ಕೃಷಿ ಸಹಕಾರ ಸಂಘದ ಮುಖ್ಯ ವ್ಯವಸ್ಥಾಪಕ ಸುನಿಲ್ ಉಮರೇ ಅವರಿಗೆ ಸತ್ಕಾರ
ಸಂಬರಗಿ, 08 : ಖೀಳೀಗಾಂವ ಗ್ರಾಮದ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘದಮುಖ್ಯ ವ್ಯವಸ್ಥಾಪಕ ಸುನಿಲ್ ಉಮರೇ, ಜಿಲ್ಲಾ ಕೇಂದ್ರ ಬ್ಯಾಂಕ್ ಇನ್ಸ್ಪೆಕ್ಟರ್ ರಮೇಶ್ ಗಲಲಿ ಮತ್ತು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಸ್ತಿ ನಿಲಯದ ಅಡುಗೆಯವರಾದ, ಶಾಮಲಾದೇವಿ ಶಿವಯ್ಯ ಅವರ ನಿವೃತ್ತಿಯ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಸತೀಶ್ ಹೊಣ್ಣಾಗೋಳು ಹಾಗೂ ಇನ್ನಿತರ ಕಮಿಟಿ ಪದಾಧಿಕಾರಿ ಅವರಿಗೆ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ನೂತನ ವ್ಯವಸ್ಥಾಪಕ ಸುನಿಲ್ ಉಮರೇ ಮಾತನಾಡಿ ಎಲ್ಲಾ ಸದಸ್ಯರು ನನಗೆ ಜವಾಬ್ದಾರಿಯನ್ನು ವಹಿಸಿದ್ದಾರೆ ಮತ್ತು ಅದನ್ನು ಪ್ರಾಮಾಣಿಕವಾಗಿ ಅನುಸರಿಸುವ ಮೂಲಕ ಎಲ್ಲಾ ಸದಸ್ಯರು ಮತ್ತು ರೈತರಿಗೆ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು. ಯಾವುದೇ ಸಮಸ್ಯೆ ಇದ್ದರೆ, ನಾನು ನಿಮ್ಮ ಸಹಾಯವನ್ನು ತೆಗೆದುಕೊಂಡು ಆ ಸಮಸ್ಯೆಯನ್ನು ಪರಿಹರಿಸುತ್ತೇನೆ. ಎಲ್ಲರ ಸಹಕಾರ ಅತ್ಯಗತ್ಯ. ಈ ಸನ್ಮಾನ ನನ್ನದಲ್ಲ, ಎಲ್ಲರದ್ದೆಂದು ಎಲ್ಲರೂ ಇದೆ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ದೇವಸ್ತಾನ ಸಮಿತಿ ಅಧ್ಯಕ್ಷ ಸತೀಶ್ ಹೊನ್ನಗೋಳ, ಸಂಜಯ್ ಉಮರೇ, ಗಣೇಶ್ ಹೊನ್ನಗೋಳ, ರಾಜು ಬಾಗಲಿ, ರಮೇಶ್ ಪಾಟೀಲ್ ದರ್ಯಪ್ಪ ದಿವಾನಗೋಳ, ಅಣ್ಣಪ್ಪ ಕಡಿಮಾನಿ, ರವಿ ನಾಗೋಳ, ಅನೇಕ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.