ಸಂಬರಗಿ 05: ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇವರ ಸತತ ಪ್ರಯತ್ನದಿಂದ ಬರಗಾಲ ಪೀಡಿತ ಸಂಘಗಳಿಗೆ ಸಾಲ ನೀಡಿ ಸಂಘವು ಅಭಿವೃದ್ಧಿ ಪತ್ತದತ ನಡೆಯುತ್ತಿದ್ದು ರೈತರು ಕಷ್ಟದಲ್ಲಿ ಸಿಲುಕಿದಾಗ ಸಂಘದಿಂದ ಸಾಲ ಪಡೆದು ರೈತರಿಗೆ ಅನೂಕುಲವಾಗುತ್ತಿದೆಂದು ಜೈ ಹನುಮಾನ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀನ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾದ ಮಹಾದೇವ ಕೋರೆ ಹೇಳಿದರು.
ಮದಭಾವಿ ಗ್ರಾಮದಲ್ಲಿ ಸಂಘದಿಂದ ರೈತರಿಗೆ ಸಾಲ ವಿತರಣೆ ಮಾಡಿ ಮಾತನಾಡಿದ ಅವರು ಶಾಸಕ ಲಕ್ಷ್ಮಣ ಸವದಿ ಇವರ ಪ್ರಯತ್ನದಿಂದ ಸಂಘಗಳು ಮುಚ್ಚಿ ಹೋಗುವ ಪರಿಸ್ಥಿತಿ ಬಂದಾಗ ಇವರು ಬೆನ್ನೆಲುಬಾಗಿ ನಿಂತು ಅವರ ಕಷ್ಟವನ್ನು ಪರಿಹಾರಿ ಗೆಲ್ಲಿಸಿದ್ದಾರೆ. ನಮ್ಮ ಸಂಘದಿಂದ ಸುಮಾರು 1 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಸಂಘದ ನಿರ್ದೇಶಕರಾದ ದಾದಾಸಾಬ ಮೇತ್ರಿ ಹಣಮಂತ ತೊಡಕರ ಸಿದ್ದಪ್ಪ ಪೋತ್ತದಾರ ಮಹಾದೆವ ಕಾಂಬಳೆ ವಿಜಾನಂದ ಮೇತ್ರಿ ಮಹಾದೇವ ಮಾಳಿ ಮಾರುತಿ ಪಾಟೀಲ ಬಾಹುಬಲಿ ಡಿಗ್ರಜ ಗೋಪಾಲ ಅವಳೆಮುಖ್ಯ ಕಾರ್ಯನಿರ್ವಾಹಕರು ಪರಶುರಾಮ ಬಾಡಗಿ ಇನ್ನಿತರರು ಉಪಸ್ಥಿತರಿದ್ದರು ಕುಮಾರ ಕೋರೆ ಸ್ವಾಗತಿಸಿ ವಂದಿಸಿದರು.