ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕೋಳುರ

Environmental protection is our duty: Kolura

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕೋಳುರ 

ಸಿಂದಗಿ 06: ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಆದರೆ ಇಂದಿನ ದಿನಮಾನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬಹುಬೇಗ ಶ್ರೀಮಂತನಾಗಬೇಕೆಂಬ ಹಂಬಲದಿಂದ ಗಿಡ-ಮರಗಳನ್ನು ಕಡಿಯುತ್ತಿದ್ದಾನೆ ಎಂದು ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೋಳುರ ಹೇಳಿದರು. 

 ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಪರಿಸರ ದಿನಾಚರಣೆ ಆಚರಿಸಿ ಮಾತನಾಡಿದ ಅವರು, ನಾವು ಸಾಲುಮರದ ತಿಮ್ಮಕ್ಕನವರ ಹಾಗೆ ಗಿಡ ಬೆಳೆಸಿ ನಾಡಿನ್ನು ಹಸಿರಾಗಿಸೋಣ ಹಾಗೆ ಸಸಿಗಳನ್ನು ನಡೆಸಿ ಅವುಗಳ ರಕ್ಷಣಿ ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದರು. 

ಗಿಡವನ್ನು ರಕ್ಷಿಸಿ ನಾಡು ಉಳಿಸಿ ಎಂಬ ಕೀರು ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಶಿಸಿದರು. ಪವಿತ್ರಾ ಬಾಗೇವಾಡಿ ಪರಿಸರ ಗೀತೆಯನ್ನು ಹಾಡಿದರು. ಸೋನಾಲಿ ಸೂನಾರ ಮಾತನಾಡಿದರು. ಪ್ರಾಚಾರ್ಯೆ ಶಾಹಿನ್ ಶೇಖ್ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.