸಲ್ಲಿಸಲು ಕ್ರಮ ವಹಿಸಿಬೇಕು ಎಂದರು. ಶಕ್ತಿ ಯೋಜನೆ : ಜಿಲ್ಲೆಯಲ್ಲಿ ಈ ಯೋಜನೆಯಡಿಯಲ್ಲಿ ಮೇ ಅಂತ್ಯದ ವರೆಗೆ 120.36 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಹಾವೇರಿ ವಿಭಾಗಕ್ಕೆ 86 ನೂತನ ಬಸ್ ಗಳನ್ನು ನೀಡಲಾಗಿದೆ, ಬಸ್ ಗಳ ಅವಶ್ಯಕತೆ ಇದ್ದಲ್ಲಿ ಹೊಸ ಬಸ ಖರೀದಿಗೆ ಟೆಂಡರ್ ಕರೆಯಬೇಕು, ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು, ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ನಿಲ್ದಾಣದಲ್ಲಿ ಖಾಸಗಿ ವಹಾನಗಳ ನಿಲುಗಡೆಗೆ ಸೂಕ್ತ ಪಾಕಿಂರ್ಗ್ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗೃಹ ಜ್ಯೋತಿ ಯೋಜನೆ: ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 4,15,040 ಫಲಾನುಭವಿಗಳು ನೊಂದಣಿ ಮಾಡಿಕೊಂಡಿದ್ದಾರೆ ಇದರಲ್ಲಿ 4,00,769 ನೋಂದಣಿಯಾದವರು ಗೃಹ ಜ್ಯೋತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಅಪಘಾತ ವಲಯಗಳಲ್ಲಿ ಟ್ರಾನ್ಸಫಾರ್ಮ್ ಗಳನ್ನು ಅಳವಡಿಸಿದ್ದೀರಿ ಈ ಬಗ್ಗೆ ದುರುಗಳು ಬರುತ್ತಿದ್ದು ಕೂಡಲೇ ಅವುಗಳನ್ನು ತೆರುವುಗೊಳಿಸಿ ಸೂಕ್ತ ಸ್ಥಳದಲ್ಲಿ ಅಳವಡಿಸಬೇಕು, ವಿದ್ಯತ್ ಕಂಬಗಳು ಹಾಳಾಗಿದ್ದು ಗುಣಮಟ್ಟದ ಕಂಬಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಅನ್ನಭಾಗ್ಯ ಯೋಜನೆ : ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ 3,97,816 ಎಎವೈ ಮತ್ತು ಬಿ ಪಿ ಎಲ್ ಪಡಿತರ ಚೀಟಿಗಳಿದ್ದು ಇದರಲ್ಲಿ 3,63,888 ಪಡಿತರ ಚೀಟಿಗಳು ಡಿ ಬಿ ಟಿ ಗೆ ಅರ್ಹವಿದ್ದು ಡಿಸೆಂಬರ್ 2024 ರ ಮಾಹೆಯ ವರೆಗೆ ಒಟ್ಟು ರೂ. 21.45 ಕೋಟಿ ಮೊತ್ತವನ್ನು ಪವತಿಸಲಾಗಿದೆ ಜನವರಿ 2025 ರ ಮಾಹೆಯ ಡಿ ಬಿ ಟಿ ಹಣ ಪಾವತಿಸುವುದು ಬಾಕಿ ಇದ್ದು, ಫೆಬ್ರವರಿ 2025 ರ ಮಾಹೆಯಿಂದ ಡಿ ಬಿ ಟಿ ನಗದು ಬದಲಾಗಿ 05 ಕೆ ಜಿ ಅಕ್ಕಿಯನ್ನು ವಿತರಿಸಲು ಕ್ರಮವಹಿಸಲಾಗಿದೆ ಫೆಬ್ರವರಿ 2025 ರಿಂದ ಮೇ 2025 ರ ವರೆಗೆ ಒಟ್ಟು 265250.00 ಕ್ವೀಟಲ್ ಅಕ್ಕಿ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲ ಅನಧಿಕೃತ ಪಡಿತರ ಚೀಟಿಗಳು ಹೆಚ್ಚಾಗಿದ್ದು ಇದನ್ನು ತಡೆಯಲು ಕ್ರಮವಹಿಸಬೇಕು ಅನಧಿಕೃತ ಪಡಿತರ ಚೀಟಿಗಳನ್ನು ತೆರವುಗೊಳಿಸಲು ಸರ್ಕಾರ ಹೋರಡಿಸಿರುವ ಮಾನದಂಡನೆಗಳನ್ನು ಅನುಸರಿಸಿ ಒಂದು ಸಮಿತಿ ರಚಿಸಿ ಸಾಧಕ ಬದಕಗಳನ್ನು ಪರೀಶೀಲಿಸಿ ಕ್ರಮ ವಹಿಸುವಂತೆ ಸೂಚಿಸಿದರು. ಹಾಗೆಯೇ ಅನ್ನಭಾಗ್ಯ ಅಕ್ಕಿ ಶೇಖರಣೆಯ ಗೋದಾಮುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುಬೇಕು, ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿಯು ಮಾರಾಟವಾಗುತ್ತಿದ್ದು ಅದನ್ನು ಪತ್ತೆ ಹಚ್ಚಿ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಗೃಹಲಕ್ಷ್ಮಿ ಯೋಜನೆ : ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 69,75,789 ಫಲಾನುಭವಿಗಳ ಸಂಖ್ಯೆ ಹೊಂದಿದ್ದು, ಈ ವರೆಗೆ ರೂ. 1395.51 ಕೋಟಿ ಸಂದಾಯ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಫೆಬ್ರವರಿ ಮತ್ತು ಮಾರ್ಚ್ 2025 ರ ಮಾಹೆಯನ್ನು ಹೊರತುಪಡಿಸಿ ಏಪ್ರಿಲ್ 2025 ರ ವರೆಗೆ ಫಲನುಭಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಆಗಿರುವ ತಾಂತ್ರಿಕ ಸಮಸ್ಯೆಯನ್ನು ಸರಿ ಪಡಿಸಿ ಫೆಬ್ರವರಿ ಮತ್ತು ಮಾರ್ಚ್ ಮಾಹೆಯ ಹಣವನ್ನು ಸಂದಾಯ ಮಾಡಲು ಕ್ರಮ ವಹಿಸುವುದಾಗಿ ತಿಳಿಸಿದರು. ಯುವನಿಧಿ ಯೋಜನೆ : ಜಿಲ್ಲೆಯಲ್ಲಿ ಫೆಬ್ರವರಿ -2025 ರ ಅಂತ್ಯದವರೆಗೆ 7113 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ ಇದರಲ್ಲಿ 5103 ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಫೆಬ್ರವರಿ ಅಂತ್ಯದ ವರೆಗೆ ಒಟ್ಟು ರೂ. 8,89,50,000-00 ವೆಚ್ಚ ಮಾಡಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಫಲನುಭವಿಗಳ ವಿವರ ಪಡೆದು ಅವರಲ್ಲಿ ಕೆಲಸ ಪಡೆದುಕೊಂಡಿರುವವರನ್ನು ಗುರುತಿಸಿ ಅವರನ್ನು ಈ ಯೋಜನೆಯಿಂದ ಮುಕ್ತಗೊಳಿಸಿ ಬೇರೆ ಫಲನುಭವಿಗಳಿಗೆ ಅವಕಾಶ ಮಾಡಿಕೊಡುವ ಕೆಲಸವಾಗಬೇಕು ಎಂದರು. ಇದೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಾದ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಮೈದೂರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.