ಬಳ್ಳಾರಿ 03: ಬಳ್ಳಾರಿಯ ನರಸಣ್ಣ ಬಂಗಾರಯ್ಯ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಘೋಷಿಸಿದೆ.
ನರಸಣ್ಣ ಬಂಗಾರಯ್ಯ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ರಮೇಶ್ ಆರ್.ನಾಯ್ಕ ಅವರ ಮಾರ್ಗದರ್ಶನದಲ್ಲಿ ‘ಇವ್ಯಾಲ್ಯುಯೇಶನ್ ಆಫ್ ಯುಸರ್ಸ ಸ್ಯಾಟಿಸ್ಫ್ಯಾಕ್ಷನ್ ವಿಥ್ ಲೈಬ್ರರಿ ರಿಸೊಸರ್ಸ್ ಆಂಡ್ ಸರ್ವಿಸಸ್ ಆಫ್ ಯುನಿವರ್ಸಿಟಿಸ್ ಆಫ್ ಹಾರ್ಟಿಕಲ್ಚರಲ್ ಸೈನ್ಸಸ್ ಇನ್ ಕರ್ನಾಟಕ ಸ್ಟೇಟ್: ಎ ಸರ್ವೇ’ ಎಂಬ ಮಹಾಪ್ರಬಂಧ ಮಂಡಿಸಿದ್ದಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿದೆ.