ಜಿಲ್ಲಾ ಉಸ್ತುವಾರಿ ಸಚಿವರಿಂದ ಡಾ.ಬಿ.ಆರ್‌.ಅಂಬೇಡ್ಕರ ಭವನದ ಭೂಮಿ ಪೂಜೆ

District in-charge minister performs Bhoomi Puja at Dr. B.R. Ambedkar Bhavan

ಕಾಮಗಾರಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ 

ಗದಗ 17:ಡಾ.ಬಿ.ಆರ್‌.ಅಂಬೇಡ್ಕರ್ ಭವನದ ಕಟ್ಟಡವನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಿಸಲು ಸದ್ಭಳಕೆಯಾಗಬೇಕೆಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು ತಿಳಿಸಿದರು. 

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾ0ುತ್ ಸಮಾಜ ಕಲ್ಯಾಣ ಇಲಾಖೆ ತಾಲೂಕು ಆಡಳಿತ, ತಾಲೂಕು ಪಂಚಾ0ುತ್, ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ  ಶಿರಹಟ್ಟಿ ಪಟ್ಟಣದಲ್ಲಿ      ಡಾ. ಬಿ ಆರ್ ಅಂಬೇಡ್ಕರ್ ಭವನದ ಭೂಮಿ ಪೂಜಾ ಸಮಾರಂಭವನ್ನು  ನೆರವೇರಿಸಿ ಅವರು ಮಾತನಾಡಿದರು.    

ಸಮಾಜ ಕಲ್ಯಾಣ ಇಲಾಖೆಯಿಂದ  ಅಂದಾಜು ಮೊತ್ತ 196.88 ಲಕ್ಷ ರೂ ವೆಚ್ಚದಲ್ಲಿ  ಡಾ.ಬಿ.ಆರ್‌. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಿ ಆದೇಶಿಸಲಾಗಿದ್ದು  ಭವನದ ಕಟ್ಟಡ ಕಾಮಗಾರಿಗಳು  ಗುಣಮಟ್ಟದಿಂದ ಕೂಡಿರಬೇಕು ಎಂದು ಸಚಿವರು ತಿಳಿಸಿದರು.     

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ  ಶಿರಹಟ್ಟಿ ಪಟ್ಟಣದ ರಿಂಗ್ ರಸ್ತೆ0ುನ್ನು ಕಾಮಗಾರಿ0ು ಅನುದಾನವನ್ನು 20 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು ಕಾಮಗಾರಿ ಪ್ರಾರಂಭವಾಗಲಿದೆ  ಎಂದರು.       

ಈ ಸಂದರ್ಭದಲ್ಲಿ   ಮಾಜಿ ಸಂಸದರಾದ ಐಜಿ ಸನದಿ, ಮಾಜಿ ಶಾಸಕರು ರಾಮಣ್ಣ ಲಮಾಣಿ, ಗಣ್ಯರಾದ ಶ್ರೀಮತಿ ಸುಜಾತ ದೊಡ್ಮಮನಿ,  ಎಸ್‌ಎನ್ ಬಳ್ಳಾರಿ , ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ್  ಪೋತದಾರ , ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು  ಸಿಬ್ಬಂದಿಗಳು ಹಾಜರಿದ್ದರು