ಹಾವೇರಿ: ಜೂನ್ 05: ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶವಾಗುತ್ತಿದೆ ಹಾಗೂ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ ಸಂಕುಲಕ್ಕೂ ತೊಂದರೆಯಾಗುತ್ತಿದೆ. ಪರಿಸರ ನಾಶವನ್ನು ತಡೆಯಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ನಗರದ ನಂದಿ ಲೇಔಟ್ ಪಾಕರ್್ನಲ್ಲಿ ಶುಕ್ರವಾರ ಅರಣ್ಯ ಇಲಾಖೆ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನೀರೂಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಗಿಡಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರ ಹೊಂದಬಹುದು. ಅರಣ್ಯ ಇಲಾಖೆ ನಗರವನ್ನು ಹಸರೀಕರಣಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಂಡಿದೆ. ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಸಿಗಳನ್ನು ನೆಟ್ಟು ಪೋಷಣೆಮಾಡಿ ಮರವಾಗಿ ಬೆಳೆಸಬೇಕು.
ಅರಣ್ಯ ಇಲಾಖೆಯಿಂದ ನೆಡುವ ಸಸಿಗಳನ್ನು ಸಹ ಕಾಳಜಿಯಿಂದ ನೋಡಿಕೊಳ್ಳಬೇಕು. ನಿಸರ್ಗ ಸಂಪತ್ತು ಹೆಚ್ಚಿದಾರೆ ಜೀವಸಂಕುಲ ಸಂತೃಪ್ತವಾಗಿರುತ್ತವೆ. ಪ್ರಾಣಿ-ಪಕ್ಷಿ ಸಂಕುಲ ಹಾಗೂ ನಾಡು ಸಂಪತ್ತಭರಿತವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಪರಿಸರ ವೈಪರಿತ್ಯದಿಂದಾಗಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ವರದಾ ಸಿರಿ ಎಂಬ ಹೊಸ ಯೋಜನೆ ರೂಪಿಸಿ ಜಿಲ್ಲೆಯಾದ್ಯಂತ ಹಸರೀಕರಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ವರದಾ ನದಿಯ ದಂಡೆಯಲ್ಲಿ 123 ಕಿ.ಮೀ ಸಸಿ ನೆಡುವುದು ಮತ್ತು ನದಿ ದಡದಲ್ಲಿ ರೈತರ ಸಹಭಾಗಿತ್ವದಲ್ಲಿ ಬದು ನಿಮರ್ಾಣ, ಕೃಷಿ ಹೊಂಡ ನಿಮರ್ಾಣ, ರೈತರ ಹೊಲದಲ್ಲಿ ಸಸಿ ಹಚ್ಚುವ ಕೆಲಸಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ 2,600 ಜಲಮೂಲಗಳನ್ನು ಗುರುತಿಸಿ ಜಿ.ಪಿ.ಎಸ್ ಮಾಡಿಕೊಂಡು ಪ್ಲ್ಯಾನ್ ಮಾಡಲಾಗಿದೆ. ಎತ್ತರ ಪ್ರದೇಶದ ನೀರಿನ ಮೂಲ ಮತ್ತು ಕೆಳಮಟ್ಟದ ನೀರಿನ ಮೂಲಗಳನ್ನು ಈಗಾಗಲೇ ಗುರುತಿಸಿ 23ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮನರೇಗಾ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ನೀರುಗಾಲುವೆಗಳು, ಸುತ್ತಮುತ್ತಲಿನಿಂದ ಬರುವ ನೀರು, ಸಕರ್ಾರಿ ಖರಾಬು ಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರಿನ ಮೂಲಗಳನ್ನು ಸಂರಕ್ಷಿಸಿ ನೀರು ತುಂಬಿಸುವ ಕೆಲಸ ಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ ಯಾವುದೇ ಯಂತ್ರ ಬಳಸದೆ ಕೂಲಿಕಾಮರ್ಿಕರನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ನೆಟ್ಟ ಸಸಿಗಳನ್ನು ನಾಗರಿಕರು ಸ್ವಯಂಪ್ರೇರಿತವಾಗಿ ಪೋಷಣೆ ಮಾಡಿದರೆ ನಗರವನ್ನು ಹಸಿರನ್ನಾಗಿ ಮಾಡಬಹುದು ಎಂದು ಹೇಳಿದರು. ಡಿ.ಎಫ್.ಒ ಎನ್.ಇ ಕ್ರಾಂತಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಆಯುಕ್ತರಾದ ಬಸವರಾಜ ಜಿದ್ದಿ, ಡಿ.ವಾಯ್.ಎಸ್.ಪಿ ವಿಜಯಕುಮಾರ ಸಂತೋಷ, ಡಿ.ಎಫ್.ಒ ಕೆ. ದಯಾನಂದಕುಮಾರ, ಎ.ಸಿ.ಎಫ್ ಅಶೋಕ ಗೊಂಡೆ, ಆರ್.ಎಫ್.ಓ ಮಂಜುನಾಥ ಬಾಗೇವಾಡಿ, ಪರಿಸರ ಅಧಿಕಾರಿ ಮಹೇಶ್ವರಪ್ಪ, ನಗರಸಭೆ ಸದಸ್ಯೆ ಲಲಿತಾ ಉಪಸ್ಥಿತರಿದ್ದರು.