ಜಿಲ್ಲಾದ್ಯಂತ ಕೆಲವೊಂದು ಕಂಪನಿಗಳು ಕಳಪೆ ಬೀಜ ಮಾರಾಟ
ಹಾವೇರಿ 10 : ನಾವು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಹಾವೇರಿ ಜಿಲ್ಲಾದ್ಯಂತ ಕೆಲವೊಂದು ಕಂಪನಿಗಳು ಕಳಪೆ ಬೀಜ ಮಾರಾಟ ಮಾಡುತ್ತಿವೆ. ಇದರ ಹಿಂದೆ ದೊಡ್ಡ ಚಾಲವಿದೆ ಎನ್ನಲಾಗುತ್ತಿದೆ. ಹಾಗೂ ಕೆಲವೊಂದು ಖಾಸಗಿ ಕಂಪನಿಗಳು ಸರ್ಕಾರದ ಪರವಾನಿಗಿ ಪಡೆಯದೆ ಅವೈಜ್ಞಾನಿಕವಾಗಿ ಕಳಪೆ ಬೀಜವನ್ನು ತಯಾರಿಸಿ ರೈತರಿಗೆ ವಿತರಿಸುತ್ತಿದ್ದಾರೆ ಮತ್ತು ಈ ವಿಚಾರ ತಮ್ಮ ಇಲಾಖೆಯ ಕೆಲವೊಂದು ಅಧಿಕಾರಿಗಳ ಗಮನಕ್ಕೆ ಇದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ಮಾನ್ಯರೆ ರೈತರು ಸಾಲ ಸೋಲ ಮಾಡಿ ಬಿತ್ತನೆಗಾಗಿ ಬೀಜಗಳನ್ನು ಖರೀದಿ ಮಾಡಿ ಬಿತ್ತನೆ ಮಾಡುತ್ತಿದ್ದಾರೆ. ಆದರೆ ಬಿತ್ತನೆ ಮಾಡಿದ ಬೀಜಗಳು ಮೊಳಕೆಯಾಗದೆ ಮತ್ತು ಹುಟ್ಟದೆ ಇರುವುದರಿಂದ ರೈತರಿಗೆ ಬಹಳ ನಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರು ಇಂತಹ ಕಳಪೆ ಬೀಜ ಬಿತ್ತನೆ ಮಾಡಿ ಯಾವುದೇ ರೀತಿ ಫಸಲುಗಳು ತಮ್ಮ ಕೈಗೆ ಸಿಗದೆ ತಾವು ಸಾಲ ಮಾಡಿ ತಮ್ಮ ಸಾಲವನ್ನು ತೀರಿಸಲಾಗದೆ ಇಂತಹ ಕಳಪೆ ಬೀಜ ಬಿತ್ತನೆ ಮಾಡಿ ಅನಾಹುತದ ಹಂತಕ್ಕೆ ತಲುಪುತ್ತಿದ್ದಾರೆ. ಆದ್ದರಿಂದ ಈ ಕಳಪೆ ಬೀಜ ಮಾರಾಟ ಮಾಡುತ್ತಿರುವ ಕಂಪನಿಗಳು ಹಾಗೂ ಅಂಗಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವ್ಯಾಪ್ತಿಗೆ ಬರುವ ತಾಲ್ಲೂಕಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಮಾನ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ಮರಾಠೆ ಮತ್ತು ಉಪಾಧ್ಯಕ್ಷರಾದ ಯುಸೂಫಅಲಿ ಕರ್ಜಗಿ ಮನವಿ ಸಲ್ಲಿಸಿದರು. ಈ ಸಂದರ್ಬದಲ್ಲಿ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾಬಾಯಿ ಲಮಾಣಿ, ಹಾವೇರಿ ತಾಲೂಕು ಅಧ್ಯಕ್ಷರಾದ ರಾಜಾಬಕ್ಷ ಮಾನೆಗಾರ, ತಾಲೂಕು ಗೌರವಾಧ್ಯಕ್ಷರಾದ ಪ್ರದೀಪ ಗೌಡರ. ಬ್ಯಾಡಗಿ ತಾಲೂಕು ಅಧ್ಯಕ್ಷರಾದ ಬಸವರಾಜ ಪಟ್ಟಣಶೆಟ್ಟಿ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷರು ರಾಮಚಂದ್ರ ಹಿಂಡಸಗಟ್ಟಿ, ರೇಷ್ಮಾ ಸನಾವುಲ್ಲಾ ಪುರಗೇರಿ, ರಿಜವಾನ ಪುರದಗೇರಿ, ನಾಸೀರಸಾಬ ಸೈಕಲಗಾರ, ಜ್ಯೋತಿ ಅರ್ಕಸಾಲಿ, ಅನ್ನೊಪೂರ್ಣ ಅರಕೇರಿ. ಇಬ್ರಾಹಿಂ ಪುರದಗೇರಿ, ಹೊನ್ನೂರಸಾಬ ಕೊಪ್ಪಳ. ರವಿ