ಸಂಬರಗಿ 02: ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದ ಹಿಂದೆ ಭಾರಿ ಮಳೆಯಾದ ಕಾರಣ ಗಡಿ ಭಾಗದ ಗ್ರಾಮಗಳಲ್ಲಿ ಇರುವ ಅಗ್ರಾಣಿ ನದಿಗೆ ನೀರು ಬಂದಿದ್ದು ಸಂಬರಗಿ, ತಾಂವಶಿ, ಪಾಂಡೇಗಾಂವ ಬಂದರಿಗೆ ನೀರು ಬಂದಿದೆ. ಈ ನೀರಿನಿಂದ ನದಿ ತೀರದ ರೈತರಿಗೆ ಅನುಕೂಲವಾಗಿದೆ. ಆದರೆ ಮುಂದಿನ ಅಗ್ರಾಣಿ ನದಿಗೆ ನೀರು ಹರಿಯುತ್ತಿಲ್ಲ.
ಸತತವಾಗಿ ಬರಗಾಲಕ್ಕೆ ಸಿಕ್ಕು ಈ ಭಾಗದ ರೈತರು ನರಳುತ್ತಿದ್ದರು. ಆದರೆ ಈ ವರ್ಷ ಮಳೆಯ ಹಂಗಾಮ ಪ್ರಾರಂಭವಾಗುವದಕ್ಕಿಂತ ಮುಂಚಿತವಾಗಿ ಮಹಾರಾಷ್ಟ್ರದಲ್ಲಿ ಮಳೆಯಾದ ನಂತರ ಅಗ್ರಾಣಿ ನದಿಗೆ ನೀರು ಬಂದು ಅಗ್ರಾಣಿ ನದಿಯ ಮೇಲೆ ಇರುವ ನಾಲ್ಕು ಬಂದರಿನಲ್ಲಿ ನೀರು ಸಂಗ್ರಹವಾದ ನಂತರ ಬಂದರಿನ ಬಾಗಿಲು ಮುಚ್ಚಿರುವ ಕಾರಣ ಮುಂದೆ ನೀರು ಹರಿಯಲು ಸ್ಥಗಿತಗೊಂಡಿದೆ. ಕರ್ನಾಟಕದ-ಮಹಾರಾಷ್ಟ್ರ ಗಡಿಯಿಂದ ಸುಮಾರು 55 ಕಿ.ಮೀ ಅಥಣಿ ತಾಲೂಕಿನ ಖೋತವಾಡಿ ಗ್ರಾಮದಿಂದ ಅಂತಹವಿದ್ದು, ಮುಂದೆ ಕೃಷ್ಣಾನದಿಗೆ ಹುಲಗಬಾಳಿ ಗ್ರಾಮಕ್ಕೆ ತಲುಪಿದೆ. ಅಗ್ರಾಣಿ ನದಿಯ ಮೇಲೆ ಪ್ರತ್ಯೇಕ ಗ್ರಾಮದ ಹತ್ತಿರ ಬಂದರು ಇದ್ದು, ಪಾಂಡೇಗಾಂವ, ಖೀಳೇಗಾಂವ, ಶಿರೂರ, ಸಂಬರಗಿ, ತಾಂವಶಿ ಗ್ರಾಮಗಳ ಹತ್ತಿರ ಬಂದರುಗಳು ಇದ್ದು, ಆ ಬಂದರುಗಳು ತುಂಬಿ ತುಳುಕಿದ್ದಾವೆ. ಆದರೆ ಬಂದರುಗಳ ಬಾಗಿಲುಗಳನ್ನು ಮುಚ್ಚಿದ ಪರಿಣಾಮ ಮುಂದೆ ನೀರು ಹರಿಯುತ್ತಿಲ್ಲ. ಹಿಂದೆ ಮಳೆ ಇಲ್ಲ. ಆ ಕಾರಣ ಈ ಸಂಗ್ರಹಗಳ ನೀರಿನಿಂದ ಅಗ್ರಾಣಿ ತೀರದಲ್ಲಿರುವ ಐದು ಗ್ರಾಮಕ್ಕೆ ಅನುಕೂಲವಾಗಿದೆ.
ಈ ವರ್ಷ ಗಡಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಸಹ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಅಗ್ರಾಣಿ ನದಿಗೆ ನೀರು ಬಂದಿದ್ದು, ರೈತರಿಗೆ ಅನುಕೂಲವಾಗಿದೆ. ಸರ್ಕಾರ ಪ್ರತಿ ಗ್ರಾಮಕ್ಕೆ ಎರಡೆರಡು ಬಂದರುಗಳನ್ನು ನಿರ್ಮಾನ ಮಾಡಿದರೆ ನೀರು ಸಂಗ್ರಹ ಮಾಡಲು ಅನುಕೂಲವಾಗುತ್ತದೆ. ಕೆವಲ ನಾಲ್ಕು ಬಂದರುಗಳಿಗೆ ಮಾತ್ರ ನೀರು ಬಂದಿದೆ.