ಬೆಳಗಾವಿ 11: ಭಾರತ ವಿಕಾಸ ಪರಿಷತ್ ವತಿಯಿಂದ ಬೆಳಗಾವಿ ನಗರದಲ್ಲಿ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ಜಿಜಿಸಿ ಸಭಾಂಗಣದಲ್ಲಿ ವಿದ್ಯಾರ್ಥಿವೇತನವನ್ನು ನೀಡಿ ವಿಶೇಷವಾಗಿ ಗೌರವಿಸಲಾಯಿತು. ನಿವೃತ್ತ ಮೇಜರ್ ಜನರಲ್ ಕೆ.ಎನ್. ಮಿರಜಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಅಕ್ಷತಾ ಮೋರೆ ಸಂಪೂರ್ಣ ವಂದೇ ಮಾತರಂ ಪ್ರಸ್ತುತಪಡಿಸಿದರು. ಮುಖ್ಯ ಅತಿಥಿಗಳು ಭಾರತ ಮಾತೆ, ಅಹಿಲ್ಯಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿದರು. ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಿನಾಯಕ ಮೋರೆ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು.
ಸ್ವಾತಿ ಘೋಡೇಕರ್ ಪರಿಷತ್ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಾಂಡುರಂಗ ನಾಯಕ ಅತಿಥಿಗಳನ್ನು ಪರಿಚಯಿಸಿದರು. ರಾಮಚಂದ್ರ ಎಡ್ಕೆ ಪುಣ್ಯಶ್ಲೋಕ ಅಹಲ್ಯಾದೇವಿ ಹೋಳಕರ ಅವರ ಜೀವನ ಚರಿತ್ರೆಯನ್ನು ನಿರೂಪಿಸಿದರು.
ಮೇಜರ್ ಜನರಲ್ ಕೆ.ಎನ್. ಮಿರಜಿ ಮಾತನಾಡಿ ಭಾರತೀಯ ಸೇನಾ, ರಾಷ್ಟ್ರೀಯ ಭದ್ರತೆ ಮತ್ತು ಆಪರೇಷನ್ ಸಿಂಧೂರ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ನಗರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ನಿಧಿ ಕಂಗ್ರಾಳಕರ, ನೀಲಾಂಬಿಕಾ ಬುಬ್ನಾಳೆ ಮತ್ತು ಅನುಷಾ ದೇಸಾಯಿ (624/625, ಮೂವರೂ ಸೇಂಟ್ ಜೋಸೆಫ್ ಶಾಲೆ), ಕನ್ನಡ ಮಾಧ್ಯಮದಲ್ಲಿ ಪ್ರಥಮ ಚೈತನ್ಯಾ ಗಡಲಿಂಗಣ್ಣವರ (620/625, ಸರಸ್ವತಿ ಗರ್ಲ್ಸ ಪ್ರೌಢಶಾಲೆ),
ಮರಾಠಿ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪ್ರಸಾದ ಮೊಲೆರಾಖಿ (616/625, ಮರಾಠಿ ವಿದ್ಯಾನಿಕೇತನ) ಅಂತೆಯೇ 12 ನೇ ತರಗತಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ತನ್ವಿ ಪಾಟೀಲ (597/600, ಗೋಗಟೆ ವಾಣಿಜ್ಯ ಕಾಲೇಜು), ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರುತಿ ಆಪಟೆಕರ (594/600, ಆರ್. ಎಲ್. ಎಸ್. ಕಾಲೇಜು) ಮತ್ತು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮಹಾಲಕ್ಷ್ಮಿ ಕುಸಗೂರ(588/600, ಆರ್. ಪಿ. ಡಿ. ಕಾಲೇಜು) ಅವರನ್ನು ಅವರ ಪೋಷಕರು ಜತೆ ವಿದ್ಯಾರ್ಥಿವೇತನ, ವಿಶೇಷ ಪ್ರಮಾಣಪತ್ರಗಳು ಮತ್ತು ಆಕರ್ಷಕ ಸ್ಮರಣಿಕೆಗಳೊಂದಿಗೆ ವಿಶೇಷವಾಗಿ ಗಣ್ಯರಿಂದ ಗೌರವಿಸಿದರು.
ಮುಖ್ಯ ಅತಿಥಿ ಮೇಜರ್ ಜನರಲ್ ಕೆ.ಎನ್. ಮಿರಜಿ ಅವರನ್ನು ಅಧ್ಯಕ್ಷ ವಿನಾಯಕ ಮೋರೆ ಅವರು ಶಾಲು ಹೊದಿಸಿ, ಪುಷ್ಪಗುಚ್ಛ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ, ಭಾರತ ವಿಕಾಸ ಪರಿಷತ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಪ್ರತಿಭಾ ಹಲ್ಲಪ್ಪನವರ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿ.ಆರ್. ಗೂಡಿ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯದರ್ಶಿ ಕೆ.ವಿ. ಪ್ರಭು ವಂದಿಸಿದರು.
ಭಾರತ ವಿಕಾಸ ಪರಿಷತ್ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.