ರಾಣೇಬೆನ್ನೂರು 08 : ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳುಗೆಡುವುತ್ತಿದ್ದು ಇದು ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿದ್ದು ಪರಿಸರ ಸಮತೋಲ ಮತ್ತು ಪರಿಸರ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಅನಿವಾರ್ಯವಾಗಿದೆ ಎಂದು ಗ್ರೀನ್ ಎನರ್ಜಿ ಬಯೋರಿಪೈನರೈಜ್ ಆ್ಯಂಡ್ ಗೋಲ್ಡನ್ ಹ್ಯಾಚರೀಸ್ ಪ್ರೈ.ಲಿ. ಹನುಮನಹಳ್ಳಿ ಘಟಕದ ಯುನೆಟ್ ಹೆಡ್ ರಮೇಶ ಪೂಜಾರಿಯವರು ಹೇಳಿದರು.
ಅವರು ನಿನ್ನೆ ಕಂಪನಿಯಲ್ಲಿ ವಿಶ್ವ ಪರಿಸರದ ಅಂಗವಾಗಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ಲಾಸ್ಟಿಕ್ ಮ್ಯಾನ್-1 ಕೊನೆಗಾಣಿಸಿ ಎಂಬ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಕಂಪನಿಯ ಆವರಣದಲ್ಲಿ ನೂರಾರು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿ ಮಣ್ಣು, ಮರಳು, ಮರ, ಗಿಡಗಳು ಪ್ರಕೃತಿಯ ಸಂಪತ್ತುಗಳು ಈ ಸಂಪತ್ತನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಲೂಟಿ ಹೊಡೆಯುತ್ತಿದ್ದು ಇವುಗಳ ರಕ್ಷಣೆಯಾಗಬೇಕಾಗಿದೆ ಎಂದರು.
ಇನ್ನೊಬ್ಬ ಮುಖ್ಯ ಅತಿಥಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ ಕಂಪನಿಯ ಒಳಗೆ ಉತ್ತಮ ಗಿಡಗಳನ್ನು ನೆಟ್ಟು ಸುತ್ತಮುತ್ತಲಿನ ಉತ್ತಮ ವಾತಾವರಣಕ್ಕೆ ತಾವುಗಳು ಸಾಕ್ಷಿಬೂತರಾಗಬೇಕೆಂದರು.
ವೇದಿಕೆಯ ಮೇಲೆ ಗೋರಕನಾಥ ಗಾಯಕವಾಡ, ಪ್ಲಾಂಟ್ ಹೆಡ್ ನಾಗವೆಂಕಟ ನರಸಿಂಹ , ಎಚ್.ಆರ್. ಮಾಂತೇಶ ಪಾಟೀಲ, ಮುದೇನೂರು ಗ್ರಾ.ಪಂ. ಅಧ್ಯಕ್ಷಿಣಿ ರೇಖಾ ಮಂಜಪ್ಪ ಪುಟ್ಟಕ್ಕನವರ, ಕಂಪನಿಯ ಎಚ್.ಆರ್. ಮಾಲೇಶ ಪಾಟೀಲ, ಮಂಜಪ್ಪ ಪುಟ್ಟಪ್ಪನವರ, ಕಂಪನಿಯ ನೌಕರರಾದ ನಿಖಿಲ ರಡ್ಡಿ, ಕುಮಾರ ಬೆಣ್ಣಿ, ಸಚಿನ್ ಸೇರಿದಂತೆ ಕಂಪನಿಯ 500 ನಕ್ಕೂ ಹೆಚ್ಚು ಕಾರ್ಮಿಕರು, ಕ್ವಾಲಿಟಿ ಹೆಡ್ ಶಶಿಧರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಂಪನಿಯ ಮಹಿಳಾ ಸಿಬ್ಬಂದಿಯವರು ಪಾರ್ಥನೆಗೀತೆ ಹಾಡಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.