ಪೌರ ನೌಕರರ ಮುಷ್ಕರ ಬೇಡಿಕೆ ಈಡೇರಿರುವರೆಗೆ ಮುಂದುವರಿಕೆ
ರನ್ನ ಬೆಳಗಲಿ 30: ಪಟ್ಟಣ ಪಂಚಾಯತಕಾರ್ಯಾಲಯದಲ್ಲಿ ನೌಕರ ಸಂಘದ ಅಡಿಯಲ್ಲಿ ಜರುಗಿದ ಅನಿರ್ದಿಷ್ಟ ಅವಧಿ ಪೌರಕಾರ್ಮಿಕರ ಮುಷ್ಕರಕ್ಕೆ ಸ್ಥಳೀಯ ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮೀತಿ ಮುಖಂಡರು ಮುಷ್ಕರಕ್ಕೆ ಬೆಂಬಲ ನೀಡಿ. ಮುಷ್ಕರದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಪೌರಕಾರ್ಮಿಕರ ಬೇಡಿಕೆ ಈಡೇರಿಸಬೇಕೆಂದು ಸಂಘಟನೆಯ ಅಧ್ಯಕ್ಷರಾದ ಭೂತಪ್ಪ ದೊಡಮನಿ, ಉಪಾಧ್ಯಕ್ಷರಾದ ಲಕ್ಷ್ಮಣ ಡೊಂಕ್ಕವ್ವಗೋಳ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿ, ಹೋರಾಟದಲ್ಲಿ ಭಾಗಿಯಾದರು. ಸಂಘಟನೆ ಮುಖನರಾದ ಯಮನಪ ್ಪದೊಡ್ಡಮನಿ, ಕಾಶಿನಾಥ ಕೂಗಾಟೆ ಬೆಳಗಲಿ ಪಟ್ಟಣ ಪಂಚಾಯಿತಿಯ ಪೌರ ನೌಕರರ ಅನಿರ್ದಿಷ್ಟಅವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ, ಘಣ ಸರ್ಕಾರವು ಪೌರ ಕಾರ್ಮಿಕರ ಎಲ್ಲಾ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು. ಇವರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತೇವೆ. ನಾಲ್ಕು ದಿನಗಳಲ್ಲಿ ಪೌರಕಾರ್ಮಿಕರು ಕೆಲಸದಲ್ಲಿ ಭಾಗಿಯಾಗದೆಇದ್ದುದ್ದರಿಂದ ಪಟ್ಟಣವು ಸ್ವಚ್ಛತೆ ಇಲ್ಲದೆ ಮಲಿನಗೊಳ್ಳುತ್ತಿದೆ. ಈ ಹೋರಾಟ ಇನ್ನೂ ಮುಂದುವರಿದರೆ ನಾಗರಿಕರು ಅನಾರೋಗ್ಯಕ್ಕೆ ತುತ್ತಾಗುವದರ ಜೊತೆಗೆ ಅನೇಕ ಸಂಕಷ್ಟಗಳಿಗೆ ಒಳಗಾಗಬಹುದು ಸರ್ಕಾರಆದಷ್ಟು ಬೇಗ ಪೌರಕಾರ್ಮಿಕರ ಬೇಡಿಕೆ ಇಳಿರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಪ.ಪಂ ಸದಸ್ಯರಾದ ಮುಬಾರಕ್ಅತ್ತಾರ ಮುಖಂಡರಾದ ಯಮನಪ್ಪ ಪೂಜೇರಿ,ಶೆಟ್ಟೆಪ್ಪಗುಡ್ಲಾರ, ಲಕ್ಷ್ಮಣ ಪೂಜೇರಿ,ರವಿ ಮೇತ್ರಿ ಪೌರ ನೌಕರರ ಪಟ್ಟಣದ ಶಾಖಾಧ್ಯಕ್ಷರಾದ ಮಹಾಲಿಂಗ ಸಾಮೆರ, ವಿಜಯ ಹಾದಿಮನಿ, ಪಿ ಡಿ ನಾಗನೂರು, ಸತ್ಯಪ್ಪ ಹನಗಂಡಿ, ರಾಮಣ್ಣ ಹುನ್ನೂರ, ರಾಜು ಚಮಕೇರಿ, ರಾಜು ಮುಗಳುಖೋಡ ಹಾಗೂ ಅಪಾರ ಸಂಖ್ಯೆಯ ಪೌರಕಾರ್ಮಿಕರು ಉಪಸ್ಥಿತರಿದ್ದರು.