ಜಮಖಂಡಿ 01: ರಾಜ್ಯ ಸರಕಾರ ನಗರಸಭೆಯ ಪೌರಕಾರ್ಮಿಕರ ವಿವಿಧ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪೌರಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರ್ವನ್ನು ಹಿಂಪಡೆದು ಪಟ್ಟಾಕಿ ಸಿಡಿಸಿ, ಗುಲಾಲ ಎರಚಿಕೊಂಡು ಸಂಭ್ರಮಾಚರಣೆಯನ್ನು ಮೆರದರು.
ನಂತರ ಪೌರಾಯುಕ್ತ ಜೋತಿ ಗೀರೀಶ ಮಾತನಾಡಿ ಸರಕಾರದ ಎಲ್ಲ ಇಲಾಖೆಯದಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುವ ಸಹಜ ಆದರೆ ಕಷ್ಟದ ಕೆಲಸವನ್ನು ನಿರ್ವಹಿಸುವ ಇಲಾಖೆ ಯಾವುದಾದರು ಇದ್ದರೆ ಅದು ನಗರಸಭೆ. ಗಾಳಿ,ಮಳೆ, ಬಿಸಿಲು, ಚಳಿ ಎನ್ನದೆ ಕೆಲಸವನ್ನು ನಿರ್ವಹಿಸುವರು ನಗರಸಭೆಯ ಪೌರಕಾರ್ಮಿಕರು. ಕಳೆದ ನಾಲ್ಕು ದಿನಗಳ ಕಾಲ ಅನಿರ್ಧಿಷ್ಟಾವಧಿ ಮುಷ್ಕರ್ವನ್ನು ಸರಕಾರ ಪರಿಗಣಿಸಿ ವಿವಿಧ ಬೇಡಿಕೆಗಳನ್ನು ನೀಡುವ ಭರವಸೆಯನ್ನು ನೀಡಿದೆ ಎಂದು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ಈ ಅನಿರ್ಧಿಷ್ಟಾವಧಿ ಮುಷ್ಕರ್ಕ್ಕೆ ವಿವಿಧ ಸಂಘಟನೆಗಳು, ಸಾರ್ವಜನಿಕರು, ಮುಖಂಡರು ಸಹ ಸಹಕಾರ ನೀಡಿದ್ದಾರೆ. ನಮ್ಮ ಪೌರಕಾರ್ಮಿಕರು ದಿನನಿತ್ಯವಾಗಿ ಜಮಖಂಡಿ ನಗರವನ್ನು ಹೇಗೆ ಸ್ವಚ್ಛವಾಗಿಡುತ್ತಾರೆ. ಹಾಗೆ ಇಂದಿನಿಂದ ಕಸದ ರಾಶಿಯನ್ನು ಸ್ವಚ್ಛ ಮಾಡುತ್ತಾರೆ. ನಗರವನ್ನು ಸುಂದರವಾಗಿ ಕಾಣುವಂತೆ ಕೆಲಸ,ಕಾರ್ಯವನ್ನು ನಿರ್ವಹಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆಯ ಇಳಾಕೆಯ ಸಿಬ್ಬಂದಿಗಳಿಗೆ ಹಾಗೂ ಪೌರಾಯುಕ್ತರಿಗೆ ಪೌರಕಾರ್ಮಿಕರು ಸೇರಿಕೊಂಡು ಸನ್ಮಾನಿಸಿದರು. ನಂತರ ಪಟ್ಟಾಕಿಯನ್ನು ಸಿಡಿಸಿ, ಗುಲಾಲ ಎರಚಿಕೊಂಡು ಸಂತಸವನ್ನು ಹಂಚಿಕೊಂಡರು. ನಗರದ ಅಂಬೇಡ್ಕರ್ ಸರ್ಕಲ್ಗೆ ತರಳಿ ಡಾ,ಬಿ,ಆರ್,ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರಿ್ಣಯನ್ನು ಮಾಡಿದರು.