ಮುಂಬೈ, ಏ 27,ಕಳವು ಆರೋಪಿಯೊಬ್ಬನಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಓರ್ವ ಮ್ಯಾಜಿಸ್ಟ್ರೇಟ್, ನ್ಯಾಯಾಲಯ ಸಿಬ್ಬಂದಿ ಹಾಗೂ ಡಜನ್ ಪೊಲೀಸರು ಸೇರಿ 22 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.ಸಿಗರೇಟ್ ಪ್ಯಾಕೇಟ್ ಕಳವು ಮಾಡುವ ಉದ್ದೇಶದಿಂದ ಗೋರೇಗಾಂವ್ ಸಬ್ ಅರ್ಬನ್ ನ ಬನಗುರ್ ನಗರದ ಅಂಗಡಿಯೊಂದರಲ್ಲಿ ಆರೋಪಿ ಕೈಚಳಕ ತೋರಿಸುತ್ತಿದ್ದಾಗಲೇ ಪೊಲೀಸರು ಏಪ್ರಿಲ್ 21ರಂದು ಮಾಲು ಸಮೇತ ಹಿಡಿದಿದ್ದರು. ಮಾರನೇ ದಿನ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ನಂತರ ಆರೋಪಿಯನ್ನು ಪೊಲೀಸ್ ವಾಹನದಲ್ಲಿ ಠಾಣೆ ಕೇಂದ್ರೀಯ ಜೈಲಿಗೆ ಕರೆದುಕೊಂಡುಹೋದರು. ಆದರೆ ಜೈಲಿನಲ್ಲಿ ಜಾಗವಿಲ್ಲದ ಕಾರಣ ಆರೋಪಿಯನ್ನು ರಾಯಘಡದ ತಲೋಜಾ ಕೇಂದ್ರೀಯ ಜೈಲಿಗೆ ಕರೆದೊಯ್ಯಲಾಯಿತು.ಆದರೆ, ಆರೋಪಿಗೆ ಕೋವಿಡ್ -19 ಪರೀಕ್ಷೆ ನಡೆಸದಕಾರಣ, ಜೈಲಿನೊಳಗೆ ಪ್ರವೇಶಿಸಲು ತಲೊಜಾ ಜೈಲು ಅಧಿಕಾರಿಗಳು ನಿರಾಕರಿಸಿದರು. ಏಪ್ರಿಲ್ 25ರಂದು ಆರೋಪಿಯನ್ನು ಮುಂಬೈನ ಸರ್ ಜೆಜೆ ಆಸ್ಪತ್ರೆಗೆ ವಾಪಸ್ಸು ಕರೆತರಲಾಯಿತು. ಆಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು. ಮುನ್ನೆಚ್ಚರಿಕೆ ಕ್ರಮವಾಗಿ, ಈಗ ಸಂಬಂಧ ಪಟ್ಟ ಮ್ಯಾಜಿಸ್ಟ್ರೇಟ್ 12 ಮಂದಿ ಪೊಲೀಸರು, ಹಾಗೂ ಕೋರ್ಟ್ ಸಿಬ್ಬಂದಿಯನ್ನು 14 ದಿನಗಳ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.