ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Talent award for talented students

ಕುಷ್ಟಗಿ 23 : ಕೊಪ್ಪಳ ಲೋಕಸಭಾಕ್ಷೇತ್ರದ ವ್ಯಾಪ್ತಿಯ ಕುಷ್ಟಗಿ ಮತಕ್ಷೇತ್ರದಲ್ಲಿ ಕುಷ್ಟಗಿ ತಾಲೂಕ ಹಾಲುಮತ ಸಮಾಜ ಹಾಗೂ ಹಾಲುಮತ ಮಹಾಸಭಾ ಹಾಗೂ ಕನಕ ನೌಕರರ ಸಂಘ ಕುಷ್ಟಗಿ ಸಹಯೋಗದಲ್ಲಿ 2024 - 25 ನೇ ಸಾಲಿನ ಎಸ್‌ಎಸ್‌ಎಲ್ ಸಿ ಹಾಗೂ ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರಿ ಅವರ ಮುಂದಿನ ವಿದ್ಯಾಭ್ಯಾಸ ಉನ್ನತ ಮಟ್ಟಕ್ಕೆ ಹೋಗಲೆಂದು ಆಶಿಸಿದರು.   

ಈ ಸಂದರ್ಭದಲ್ಲಿ ಕುಷ್ಟಗಿ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್‌ರವರು ಕನಕ ಗುರುಪೀಠದ ಶಾಖಾ ಮಠದಜಗದ್ಗುರು ಶಿವಸಿದ್ಧೇಶ್ವರ ಸ್ವಾಮಿಗಳು, ಮತ್ತೋರ್ವ ಸಹೋದರಇನ್ ಸೈಟ್‌ಐಎಎಸ್‌ಇನ್ಸ್ಟಿಟ್ಯೂಟ್ ನ ಸಂಸ್ಥಾಪಕರಾದ ಜಿ ಬಿ ವಿನಯ್‌ಕುಮಾರ್‌ರವರು,  ಕುರಿ ಮತ್ತುಉಣ್ಣೆ ನಿಗಮದ  ಮಾಜಿ ಅಧ್ಯಕ್ಷರಾದ ಶರಣು ತಳ್ಳಿಕೇರಿ ರವರು ಹಾಗೂ ಸಮಾಜದ ಹಿರಿಯರಾದ ಮಲ್ಲಣ್ಣ ಪಲ್ಲೆದ್, ಫಕೀರ​‍್ಪ ಚಳ್ಳಿಗೇರಿ ರವರು ಕುಷ್ಟಗಿ ಹಾಲುಮತ ಮಹಾಸಭಾ ತಾಲೂಕು ಅಧ್ಯಕ್ಷರಾದ ಗೂರ​‍್ಪಕುರಿ, ಮಂಜುನಾಥ ನಾಲಗಾರ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು