ನೇಸರಗಿ, 26 : ಮನುಷ್ಯನ ಕಣ್ಣಿನ ಆಯಸ್ಸು 500 ವರ್ಷ, ಎಲುಬು ಕೀಳುಗಳ ಆಯಸ್ಸು 250 ವರ್ಷ, ಹಲ್ಲಿನ ಆಯಸ್ಸು 200 ವರ್ಷ ಆಯಸ್ಸು ಇದ್ದು ನಾವು ಮಾಡಿವ ತಪ್ಪುಗಳಿಂದ ಮಾನವನ ಶರೀರದ ಭಾಗಗಳ ಆಯಸ್ಸು ಕಡಿಮೆ ಆಗುತ್ತಿದ್ದು, ಪ್ರಸಕ್ತವಾಗಿ ಜನ ದಿನಕ್ಕೆ 6 ಘಂಟೆ ಮೊಬೈಲ್ ಬಳಕೆ ಮಾಡುತ್ತಿದ್ದು ಅದಕ್ಕೆ ಕಣ್ಣಿನ ಆಯಸ್ಸು ಕಡಿಮೆ ಆಗುತ್ತದೆ ಎಂದು ವರದಶ್ರೀ ಪೌಂಡೇಷನ್ ಅಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡೇರ ಹೇಳಿದರು.
ಅವರು ಸೋಮವಾರದಂದು ಇಲ್ಲಿನ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಣ್ಣಿನ ಸಮಸ್ಯ ನಿವಾರಣೆಗೆ ಮತ್ತು ಮೂಗು, ಗಂಟಲು ಸಮಸ್ಯ ನಿವಾರಣೆಗೆ ಕಣ್ಣಿಗೆ ಹಾಗೂ ಮೂಗಿನಲ್ಲಿ ಸಿದ್ಧ ಹನಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿ ಮುದುಕರು 15 ಸಲ ಸಿದ್ದಿ ಹನಿ ಹಾಕಿಸಿಕೊಳ್ಳಬೇಕು. ವ್ಯಾಸನಿಗಳು 16 ಸಲ, ವಯಸ್ಕರು 10 ಸಲ, ಬಿ ಪಿ ಶುಗರ ಹೊಂದಿದ ವ್ಯಕ್ತಿಗಳು 15 ಸಲ , ಕಣ್ಣಿನ ಶಸ್ತ್ರ ಚಿಕಿತ್ಸೆ ಪಡೆದ ವ್ಯಕ್ತಿಗಳು ಯಾವ ಸಂದರ್ಭದಲ್ಲಿ ಸಿದ್ದಿ ಹನಿ ಪಡೆಯಬೇಕು ಮತ್ತು ನಾವು ಅಡುಗೆ ಮಾಡುವ ಪಾತ್ರೆಗಳನ್ನು ತೊಳೆದು ಇಡುತ್ತೇವೆ ಆದರೆ ನಾವು ತಿನ್ನುವ ಆಹಾರ ಪದ್ದತಿಯಲ್ಲಿ ಸಿಕ್ಕ ಸಿಕ್ಕ ತಿನ್ನಿಸುಗಳನ್ನು ಸೇವಿಸುವುದರಿಂದ ನಮ್ಮ ಒಳಗಿನ ಶರೀರವನ್ನು ಹೇಗೆ ಸ್ವಚ್ಛ ಮಾಡಬೇಕು ಎಂಬುದು ತಿಳಿಯದಾಗಿದೆ ಎಂದರು.
ಸಾಂಬ್ರಾ ಗ್ರಾಮದ ಶ್ರೀ ಹನುಮನ ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ ವರದಶ್ರೀ ಸಿದ್ದ ಓಷಧಿ 10 ಸಲ ಹಾಕಿಸಿಕೊಂಡಿದ್ದು ಈಗ ಚಸ್ಮಾ ಇಲ್ಲದೆ ವಾಹನ ಚಾಲನೆ, ಚಸ್ಮಾ ಬಳಕೆ ಬಿಟ್ಟಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮದನಬಾವಿ,ರಾಚಣ್ಣವರ ಗುರುಗಳು ಕರಡಿಗುಡ್ಡಿ, ಮುಖನವರ ಕರಡಿಗುಡ್ಡಿ, ಹಣಮಂತ ನಾಯ್ಕ, ಬಸಪ್ಪ ಚಿಕ್ಕೋಪ್ಪ, ಬಾಬಣ್ಣ ಮಾರಿಹಾಳ,ಶ್ರೀ ವರದಶ್ರೀ ಸ್ವಯಂ ಸೇವಕರಾದ ವಿಶ್ವನಾಥ ರೆಡ್ಡಿ, ಅಭಿಷೇಕ ಚವಾನ, ಚಿರಂಜೀವಿ ಚಿತ್ರೆ, ಅಭಿಷೇಕ ಪಾಟೀಲ, ಈರಣ್ಣ ಅಂಗಡಿ ಸೇರಿದಂತೆ ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ದೂರದ ಊರಿನ ಜನತೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸ್ತವಿಕವಾಗಿ ಬಸವರಾಜ ಹಿರೇಮಠ ಮಾತನಾಡಿದರು.