ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

ಲೋಕದರ್ಶನ ವರದಿ

ಶಿರಹಟ್ಟಿ: ತಾಲೂಕಿನ ಶೆಟ್ಟೀಕೇರಿ ಗ್ರಾಮದ ಹನಮಂತಪ್ಪ ಶಿವಪ್ಪ ಹರಿಜನ ಮತ್ತು ಬಟ್ಟೂರು ಗ್ರಾಮದ ಲಲಿತವ್ವ ಫಕ್ಕೀರಪ್ಪ ಕುಸಲಾಪೂರ ಅವರು ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ದೀಪಕ್ ಲಮಾಣಿ, ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ ಯುವ ಧುರೀಣರಾದ ಮಹೇಶ ಬಡ್ನಿ, ಶಿವು ಲಮಾಣಿ, ಚಂದ್ರು ಲಮಾಣಿ ಹಾಗೂ ಶೆಟ್ಟೀಕೇರಿ ಮತ್ತು ಬಟ್ಟೂರ ಗ್ರಾಮದ ಯುವಕರು ಉಪಸ್ಥಿತರಿದ್ದರು.   



ಇತ್ತೀಚಿನ ಸುದ್ದಿ