ಹಾವೇರಿ11: :ರಾಷ್ಟ್ರದ ಆಡಳಿತ ನಿರ್ವಹಣೆಗಾಗಿ ಜನ ಕಲ್ಯಾಣ ಯೋಜನೆಗಳ ತಯಾರಿಸಲು ಅತ್ಯಂತ ಮಹತ್ವವಾದ ಜನಗಣತಿ ಕಾರ್ಯ ಈ ವರ್ಷ ಮೊಬೈಲ್ ಆ್ಯಪ್ ಮೂಲಕ ನಡೆಯಲಿದೆ ತ್ವರಿತ ಹಾಗೂ ಪಾರದರ್ಶಕ ಮಾಹಿತಿ ಸಂಗ್ರಹ ವಿಶ್ಲೇಷಣೆಗೆ ಈ ತಂತ್ರಜ್ಞಾನ ಅನುಕೂಲವಾಗಲಿದೆ ಜನಗಣತಿಯ ಪ್ರಕ್ರಿಯೆಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಎಸ್ ಯೋಗೇಶ್ವರ ಅವರು ಹೇಳಿದರು.
ಭಾರತ ಜನಗಣತಿ 2021 ರ ಅಂಗವಾಗಿ ಇದೇ ಏಪ್ರೀಲ್ 15 ರಿಂದ ಆರಂಭಗೊಳ್ಳಲಿರುವ ಮನೆಗಣತಿ ಕಾರ್ಯದ ಕ್ಷೇತ್ರ ತರಬೇತುದಾರರಿಗಾಗಿ(ಫೀಲ್ಡ್ ಟ್ರೈನರ್) ಆಯೋಜಿಸಲಾದ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣತಿ ಕಾರ್ಯದಲ್ಲಿ ಮಾಹಿತಿ ಸಂಗ್ರಹ ನಿಖರವಾಗಿರಬೇಕು, ಇದೇ ಏಪ್ರೀಲ್ 15ರಿಂದ ಮೇ 29ರವರೆಗೆ ಮನೆ ಪಟ್ಟಿ ಕಾಯರ್ಾಚರಣೆ ಹಾಗೂ ಎನ್.ಪಿ.ಆರ್ ಉನ್ನತೀಕರಣ ನಡೆಯಲಿದೆ, ಮನೆ ಮನೆಯ ಭೇಟಿ ಸಂದರ್ಭದಲ್ಲಿ ಮನೆಯವರೊಂದಿಗೆ ಗಣತಿ ಕಾರ್ಯದ ಉದ್ದೇಶ ಕುರಿತಂತೆ ಮನವರಿಕೆ ಮಾಡಿಕೊಡಬೇಕು, ಇದರಿಂದ ಮನೆಯ ಯಜಮಾನರಿಂದ ನಿಖರ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತದೆ, ಮಾಹಿತಿ ಸಂಗ್ರಹದ ಸಂದರ್ಭದಲ್ಲಿ ಮಾಹಿತಿಯ ಗ್ರಹಿಕೆ, ವಿಶ್ಲೇಷಣೆ ಹಾಗೂ ವಗರ್ಿಕರಣ ಜನಗಣತಿಯ ದೃಷ್ಠಿಕೊನವಿಟ್ಟುಕೊಂಡು ಮಾಹಿತಿ ಕಲೆ ಹಾಕಬೇಕು ಎಂದು ಗಣತಿದಾರರಿಗೆ ತರಬೇತಿದಾರರು ಪರಿಣಾಮಕಾರಿಯಾಗಿ ಸ್ಪಷ್ಠವಾಗಿ ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.
ಈ ಬಾರಿ ಮೊಬೈಲ್ ಆ್ಯಪ್ಗಳ ಮೂಲಕ ಜನಗಣತಿ ಮಾಹಿತಿ ಸಂಗ್ರಹಣೆಗೆ ಅವಕಾಶ ಕಲ್ಪಿಸಲಾಗಿದೆ. ಗಣತಿದಾರರಿಗೆ ಈ ಕುರಿತಂತೆ ಪ್ರೇರೆಪಿಸಿ ಜನಗಣತಿಯ ದತ್ತಾಂಶ ಎಲ್ಲ ದೃಷ್ಠಿಕೊನದಿಂದಲೂ ದೋಷರಹಿತವಾಗಿದಲ್ಲಿ ಮಾತ್ರ ಸಮರ್ಪಕ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ, ಈ ಬಗ್ಗೆ ಗಣತಿದಾರರಿಗೆ ತರಬೇತಿಯ ಅವಧಿಯಲ್ಲಿ ಸ್ಪಷ್ಠವಾದ ಅರಿವನ್ನು ಮೂಡಿಸಿ ಎಂದರು.
ಮನೆಗಳಿಗೆ ಭೇಟಿ ನೀಡಿದಾಗ ತಾವು ಗಣತಿ ಮಾಡುವ ಪೂರ್ವದಲ್ಲಿ ತಮ್ಮ ಗಣತಿಯ ಗಡಿ ರೇಖೆಗಳನ್ನು ಗುರುತಿಸಿಕೊಳ್ಳಿ, ಗಣತಿ ಕಾರ್ಯದಲ್ಲಿ ಸ್ಥಳೀಯವಾಗಿ ಯಾವುದೇ ಸಮಸ್ಯೆಯಾದಲ್ಲಿ ಜನಪ್ರತಿನಿಧಿಗಳ ಸಹಕಾರ ಪಡೆದು ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಜನಗಣತಿ ನೊಡೆಲ್ ಅಧಿಕಾರಿ ಎಂ.ಎಸ್ ಮಂಜುನಾಥ ಅವರು ಮಾತನಾಡಿ, ಜನಗಣತಿ ಕಾರ್ಯದಲ್ಲಿ ಕ್ಷೇತ್ರ ಪಾಲಕರ ಮಹತ್ವ ಕುರಿತಂತೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಮನೆಪಟ್ಟಿ ಮತ್ತು ಮನೆಗಣತಿ (ಎಚ್.ಎಲ್.ಓ) ಮತ್ತು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣಾ ಕಾರ್ಯ ಇದೇ 2020ರ ಏಪ್ರಿಲ್ 15ರಿಂದ ಮೇ 29 ರವರೆಗೆ ನಡೆಯಲಿದೆ. 2021ರ ಫೆಬ್ರುವರಿ 9ರಿಂದ 28ರವರೆಗೆ ಜನಸಂಖ್ಯಾ ಗಣತಿ ನಡೆಯಲಿದೆ ಎಂದು ಹೇಳಿದರು.
ಉಪನ್ಯಾಸಕ ಅರವಿಂದ ಐರಣಿ ಅವರು ಮಾತನಾಡಿ, ಜನಗಣತಿ ವಿಧಾನ, ಮಾಹಿತಿ ಸಂಗ್ರಹದ ಮಾದರಿಗಳು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲು ಅನುಸರಿಸಬೇಕಾದ ಕ್ರಮಗಳ ಮೇಲ್ವಿಚಾರಣೆ ಕುರಿತಂತೆ ವಿವರಿಸಿದರು. ಕಾಯರ್ಾಗಾರದಲ್ಲಿ ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಎಚ್.ವಾಯ್ ಮಿಸೆ, ಚುನಾವಣಾ ತಹಶಿಲ್ದಾರ್ ಪ್ರಶಾಂತ ನಾಲವಾರ್, ಮಾಸ್ಟರ್ ಟ್ರೈನರ್ಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಅಧಿಕಾರಿ ಎಸ್.ಎಸ್ ಅಡಿಗ ಮತ್ತಿತರರು ಹಾಜರಿದ್ದರು.