ಹುಬ್ಬಳ್ಳಿ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಿಂದ ಅಪಾರ ಹಾನಿ

Heavy rains cause extensive damage in Hubballi taluk

ಹುಬ್ಬಳ್ಳಿ, 14 : ಈ ಬಾರಿ ಮುಂಗಾರು ಮಳೆ ಬೇಗನೆ ಪ್ರಾರಂಭವಾಗಿ ದೊಡ್ಡ ಪ್ರಮಾಣದಲ್ಲಿ ಸತತವಾಗಿ ಮಳೆ ಸುರಿದಿದ್ದರಿಂದ ಬೆಣ್ಣೆಹಳ್ಳ ತುಂಬಿ ಹರಿದು ಅಪಾರ ಹಾನಿಯಾಗಿದೆ ಎಂದು ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು.  

ಅವರು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ನಾಗರಹಳ್ಳಿ, ಮಂಟೂರ, ಬಂಡಿವಾಡ, ಶಿರಗುಪ್ಪಿ, ಇಂಗಳಹಳ್ಳಿ ಗ್ರಾಮಗಳ ಹತ್ತಿರ ಬೆಣ್ಣಿಹಳ್ಳದ ಪ್ರವಾಹದಿಂದ ಅಪಾರ ನೀರು ಬಂದ ಪ್ರದೇಶವನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ದಿನಾಂಕ: 12 ರಂದು ಬ್ಯಾಹಟ್ಟಿ ಗ್ರಾಮದಲ್ಲಿ 100 ಕುರಿಗಳು ಮೂರು ಜನ ಕುರಿಗಾಹಿಗಳು ಶಿರಗುಪ್ಪಿ, ಭಂಡಿವಾಡ ಹತ್ತಿರ 250 ಕುರಿ 3 ಜನ ಕುರಿಗಾಹಿಗಳು, ಇಂಗಳಹಳ್ಳಿ ಗ್ರಾಮದ ಹತ್ತಿರ ಬೆಣ್ಣಿಹಳ್ಳದ ನೆಲಗಡ್ಡೆಯಲ್ಲಿ 470 ಕುರಿಗಳು 3ಜನ ಕುರಿಗಾಹಿಗಳನ್ನು ನೀರಿನಲ್ಲಿ ಸಿಲುಕಿಕೊಂಡ  ಮೂರು ಜನ ಕುರಿಗಳನ್ನು ಬೋಟ್ ಮೂಲಕ ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಣೆ ಮಾಡಿದ್ದಾರೆ. 22 ಕುರಿಗಳು 1 ದ್ವೀಚಕ್ರವಾಹನ  ನೀರಿನಲ್ಲಿ ತೇಲಿ ಹೋಗಿವೆ. ಹಾಗೂ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ನಾಗರಹಳ್ಳಿ-ಶಿರಗುಪ್ಪಿ ರಸ್ತೆ 3 ಸಿಡಿ ಹಾಗೂ ಸಂಪೂರ್ಣ ರಸ್ತೆ ಹಾನಿಯಾಗಿದ್ದು ಇಂಗಳಹಳ್ಳಿ-ಕುಸುಗಲ್ಲ ರಸ್ತೆ ಮಳೆಯಿಂದ ಭಾರಿ ಹಾನಿಯಾಗಿದೆ. ರೈತರು ಈಗಾಗಲೇ ಹೆಸರು ಬೆಳೆ ಹಾಗೂ ಇತರೆ ಮುಂಗಾರು ಬೆಳೆ ಬಿತ್ತಲಾಗಿದ್ದು ಹೆಸರು ಬೆಳೆ ಮೊಳಕೆ ಒಡೆಯುವ ಹಂತಕ್ಕೆ ಬಂದಿದ್ದು ನಿನ್ನೆ ಸುರಿದ ಧಾರಾಕಾರ ಮಳೆಯಿಂದ ರೈತರಿಗೆ ಆರ್ಥಿಕವಾಗಿ ತುಂಬಾ ನಷ್ಟವಾಗಿದೆ. ರೈತರ ಜಮೀನುಗಳಲ್ಲಿನ ಬದುವುಗಳು ಕೊಚ್ಚಿ ಹೋಗಿ ಹಾನಿಯಾಗಿದೆ. ಕ್ಷೇತ್ರದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.  

ದಿ: 13 ರಂದು ನವಲಗುಂದ ವಿಧಾನಸಭಾ ಕ್ಷೇತ್ರದ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ್ ಅವರು ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ, ನವಲಗುಂದ ತಾಲ್ಲೂಕಿನ ಕರ್ಲವಾಡ, ಆರೇಕುರಹಟ್ಟಿ, ಯಮನೂರ ಹಾಗೂ ನವಲಗುಂದ ಎ.ಎಸ್‌. ಬಾಗಿ ಶಾಲೆ ಮುಂತಾದಕಡೆ ಎಲ್ಲ ಅಧಿಕಾರಿಗಳೊಂದಿಗೆ ವೀಕ್ಷಣೆಮಾಡುವರು.  

