ಸಂಕೇಶ್ವರ : ಕಳ್ಳತನ ಪ್ರಕರಣ ಒಂದರಲ್ಲಿ ಜಾಮಿನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 20 ವರ್ಷಗಳ ಹಿಂದೆ ಸಿಲಿಂಡರ್ ಕಳ್ಳತನ ಮಾಡಿದ್ದ ಆರೋಪಿತನಾದ ರಾಜು ಪ್ರತಾಪರಾವ್ ಚಂದವಾನಿ (65) ( ಸಾ : ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ) ಇತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೋಗಿ ಮರಳಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 2005 ರಿಂದ ತಲೆಮರಿಸಿಕೊಂಡಿದ್ದನು.
ಆರೋಪಿತನ ಪತ್ತೆಗಾಗಿ ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಂತೆ ಗೋಕಾಕ ಡಿಎಸ್.ಪಿ ಡಿ.ಹೆಚ್.ಮುಲ್ಲಾ ಹಾಗೂ ಸಂಕೇಶ್ವರ ಸಿಪಿಐ ಎಸ್.ಎಂ.ಅವಜಿ ಇವರ ನೇತ್ರತ್ವದಲ್ಲಿ ಠಾಣೆಯ ಸಿಬ್ಬಂದಿರವರಾದ ಎಸ್.ಆರ್.ಬೇವಿನಕಟ್ಟಿ ಮತ್ತು ಯು.ಎಂ. ಕಾಂಬಳೆ ಇವರಿಗೆ ನೇಮಕ ಮಾಡಲಾಗಿತ್ತು.
ಸದರಿರವರ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ತಲೆ ಮರೆಸಿಕೊಂಡಿದ್ದ ಆರೋಪಿತನಿಗೆ 01-05-2025 ರಂದು ಕೊಲ್ಲಾಪುರದ ನ್ಯೂ ಶಾಹು ಪುರಿಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದಿದ್ದು, ನಂತರ ಆರೋಪಿತನಿಗೆ ಮಾನ್ಯ ಸಂಕೇಶ್ವರ್ ಜೆ ಎಂ ಎಫ್ ಸಿ ನ್ಯಾಯಾಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದರಿ ಪತ್ತೆ ಕಾರ್ಯ ಕೈಗೊಂಡ ಅಧಿಕಾರಿ ಸಿಬ್ಬಂದಿರವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಭೀಮಾಶಂಕರ್ ಗುಳೇದ ಅವರು ಶ್ಲಾಘಿಸಿ ಪ್ರಶಂಶನೆ ವ್ಯಕ್ತಪಡಿಸಿರುತ್ತಾರೆ.