ಚಿಕ್ಕೋಡಿ 06: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಇಲಾಖೆ ಚಿಕ್ಕೋಡಿ ಇವರು ಅಂತರಾಷ್ಟ್ರೀಯ ಪರಿಸರ ದಿನಾಚರಣೆ 2025 ಪ್ರಯುಕ್ತ ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲೀನ್ಯವನ್ನು ಕೊನೆಗೊಳಿಸುವದು. ಈ ವರ್ಷದ ದ್ಯೇಹ ಘೊಷದಂತೆ ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಕುರಿತು ಆಶಾದೀಪ ಕಲಾಕೇಂದ್ರ ಚಿಕ್ಕೋಡಿ ತಂಡದವರಿಂದ ಜಾಗೃತಿ ಹಾಡು ಬೀದಿನಾಟಕ ಪ್ರದರ್ಶನ ನೀಡಿದ ಕಲಾತಂಡದವರು ಪ್ಲಾಸ್ಟಿಕ್ ಬಳಸುವದರಿಂದ ಆರೋಗ್ಯದ ಮೇಲೆ ಆಗುವ ದುಷ್ಪಪರಿಣಾಮಗಳು ಸಾಂಕ್ರಾಮಿಕ ರೋಗಗಳ ದೂರ ಮಾಡಲು ಮನೆ ಸುತ್ತಮುತ್ತ ಹಸಿರು ಪರಿಸರ ಬೆಳೆಸಿ ಬಟ್ಟೆ ಬ್ಯಾಗಗಳನ್ನು ಪ್ರತಿಯೊಬ್ಬರ ಬಳಸುವದು ಪ್ರತಿಯೋಬ್ಬರು ಎಚ್ಚರ ವಹಿಸಿ ಬದುಕಲು ಕಲಾತ್ಮಿಕವಾಗಿ ಪ್ರದರ್ಶನ ನೀಡಿ ಸಾರ್ವಜನಿಕರಿಗೆ ಮನಮುಟ್ಟುವಂತೆ ಅರಿವು ಮೂಡಿಸಲು ಕಲಾತಂಡದವರಿಂದ ಚಿಕ್ಕೋಡಿ ಸ್ಥಳೀಯ ಪಿಡಬ್ಲೂಡಿ ಸಭಾಭವನ ಆವರಣ ಸಂತೆ ಮಾರ್ಕೆಟದಲ್ಲಿ ಹಾಗೂ ಅಂಕಲಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ ನೀಡಿ ಜಾಗೃತಿ ಮೂಡಿಸಿದರು.
ಕಲಾತಂಡದಲ್ಲಿ ಭರತ ಕಲಾಚಂದ್ರ ,ಮಾರುತಿ ಕಾಮಗೌಡಾ, ಪ್ರಕಾಶ ಜನಮಟ್ಟಿ ,ಪುಂಡಲೀಕ ನಾಯಿಕ ,ಸಂತ್ರಾಮ ಮಯೂರ, ಮಹೇಶ ಪಕಾಲೆ, ಅಪ್ಪಾಸಾಹೇಬ ಚಿಮಣೆ, ಸುಜಾತಾ ಮಗದುಮ್ಮ, ಸಾವಿತ್ರಿ ಹಳಕಲ್ಲ ಭಾಗವಹಿಸಿದರು.