ಜಿಲ್ಲಾಧಿಕಾರಿಗಳ ಭರವಸೆಯ ಮಧ್ಯೆ ಅಂತ್ಯ ಗೊಂಡ ಪ್ರತಿಭಟನೆ

Protest ends amid assurances from District Magistrate

ಬ್ಯಾಡಗಿ 11 :  ಪಟ್ಟಣದಲ್ಲಿ ಕಳೆದ ಮೇ ಐದರಿಂದ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಮುಖ್ಯರಸ್ತೆ ಅಗಲೀಕರಣ ಸಮಿತಿಯವರು ಸತತವಾಗಿ ಪ್ರತಿಭಟನೆಯನ್ನು ಮಾಡತೊಡಗಿದ್ದರು ಇಂದು ಜಿಲ್ಲಾಧಿಕಾರಿಗಳ ಭರವಸೆಯ ಮಧ್ಯ ರಸ್ತೆಯ ಅಗಲೀಕರಣಕ್ಕೆ ಭರವಸೆ ನೀಡುವ ಮೂಲಕ  ಇಂದಿಗೆ ಪ್ರತಿಭಟನೆಯು ಅಂತ್ಯಗೊಂಡಿತು.

ಜಿಲ್ಲಾಧಿಕಾರಿಗಳು ವಿಜಯ ಮಹಾಂತೇಶ್ ದಾನಮ್ಮನವರ ಮಾತನಾಡಿ ಕಳೆದ 15 ವರ್ಷಗಳಿಂದ ರಸ್ತೆ ಅಗಲೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದು ಇದೀಗ ಸುಖದ ಕಂಡಿದ್ದು ನಾನು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಶಾಸಕರ ಸೂಚನೆಯನ್ನು ಪಡೆದು ಪರ ಮತ್ತು ವಿರೋಧರ ವಿರೋಧ ಮಾಡುವರ ಇಬ್ಬರನ್ನು ಕೂಡಿಸಿ ಮಾತುಕತೆ ನಡೆಸಿದಾಗ ಅದು ಬಗೆಹರೆದಿರಲಿಲ್ಲ ನಿನ್ನೆ ಅವರನ್ನು ಕರೆಯಿಸಿ ಮಾತುಕತೆ ನಡೆಸಿ ಅವರ ನೋವುಗಳನ್ನು ಕೇಳಿದಾಗ ಅವರದು ನ್ಯಾಯಕ್ಕಾಗಿ ಹೋರಾಟ ಅದಕ್ಕಾಗಿ ಅವರು ಅಗಲೀಕರಣದ ವಿರೋಧಿಗಳಲ್ಲ ನಾವೆಲ್ಲರೂ ಒಂದೇ ಎಂದರು ನಾನು ವಯಕ್ತಿಕವಾಗಿ ಅಗಲೀಕರಣದ ಜವಾಬ್ದಾರಿಯನ್ನು ತೆಗೆದುಕೊಂಡು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ನಾಡಿದ್ದು ಗುರುವಾರ ಮೆಮೋ ಹಾಕುವ ಮೂಲಕ ಬಗೆಹರಿಸಿ ಭೂಸ್ವಾಧೀನ ಕಾಯ್ದೆಯ ಪ್ರಕಾರ ಮುಖ್ಯರಸ್ತೆಯಲ್ಲಿನ ಫಲಾನುಭವಿಗಳಿಗೆ ನನ್ನ ವಿಶೇಷವಾದ ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಂಡು ಯಾವುದೇ ಸಂದರ್ಭದಲ್ಲಿ ಅವರಿಗೆ ಗೌರವಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದಿದೆ ಮತ್ತು ಅವರಿಗೆ ಭೂಸ್ವಾಧೀನದ ಕಾಯ್ದೆ ಪ್ರಕಾರ ಅವರಿಗೆ ಸೂಕ್ತ ಪರಿಹಾರವನ್ನು ಕೊಡಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.ಶಾಸಕ ಬಸವರಾಜ್ ಶಿವಣ್ಣನವರ ಮಾತನಾಡಿ ಈಗಾಗಲೇ ಅನೇಕ ನಾಯಕರು ಅವರವರ ಅವಧಿಯಲ್ಲಿ ಈ ಮುಖ್ಯ ರಸ್ತೆಯ ಸಮಸ್ಯೆ ಬಗೆಹರಿಸುವುದರಲ್ಲಿ ಬಹಳ ಪ್ರಯತ್ನ ಮಾಡಿದ್ದಾರೆ ನಮ್ಮ ಪ್ರಯತ್ನ ಆಗಬೇಕು ಚೆನ್ನಾಗಿ ಆಗಬೇಕು ಮತ್ತು ವಿರೋಧ ಮಾಡಿದವರೆಲ್ಲ ಅಗಲೀಕರಣದ ವಿರೋಧಿಗಳಲ್ಲ ಅವರ ಮನೆಗಳು ಹೋಗುವ ಸಲುವಾಗಿ ನೋವುಗಳನ್ನು ಅವರು ವ್ಯಕ್ತಪಡಿಸಿದ್ದಾರೆ ಈ ದಿನ ಅವರು ಎಲ್ಲರೂ ಮುಖ್ಯರಸ್ತೆಯಲ್ಲಿನವರು ತ್ಯಾಗ ಮಾಡಿದ್ದಾರೆ ನನ್ನಿಂದ ಏನಾದರೂ ಕೆಲಸ ಆಗಬೇಕಾದರೆ ನಾನು ಮಾಡಿಕೊಡುತ್ತೇನೆ ಎಲ್ಲರೂ ಪ್ರೀತಿಯಿಂದ ಇರೋಣ ಹಾಗೂ ಮುಖ್ಯ ರಸ್ತೆಯಲ್ಲಿನ ಅಂಗಡಿಗಳು ಬಹುಶಹ ತೆರವುಗೊಂಡರೆ ಅವರಿಗೆ ಪುರಸಭೆಯ ಮೊಳಕೆಯಲ್ಲಿ ಕಡಿಮೆ ಬಾಡಿಗೆ ದರದಲ್ಲಿ ಅಂಗಡಿಗಳನ್ನು ನೀಡಲಾಗುತ್ತದೆ ಹಾಗೂ ಎಲ್ಲರಿಗೂ ಪರಿಹಾರವನ್ನು ಕೊಡುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ ಇದು ಎಲ್ಲಾ ಬ್ಯಾಡಗಿ ಜನರಿಂದ ಆದ ಜಯ ಎಂದು ಹೇಳಿದರು.

ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಮುಖ್ಯ ರಸ್ತೆಯಲ್ಲಿನ ಫಲಾನುಭವಿಗಳಿಗೆ ಮನವರಿಕೆ ಮಾಡಿ ಹಾಗೂ ನ್ಯಾಯವಾದಿಗಳಿಗೆ ಮನವರಿಕೆ ಮಾಡಿ ಅವರ ನೋವನ್ನು ಕೇಳಿ ಅವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವಕೆಲಸ ಜಿಲ್ಲಾಧಿಕಾರಿಗಳು ಮಾಡಿದ್ದಾರೆ ಮತ್ತು ಜಿಲ್ಲಾಧಿಕಾರಿಗಳು ಕಳೆದ ನಾನು ಶಾಸಕನಾಗಿದ್ದಾಗ ಅವರಿಗೆ ನೀಡುವ ಪರಿಹಾರ ಮೊತ್ತವನ್ನು ಇಂದಿನ ಬೆಲೆಯಲ್ಲಿ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಶಾಸಕರು ಜಿಲ್ಲಾಧಿಕಾರಿಗಳು ಮಾಡಬೇಕು ಎಂದು ಹೇಳಿದರು.ಈ ವೇಳೆ  ಜಿಲ್ಲಾಧಿಕಾರಿಗಳಿಂದ ಹಾಗೂ ರಸ್ತೆ ಅಗಲೀಕರಣ ಸಮಿತಿ ವತಿಯಿಂದ ಮುಖ್ಯರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದ ನಿವಾಸಿಗಳಿಗೆ ಸನ್ಮಾನವನ್ನು ಮಾಡಲಾಯಿತುಈ ವೇಳೆ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಪೊಲೀಸ ವರಿಷ್ಠಾಧಿಕಾರಿ ಅಂಶುಕುಮಾರ . ಗ್ಯಾರೆಂಟಿ ರಾಜ ಉಪಾಧ್ಯಕ್ಷರು ಎಸ್ ಆರ್ ಪಾಟೀಲ್ ತಹಶೀಲ್ದಾರ್ ಫಿರೋಜ್ ಷಾ ಸೊಮನಕಟ್ಟಿ. ಸಿಪಿಐ ಮಾಲತೇಶ ಲಂಬಿ. ಪುರಸಭೆ ಅಧ್ಯಕ್ಷ ಬಾಲಚಂದ್ರ ಗೌಡ ಪಾಟೀಲ್‌. ಮುರಗಪ್ಪ ಶೆಟ್ಟರ್, ಸಿದ್ದಲಿಂಗಪ್ಪ ಶೆಟ್ಟರ್, ಪುರಸಭೆ ಸದಸ್ಯ ಬಸಣ್ಣ ಛತ್ರದ,ಅಗಲೀಕರಣ ಸಮಿತಿಯ ಅಧ್ಯಕ್ಷ ಸುರೇಶ್ ಚಲವಾದಿ ರಾಜಣ್ಣ ಮೋರಿಗೇರಿ, ಗಂಗಣ್ಣ ಎಲಿ, ಪಾಂಡುರಂಗ ಸುತಾರ್, ವಿನಾಯಕ್ ಕಂಬಳಿ.ಜಿತೆಂದ್ರ ಸುಣಗಾರ ಹಾಗೂ ಇನ್ನ ಎಲ್ಲಾ ಸಮಿತಿ ಸದಸ್ಯರು ಹಾಗೂ ಮುಖಂಡರು ನಾಗರಿಕರು ಉಪಸ್ಥಿತರಿದ್ದರು