ಧಾರವಾಡ 11: ಕರ್ನಾಟಕ ವಿದ್ಯಾವರ್ಧಕ ಸಂಘವು, ಲಿಂ. ಚನ್ನಬಸಪ್ಪ ಕರಾಳೆ ದತ್ತಿ ಉದ್ಘಾಟನೆ ಮತ್ತು ‘ಚನ್ನಬಸಪ್ಪಕರಾಳೆ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ: 12-06-2025 ರಂದು ಮುಂಜಾನೆ 11 ಗಂಟೆಗೆ ಬೆಳಗಾವಿ ಜಿಲ್ಲೆಯಯಕ್ಸಂಬಾದ ಚನ್ನಬಸಪ್ಪ ಕರಾಳೆ ಜನತಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರಿ್ಡಸಿದೆ.
ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಬಾಬಣ್ಣ ಹುಕ್ಕೇರಿ ದತ್ತಿ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡುವರು. ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳ ಚೇರಮನ್ರಾದ ಚಂದ್ರಕಾಂತ ಸೋಮಶೇಖರ ಕೋಠಿವಾಲೆ ಪ್ರಶಸ್ತಿ ಸ್ವೀಕರಿಸುವರು.
ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಮಾನ್ಯ ಶಾಸಕರಾದಗಣೇಶ ಪ್ರಕಾಶ ಹುಕ್ಕೇರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅಥಣಿ ವಿಮೋಚನಾ ಸಂಸ್ಥೆ ಅಧ್ಯಕ್ಷರಾದಬಿ.ಎಲ್. ಪಾಟೀಲಅಭಿನಂದನಾ ಪರ ನುಡಿಗಳನ್ನಾಡುವರು. ಧಾರವಾಡ ಕ.ವಿ.ವ ಸಂಘದಅಧ್ಯಕ್ಷಚಂದ್ರಕಾಂತಗುರ್ಪ ಬೆಲ್ಲದಅಧ್ಯಕ್ಷತೆ ವಹಿಸುವರು. ಚನ್ನಬಸಪ್ಪಉರ್ಫರಾಜೇಂದ್ರ ಭಾ.ಕರಾಳೆ ಹಾಗೂ ಸಂಜೀವ ಭಾ.ಕರಾಳೆ ಗೌರವ ಉಪಸ್ಥಿತರಿರುವರು.
ಆಸಕ್ತ ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಲಿಂ. ಚನ್ನಬಸಪ್ಪ ಕರಾಳೆ
ಲಿಂ. ಚನ್ನಬಸಪ್ಪ ಕರಾಳೆ ಅವರು ಶರಣ ಮಲ್ಲಪ್ಪಹಾಗೂ ಶರಣೆ ಕಾಶವ್ವ ದಂಪತಿಗಳ ಪುಣ್ಯ ಗರ್ಭದಲ್ಲಿ 1886 ರಲ್ಲಿ ಯಕ್ಸಂಬಾದಲ್ಲಿ ಜನಿಸಿದರು. ಹುಟ್ಟುತ್ತಲೇ ಆಗರ್ಭ ಶ್ರೀಮಂತ ಮನೆತನದವರಾದ ಇವರು ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಮಾಜದ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.‘ಲಿಂಗಾಯತ್ ಯುದ್ಧ ಪರಿಷತ್’ ಪ್ರಾರಂಭಿಸಿದ ಸಾಹಸಿ ಇವರು. ಶಿಕ್ಷಣ ವಂಚಿತವಾಗಿದ್ದ ಗಡಿ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಶಿಕ್ಷಣ ಕ್ರಾಂತಿ ಮಾಡಿದರು. ತನ್ಮೂಲಕ ನೂರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಚೆಲ್ಲಿದರು. ಕನ್ನಡ ಭಾಷೆ, ನಾಡು-ನುಡಿಗಳನ್ನು ಬೆಳೆಸುವಲ್ಲಿ ಬಹಳಷ್ಟು ಶ್ರಮಪಟ್ಟವರು.ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಇವರು ಬ್ರಿಟಿಷ್ ಸರಕಾರದಿಂದ ಸಂದ‘ರಾವ ಬಹಾದ್ದೂರ’ ಬಿರುದನ್ನು ತಿರಸ್ಕರಿಸಿದರು. ಅಪ್ಪಟ ಗಾಂಧಿವಾದಿಯಾದ ಇವರು 1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ಮರಣೀಯ ಸೇವೆಗೈದಿರುವರು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ತನು-ಮನ-ಧನದಿಂದ ತೊಡಗಿಸಿಕೊಂಡವರು. ಡಾ. ಬಿ.ಆರ್.ಅಂಬೇಡ್ಕರವರು ಪ್ರವಾಸದ ಸಂದರ್ಭದಲ್ಲಿ ಯಕ್ಸಂಬಾದ ಕರಾಳೆಯವರ ಮನೆಗೆ ಭೇಟಿ ನೀಡಿ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳನ್ನು ಸಮಾಲೋಚಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಡಿಸ್ಟ್ರಿಕ್ ಸ್ಕೂಲ್ ಬೋರ್ಡ್ಚೇರಮನ್ರಾಗಿ, ಡಿಸ್ಟ್ರಿಕ್ ಲೋಕಲ್ ಬೋರ್ಡಚೇರಮನ್ರಾಗಿ ಹಾಗೂ ಯಕ್ಸಂಬಾ ಪಟ್ಟಣದಲ್ಲಿ ಪ್ರಥಮವಾಗಿ ಸ್ಯಾನಿಟರಿ ಕಮಿಟಿಯನ್ನು ಸ್ಥಾಪಿಸಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಿದವರು.
ಗಡಿ ಭಾಗದ ಹಳ್ಳಿಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಿ, ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರೋತ್ಸಾಹಿಸಿರುವರು. ಇವರು 12ಅಕ್ಟೋಬರ 1956 ರಲ್ಲಿ ಲಿಂಗೈಕ್ಯರಾದರು.
ಯಕ್ಸಂಬಾ ಪಟ್ಟಣದಲ್ಲಿ 8-6-1959 ರಲ್ಲಿ, ಚೆನ್ನಬಸಪ್ಪಕರಾಳೆ ಪ್ರೌಢ ಶಾಲೆಯನ್ನು ‘ದಿ ಜನತಾ ಶಿಕ್ಷಣ ಸಂಸ್ಥೆ’ಯಿಂದ ಪ್ರಾರಂಭಿಸಿ’ ಅಂದಿನ ಬೆಳಗಾವಿ ಕಲೆಕ್ಟರ್ಎನ್. ರಾಮಚಂದ್ರರಾವ್ಅವರಅಮೃತಹಸ್ತದಿಂದಉದ್ಘಾಟನೆಗೊಂಡಿತು. ಇಂದು ಈ ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಅಂಗ ಸಂಸ್ಥೆಗಳನ್ನು ಹೊಂದಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಕೇಂದ್ರವಾಗಿದೆ. ಇಂತಹ ಹೆಮ್ಮೆಯ ಸಂಸ್ಥೆಯ ಹುಟ್ಟುಹಬ್ಬವನ್ನು ‘ಸಂಸ್ಥಾಪನಾ ದಿನಾಚರಣೆ’ಯನ್ನು ಆಚರಿಸಲಾಗುತ್ತಿದೆ
ದತ್ತಿದಾನಿಗಳ ಅಜ್ಜನವರಾದ ಚನ್ನಬಸಪ್ಪ ಮಲ್ಲಪ್ಪ ಕರಾಳೆ ಇವರ ಹೆಸರಿನಿಂದ ಸಂಘದಲ್ಲಿದತ್ತಿ ಉಪನ್ಯಾಸ ಪ್ರಾರಂಭಿಸಿ ನಾಡು-ನುಡಿ, ನೆಲ-ಜಲ, ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ವೀರಯೋಧರಿಗೆಅಲ್ಲದೆ ವಿವಿಧ ರಂಗಗಳಲ್ಲಿ ಸೇವೆಗಳನ್ನು ಸಲ್ಲಿಸಿದ ಸಾಧಕರನ್ನು ಗುರುತಿಸಿ ಅವರಿಗೆ ಚನ್ನಬಸಪ್ಪ ಕರಾಳೆ’ ಪ್ರಶಸ್ತಿಯನ್ನು ಜೂನ 8 ರಂದುಪ್ರಧಾನ ಮಾಡುವುದರ ಮೂಲಕ ಪ್ರಾತಃಸ್ಮರಣೀಯರನ್ನು ಸ್ಮರಿಸಲಾಗುತ್ತಿದೆ.