ಜಮೀನಿನಲ್ಲಿ ಆಯುಧದಿಂದ ಕೊಚ್ವಿ ಯುವಕನ ಹತ್ಯೆ : ಮದಮಕ್ಕನಾಳದಲ್ಲಿ ಭೀಕರ ಕೊಲೆ

Kochvi youth murdered with a weapon on a farm: Horrific murder in Madamakkanal

ಬೆಳಗಾವಿ : ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಕೊಚ್ವಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

     ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದ ಸಚಿನ್ ಕಾಂಬಳೆ (26) ಹತ್ಯೆ ಯಾದ ಯುವಕನಾಗಿದ್ದಾನೆ. ಹತ್ಯೆ ಯಾಗಿರುವ ಯುವಕನನ್ನು ಮನಬಂದಂತೆ ಕೊಚ್ವಿ ಹತ್ಯೆ ಮಾಡಲಾಗಿದೆ. 

   ಮದಮಕ್ಕನಾಳ ಗ್ರಾಮದ ಬಳಿಯಲ್ಲಿ ಇರುವ ಜಮೀನಿನಲ್ಲಿ ಯುವಕ ಸಚಿನ್ ಧನಗಳಿಗೆ ಮೇವು ತರಲು ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಹುಕ್ಕೇರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.