14ರಂದು ಮದುವೆ ವಿನೋದ ಒಗಟುಗಳು ಹಾಸ್ಯ ಕಾರ್ಯಕ್ರಮ

Wedding fun riddles comedy show on the 14th

ಬೆಳಗಾವಿ  11: ನಗರದ ಹಾಸ್ಯಕೂಟ ಮತ್ತು ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 14 ಶನಿವಾರ ಸಾ. 4-30 ಕ್ಕೆ ಸಾಹಿತ್ಯ ಭವನದಲ್ಲಿ "ಮದುವೆ ವಿನೋದ ಒಗಟುಗಳು" ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.  

ಅಧ್ಯಕ್ಷತೆಯನ್ನು ಸಾಹಿತಿ ಪ್ರೊ ಎಂ.  ಎಸ್‌. ಇಂಚಲ ವಹಿಸಿಕೊಳ್ಳಲಿದ್ದು ನಗೆಮಾತುಗಾರ ಜಿ. ಎಸ್‌. ಸೋನಾರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಪ್ರಾಯೋಜಕತ್ವವನ್ನು  ಕೇಂದ್ರ ಉಗ್ರಾಣ ನಿವೃತ್ತ ಅಧಿಕಾರಿ ಕೀರ್ತಿನಾಥ ವೆಂ. ಮುಳಗುಂದ ವಹಿಸಿಕೊಂಡಿದ್ದಾರೆ.  

ಶೈಲಜಾ ಕುಲಕರ್ಣಿ, ಸುನಂದಾ ಹಾಲಬಾವಿ, ಎ ಎ ಸನದಿ ಮತ್ತು ರಾಜೇಶ್ವರಿ ಹಿರೇಮಠ, ಡಾ. ಅ. ಬ. ಇಟಗಿ ಮದುವೆಯಲ್ಲಿರುವ ವಿನೋದ ಒಡಪುಗಳನ್ನು ಹಂಚಿಕೊಳ್ಳಲಿದ್ದಾರೆ. ತಾನಾಜಿ ನಿರೂಪಿಸಲಿದ್ದಾರೆ.