ಎನ್‌ಎಸ್‌ಎಸ್ ಶಿಬಿರಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತವೆ: ಪಾಟೀಲ

NSS camps enhance human values ​​in children: Patil

ವಿಜಯಪುರ 05: ಎನ್‌.ಎಸ್‌.ಎಸ್ ಶಿಬಿರಗಳು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಸಹಬಾಳ್ವೆ, ಸಂಘಟನೆ, ಸಮಾಧಾನ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತವೆ ಎಂದು ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಹೇಳಿದ್ದಾರೆ.  

ಬುಧವಾರ ತಿಕೋಟಾ ತಾಲೂಕಿನ ಸಿದ್ದಪೂರ ಕೆ ಗ್ರಾಮದಲ್ಲಿ ಕಾಲೇಜಿನ ಎನ್‌.ಎಸ್‌.ಎಸ್ ಘಟಕದ ವತಿಯಿಂದ ಆಯೋಜಿಸಲಾದ ವಿಶೇಷ ಶಿಬಿರದಲ್ಲಿ ಅವರು ಹೇಳಿದರು. 

ಇಂಥ ಶಿಬಿರಗಳಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಕಲಿಸುತ್ತವೆ ಎಂದು ಅವರು ತಿಳಿಸಿದರು.  

ಎನ್‌ಎಸ್‌ಎಸ್ ಯೋಜನಾ ಅಧಿಕಾರಿ ಡಾ. ರಾವಸಾಬ ದೇಶಮುಖ, ವಿಜಯಪುರ ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಭುವನೇಶ್ವರಿ, ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್‌. ಎಂ. ಅವಟಿ ಅವರು ಎನ್‌ಎಸ್‌ಎಸ್ ಮತ್ತು ಯುವಕರ ಅಭಿವೃದ್ದಿ ಕುರಿತು ಮಾತನಾಡಿದರು.  

ಈಶ್ವರಿ ಸ್ವಾಗತಿಸಿದರು. ವಿನಯ ನಿರೂಪಿಸಿ ವಂದಿಸಿದರು.