ಹೂವಿನ ಹಡಗಲಿ 11: ಆಟ ಮಕ್ಕಳ ಹಕ್ಕು ಪ್ರೋತ್ಸಾಹ ನೀಡಬೇಕು ಎಂದು ತಾಲೂಕು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್ ಹೇಳಿದರು.
ಪಟ್ಟಣದ ತುಂಗಭದ್ರಾ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ತುಂಗಭದ್ರಾ ವಿದ್ಯಾ ಸಂಸ್ಥೆ ಸಿ ಡಬ್ಲ್ಯೂ ಸಿ ಭೀಮಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಆಟ ದಿನಾಚರಣೆ ಅಂಗವಾಗಿ ವಿವಿಧ ಆಟೋಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಆಟಗಳಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಿದರು.
ಆಟಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಸ್ನೇಹ ವೃದ್ಧಿ ಭ್ರಾತೃತ್ವ ಸೌಹಾರ್ದತೆ ಕಾಪಾಡಲು ಸಹಕಾರಿ ಆಗುತ್ತದೆ ಎಂದರು.ಬರೀ ಮೊಬೈಲು ಮೇಲೆ ಅವಲಂಬಿತರಾಗದೆ ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು.ಉತ್ತಮ ಆಟದಿಂದ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಬಹುದು ಎಂದು ಹೇಳಿದರು.
ಮುಖ್ಯ ಗುರು ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.ಸಿ ಡಬ್ಲ್ಯೂ ಸಿ ತಾಲೂಕು ಸಂಚಾಲಕಿ ಕರಿಬಸಮ್ಮ, ವಲಯ ಸಂಚಾಲಕ ವೀರಣ್ಣ ಅಂತಾರಾಷ್ಟ್ರೀಯ ಆಟದ ಕುರಿತು ಮಾಹಿತಿ ನೀಡಿದರು.ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ ಬಸಪ್ಪ ಕೆ ವೈ ಜಯಮ್ಮ ಪ್ರತಿಮಾ ಎನ್ ಗೀತಾ ಪಿ ಎಂ ಆನಂದ್ ಜಿ ಎಲ್ ಗಿಡ್ಡಾನಾಯ್ಕ್ ರೇಖಾ ಎಸ್ ಇತರರು ಉಪಸ್ಥಿತರಿದ್ದರು.
ಮುದೇನೂರು ಸೋಗಿ ಇಟಿಗಿ ಹೊಳಗುಂದಿ ಮಹಾಜನದಹಳ್ಳಿ ಗ್ರಾಮೀಣ ಪ್ರದೇಶದ ಭೀಮಸಂಘದ ಮಕ್ಕಳು ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು.