ವಕ್ಫ್‌ ಕಾಯ್ದೆ ತಿದ್ದುಪಡಿ ರದ್ದುಪಡಿಸಲು ಒತ್ತಾಯಿಸಿ ಕೊಪ್ಪಳದಲ್ಲಿ ಪ್ರತಿಭಟನೆ

Protest in Koppal demanding repeal of Wakf Act amendment

ಕೊಪ್ಪಳ 11: ಇತ್ತೀಚೆಗೆ 1995 ರ ವಕ್ಸ್‌ ಕಾಯ್ದೆಗೆ ಅಂಗೀಕರಿಸಲಾದ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಭಾರತದ ಸಂವಿಧಾನದಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಸದರಿ ವಕ್ಫ್‌ ವಾಕ್ಸ್‌ ಕಾಯ್ದೆ ತಿದ್ದುಪಡಿ ಅಂಗೀಕರಿಸಬಾರದು ಅದನ್ನು ರದ್ದುಪಡಿಸಿ ಯತಾವತ್ತಾಗಿ ಮುಂದವರಿಸಬೇಕೆಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್‌ ಕೊಪ್ಪಳ ಜಿಲ್ಲಾ ಘಟಕ ಒತ್ತಾಯಿಸಿದೆ,  

ಬುಧವಾರ ಕೊಪ್ಪಳದಲ್ಲಿ ಸದರಿ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ಕೊಪ್ಪಳ ಕಚೇರಿಗೆ ತೆರಳಿ ಅವರ ಮೂಲಕ ಭಾರತ ಸರಕಾರದ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಿ ಕಟ ಮುಸ್ಲಿಮರ ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ನೀಡಿರುವ ಹಕ್ಕು ಯಥಾವತ್ತಾಗಿ ಮುಂದುವರಿಸಲು ಅವಕಾಶ ಕಲ್ಪಿಸಿ ಕೊಡಬೇಕು ಹಾಗೂ ಕೇಂದ್ರ ಸರ್ಕಾರ ಅಂಗೀಕರಿಸಿರುವ ವಕ್ಫ್‌ ಕಾಯ್ದೆ ತಿದ್ದುಪಡಿ ಕೂಡಲೆ ರದ್ದುಪಡಿಸಬೇಕೆಂದು ಕೊಪ್ಪಳದಲ್ಲಿ ಮುಸ್ಲಿಂ ಸಮಾಜದ ಧರ್ಮಗುರು ಹಾಗೂ ಯೂಸುಫಿಯ ಮಸೀದಿಯ ಖತಿಬ್ ಇಮಾಮ್ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ವಿವರಿಸಿ ಒತ್ತಾಯಿಸಿದೆ. 

ಈ ತಿದ್ದುಪಡಿಗಳು ಸಂವಿಧಾನದ 14, 25, 26 ಮತ್ತು 29 ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಹಿಂದೂ, ಸಿಖ್, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಅಂತಹ ರಕ್ಷಣೆಗಳನ್ನು ಅನುಭವಿಸುತ್ತಿದ್ದು ಕೇವಲ ವಕ್ಸ್‌ ರಕ್ಷಣೆ ಮತ್ತು ಆಸ್ತಿಗಳಿಗೆ ಲಭ್ಯವಿರುವ ನಿಬಂಧನೆಗಳನ್ನು ’ಕೊನೆ ಗೊಳಿಸುವ ಮೂಲಕ ಅದು ಮುಸ್ಲಿಮರೊಂದಿಗೆ ತಾರತಮ್ಯ ಮಾಡುತ್ತದೆ.ಈ ತಿದ್ದುಪಡಿಗಳು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ಪರಿಚ್ಛೇದ 25) ಮತ್ತು ತಮ್ಮ ಸ್ವಂತ ಧಾರ್ಮಿಕಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿಯಂತ್ರಿಸುವ ಹಕ್ಕಿಗೆ (ಪರಿಚ್ಛೇದ26 ಮತ್ತು 29)ವಿರುದ್ಧವಾಗಿವೆ. ಕಳೆದ ಐದು ವರ್ಷಗಳಿಂದ ಧರ್ಮವನ್ನು ಪಾಲಿಸದ ಕಾರಣಕ್ಕೆ ಮುಸ್ಲಿಂ ನಾಗರಿಕನ ತನ್ನ ಆಸ್ತಿಯನ್ನು ದಾನ ಮಾಡುವ ಸ್ವಾತಂತ್ರ್ಯವನ್ನು ಅದು ಕಸಿದುಕೊಳ್ಳುತ್ತದೆ.  

ಈ ತಿದ್ದುಪಡಿಗಳು ಧಾರ್ಮಿಕ ಸಂಸ್ಥೆಗಳಿಗೆ ನೀಡಲಾದ ಸ್ವಾತಂತ್ರ್ಯ ಮತ್ತು ರಕ್ಷಣೆಗಳನ್ನು ಮುಸ್ಲಿಮರಿಂದ ಕಸಿಯುತ್ತವೆ, ಆದರೆ ಇವು ಇತರ ಧರ್ಮಗಳಿಗೆ ಅನ್ವಯಿಸುವುದಿಲ್ಲ.ಇದು ಲಾ ಆಫ್ ಆಫ್ ಲಿಮಿಟೇಶನ ಕಾನೂನಿನಿಂದ ಲಭ್ಯವಿರುವ ವಿನಾಯಿತಿಯನ್ನು ರದ್ದುಗೊಳಿಸುತ್ತದೆ ಮತ್ತು ಮುಸ್ಲಿಮರ ನಿರ್ವಹಿಸುವ ಮತ್ತು ನಿಯಂತ್ರಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಸರ್ಕಾರವು ವಕ್ಸ್‌ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದರೆ,  