ಈಗಾಗಲೇ ಬೆಣ್ಣೆಹಳ್ಳ ಅಗಲೀಕರಣ ಕಾಮಗಾರಿಗೆ 200 ಕೋಟಿ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಪ್ರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರಾವರ ಜೊತೆ ಚರ್ಚಿಸಿ ಬೇಗನೆ ಯೋಜನೆಯನ್ನು ಅನಿಷ್ಠಾನಗೊಳಿಸಲು ಮನವಿ ಮಾಡಲಾಗಿದೆ. ಆದರೆ, ಮಳೆ ಪ್ರಾರಂಭವಾಗಿದ್ದರಿಂದ ಕಾಮಗಾರಿ ಪ್ರಾರಂಭಿಸುವದು ವಿಳಂಬವಾಗಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲಾಗುವದು ಎಂದು ಕೋನರಡ್ಡಿ ಹೇಳಿದರು.   

ಈ ಸಂದರ್ಭದಲ್ಲಿ ಹುಬ್ಬಳ್ಳಿ ತಹಶೀಲ್ದಾರ ಜೆ.ಬಿ. ಮಜ್ಜಗಿ, ತಾ.ಪಂ. ಇಓ ರಾಮಚಂದ್ರ ಹೊಸಮನಿ, ಪಿಡಬ್ಲೂಡಿ ಎಇಇ ಕಟ್ಟೀಮನಿ, ಪಿಆರಿ​‍್ಡ ಎಇಇ ಬಿ.ಎನ್‌. ಗೌಡರ, ಕೃಷಿ ಅಧಿಕಾರಿ ಮಂಜುಳಾ ತೆಂಬದ, ಶಿವಣ್ಣ ಹುಬ್ಬಳ್ಳಿ, ರಾಜಶೇಖರ ಕದ್ದೀನವರ, ಪ್ರಕಾಶಗೌಡ್ರ ಹನಮರಡ್ಡಿ, ಡಾ:ತಾಜುದ್ದೀನ ಮುಲ್ಲಾನವರ, ಶಿರಗುಪ್ಪಿ ಗ್ರಾ.ಪಂ ಅಧ್ಯಕ್ಷ ಶ್ರೀಮತಿ ಯಲ್ಲಮ್ಮ ಹಲಗಿ, ಸದಸ್ಯರುಗಳಾದ ಶ್ರೀಮತಿ ನಿರ್ಮಲಾ ಚೌಡಶೆಟ್ಟಿ, ಈರಣ್ಣ ಬಸಾಪೂರ, ಕೆಂಚಪ್ಪ ಕೊಳ್ಳಿ, ಪ್ರವೀಣ ಗೌರಿ, ಇಂಗಳಹಳ್ಳಿ ಗ್ರಾ.ಪಂ ಅಧ್ಯಕ್ಷ  ಗುರು ಹಳ್ಳೂರ, ಮಂಜುನಾಥ ನಾಗನಗೌಡ್ರ, ನಾಗಣ್ಣ ಅರಳಿಕಟ್ಟಿ, ಬಸವರಾಜ ಮುದ್ದುನವರ, ಅಡಿವೆಪ್ಪಗೌಡ ನಾಗನಗೌಡ್ರ, ಚಂದ್ರಗೌಡ ಭರಮಗೌಡ್ರ, ಅಶೋಕಗೌಡ ಪಾಟೀಲ, ಎನ್‌.ಸಿ ಅಲ್ಲಾಪೂರ, ಬಸಪ್ಪ ನರೆಗಲ್ಲ, ರಾಮಣ್ಣ ಮರಿನಾಯ್ಕರ, ರಾಯಪ್ಪ ಸಂಬಾಜಿ ಪ್ರಕಾಶ ಹುಲಗೂರ, ರಾಮಣ್ಣ ಗುಂಜಳ, ಸೈಯ್ಯದ ಬಾವಾಖಾನವರ, ಅಣ್ಣಪ್ಪ ಕುಲಕರ್ಣಿ, ಶಿವಾನಂದ ಗದಗಿನ ಅಮೀನಸಾಬ ಯಲಿಗಾರ, ಬಸವರಾಜ ಬೀರಣ್ಣವರ, ಈಶಪ್ಪ ಬಟ್ಟೂರ, ಮೌಲಾಸಾಬ ಹೂಲಿ, ಸುರೇಶ ಹೆಬಸೂರ, ವೀರಣ್ಣ ಶಿರಗುಪ್ಪಿ,  ಹುಚ್ಚೇಸಾಬ ತಹಶೀಲ್ದಾರ, ಶಾಂತಪ್ಪ ಶೆಟ್ಟರ, ಪುಂಡಲೀಕ ಚಲವಾದಿ, ರುದ್ರ​‍್ಪ ದುಂದೂರ, ಶೇಕಣ್ಣ ದುಂದೂರ ಹಾಗೂ ಮುಂತಾದವರು ಉಪಸ್ತಿತರಿದ್ದರು. 


ಇತ್ತೀಚಿನ ಸುದ್ದಿ