ಶಿಕ್ಷಕಿ ಜೀನತ್ ಬೇಗಂ ಸೇವಾ ನಿವೃತ್ತಿ: ಸನ್ಮಾನ, ಆತ್ಮೀಯ ಬೀಳ್ಕೊಡುಗೆ

Teacher Zeenat Begum retires from service: Honored, fond farewell

ಕೊಪ್ಪಳ 01:  ನಗರದ ಸರ್ದಾರ ಗಲ್ಲಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡ ಜೀನತ್ ಬೇಗಠ ರವರಿಗೆ ಶನಿವಾರದಂದು ಶಾಲಾ ಸಭಾಂಗಣದಲ್ಲಿ ಎಲ್ಲಾ ಶಿಕ್ಷಕರು ಸೇರಿ ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೊಟ್ಟರು, ಜೀನತ್ ಬೇಗಮ್ ಅವರು ಮೂಲತಃ ಕೊಪ್ಪಳ ಜಿಲ್ಲೆ, ಕೊಪ್ಪಳ ನಗರದ ನಿವಾಸಿಯಾಗಿದ್ದು ಅವರು  ನಗರದ ವಿವಿಧ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಡಲಾಯಿತು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಶೇಖ್ ನಜಮುದ್ದೀನ್ ಯವರು ಮಾತನಾಡಿ ಉರ್ದು ಶಿಕ್ಷಕಿ ಜೀನತ್ ಬೇಗಮ್ ಅವರ ಸೇವೆ ಮತ್ತು ಕಾರ್ಯ ವೈಖರಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು, ಈ ಸಂದರ್ಭದಲ್ಲಿ ನಿವೃತ್ತಿ ಗೊಂಡ ಸಹ ಶಿಕ್ಷಕಿ ಜೀನತ್ ಬೇಗಮ್ ರವರ ಪತಿ ಮೊಹಮ್ಮದ್ ಅಬ್ದುಲ್ ಸಮೀರ್, ,ಶಾಲೆಯ ಸಹ ಶಿಕ್ಷಕರುಗಳಾದ ಹಬೀಬ್ ಉರ್  ರೆಹಮಾನ್, ಗೀತಾ ಬಾಯಿ ದೇಶಪಾಂಡೆ, ಯಲ್ಲಮ್ಮ,ಕ್ಯೂಕ್ ಅಲ್ಲದೆ ಸರಕಾರಿ ಉರ್ದು ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಫೀಸ್ ಖಾನ್ ಪಠಾನ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.