ಈ ತಿದ್ದುಪಡಿಗಳ ಅಡಿಯಲ್ಲಿ ಅದು ಈಗ ಅದರ ಮಾಲೀಕರಾಗಬಹುದು ಏಕೆಂದರೆ ವಿವಾದವನ್ನು ಸರ್ಕಾರ ನೇಮಿತ ಅಧಿಕಾರಿ ನಿರ್ಧರಿಸುತ್ತಾರೆ.ವಕ್ಸ್‌ ಮಂಡಳಿ ಮತ್ತು ಕೇಂದ್ರ ವಕ್ಸ್‌ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಸದಸ್ಯರಾಗಿರಬೇಕು ಎಂಬ ನಿಯಮವನ್ನು ಕೊನೆಗೊಳಿಸಲಾಗಿದೆ. ಕೇಂದ್ರ ವಕ್ಸ್‌ ಮಂಡಳಿ ಮತ್ತು ವಕ್ಸ್‌ ಮಂಡಳಿಗಳಿಗೆ ಚುನಾವಣೆಗಳನ್ನು ನಾಮನಿರ್ದೇಶನಗಳ ಮೂಲಕ ಬದಲಾಯಿಸಲಾಗಿದೆ. ಬಳಕೆದಾರರಿಂದ ವಕ್ಸ್‌ , ವಕ್ಫ್‌ ಬೈ ಯೂಸರ್ ಅನ್ನು ಈಗ ನೋಂದಾಯಿಸಬೇಕಾಗುತ್ತದೆ,  

ಮತ್ತು ಯಾವುದೇ ವಿವಾದ ಉದ್ಬವಿಸಿದರೆ, ಅಂತಹ ಆಸ್ತಿಗಳು ತಮ್ಮ ವಕ್ಸ್‌ ಸ್ನಾನಮಾನವನ್ನು ಕಳೆದುಕೊಳ್ಳಬಹುದು. ಈ ಎಲ್ಲಾ ತಿದ್ದುಪಡಿಗಳು ಮುಸ್ಲಿಮರು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸುವುದು. ನಡೆಸುವುದು ಮತ್ತು ನಿರ್ವಹಿಸುವುದನ್ನು ತಡೆಯುವುದಕ್ಕೆ ಸಮಾನವಾಗಿವೆ.ಆದ್ದರಿಂದ, ಕೆಳಗೆ ಸಹಿ ಮಾಡಿರುವ ನಾವು, ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಈ ಎಲ್ಲಾ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ನಿಮ್ಮನ್ನು ಗೌರವದಿಂದ ವಿನಂತಿಸುತ್ತೇವೆ.ನಮ್ಮ ಈ ವಿನಮ್ರ ವಿನಂತಿಯನ್ನು ನೀವು ಗಂಭೀರವಾಗಿ ಪರಿಗಣಿಸುತ್ತೀರಿ ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್‌ ಕೊಪ್ಪಳ ಜಿಲ್ಲಾ ಘಟಕ ಭಾವಿಸುತ್ತೇವೆ. ಎಂದು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕೀನಿ ವಿವರಿಸಿ ಕೂಡಲೇ ಕೇಂದ್ರ ಸರ್ಕಾರ ಅಂಗೀಕರಿಸಿರುವ ವಕ್ಫ್‌ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಮೌಲಾನ ಮೊಹಮ್ಮದ್ ಯಾಸೀನ್ ತಸ್ಕಿನ್ ಖಾದ್ರಿ. ಮೌಲಾನ ಹಾಫಿಸ್ ಸಿರಾಜುದ್ದೀನ್ ಅಲ್ಲದೆ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಸಮಾಜದ ನಾಯಕರಾದ ಕೆಎಂ ಸಯ್ಯದ್ ಬಾಶು ಸಾಬ್ ಕತೀಬ್ ಅಂಜುಮನ್ ಅಧ್ಯಕ್ಷರಾದ ಆಸಿಫ್ ಕರ್ಕೇಹಳ್ಳಿ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ಬರ್ ಪಲ್ಟನ್ ನಾಸೀರ್ ಕಂಠಿ ಸೈಯದ್ ನಾಸೀರ್ ಹುಸೇನಿ ಜಮಾತೆ ಇಸ್ಲಾಮಿ ಹಿಂದ ಅಧ್ಯಕ್ಷ ಹಿದಾಯತ್ ಹುಲ್ ಹಫೀಜ್ ಹಸಾದ್ ನಜೀರ್ ಆದೋನಿ. ಮಾನ್ವಿ ಪಾಷಾ ಜೀಲಾನ್ ಖಲೆದಾರ್ ಮೈ ಲೈಕ್ ಜಾಫರ್ ಸಾಬ್ ಸಂಗಟಿ ಸಲೀಂ ಮಳಕೊಪ್ಪ ಸಲೀಂ ಮಂಡಲಗೇರಿ ಖ ಟ ರಫೀಕ್ ಹಾಜಿ ಹುಸೇನಿ ರಫೀ ಧಾರವಾಡ್ ಎಜ್ದಾನಿ ಪಾಷಾ ಖಾದ್ರಿ ಗಫಾರ್ ದೀಡ್ಡಿ ಸಲೀಂ ಖಾದರಿ ಸೇರಿದಂತೆ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.