ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

World Environment Day celebrated on court premises

ಯರಗಟ್ಟಿ 06: ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನ್ಯಾಯವಾದಿಗಳ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಜೂನ್ 5 ರಂದು ಶಶಿ ನಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. 

ಪರಿಸರ ಸಂರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ ಚಾಲನೆ ನೀಡಿ ಮಾತನಾಡಿದ ಅವರುಇಂದು ಅನೇಕ ಸರ್ಕಾರೇತರ ಸಂಸ್ಥೆಗಳು, ಮತ್ತು ಪರಿಸರವನ್ನು ಬೆಂಬಲಿಸುವ ಪ್ರಾಥಮಿಕ ವಿಶ್ವಸಂಸ್ಥೆಯ ಎಲ್ಲರಿಗೂ ತಲುಪುವ ಜಾಗೃತಿ ದಿನವನ್ನು ಪ್ರತಿನಿಧಿಸುತ್ತದೆ.ಮೊದಲ ಬಾರಿಗೆ 1973 ರಲ್ಲಿ ಆಯೋಜಿಸಲಾಯಿತು, ಇದು ಸಮುದ್ರ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿದೆ.ನಂತರ ಅರಣ್ಯ ಅಧಿಕಾರಿ ಎಂ. ಬಿ. ಬಾಗವಾನ ಮಾತನಾಡಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯು ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವತ್ತ ಗಮನ ಹರಿಸಲಿದೆ ದಶಕಗಳಿಂದ, ಪ್ಲಾಸ್ಟಿಕ್ ಮಾಲಿನ್ಯವು ಪ್ರಪಂಚದ ಮೂಲೆ ಮೂಲೆಗೂ ನುಸುಳಿದೆ, ನಾವು ಕುಡಿಯುವ ನೀರು, ನಾವು ತಿನ್ನುವ ಆಹಾರ ಮತ್ತು ನಮ್ಮ ದೇಹಗಳನ್ನು ಸೇರುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯವು ಒಂದು ಪ್ರಮುಖ ಕಾಳಜಿಯಾಗಿದ್ದರೂ, ಇದು ಇಂದಿನ ಪರಿಸರ ಸವಾಲುಗಳಲ್ಲಿ ಅತ್ಯಂತ ಸರಿಪಡಿಸಬಹುದಾದ ಒಂದಾಗಿದೆ, ಇದಕ್ಕೆ ಕೆಲವು ಸ್ಪಷ್ಟ ಪರಿಹಾರಗಳು ಕೈಯಲ್ಲಿವೆ ಎಂದು ಮಾತನಾಡಿದರು. 

ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕ ಸಚೀನ ಅಂಗಡಿ, ನ್ಯಾಯವಾದಿಗಳಾದ ಎಂ. ಎಂ. ಮಡಿವಾಳರ, ಎಸ್‌. ವ್ಹಿ. ಮಾಳಕ್ಕನ್ನವರ, ಎಸ್‌. ವ್ಹಿ. ಕಳ್ಳಿ ಗುದ್ದಿ, ಯಲ್ಲಪ್ಪ ನರಿ ಅರಣ್ಯ ಇಲಾಖೆ ಗಸ್ತು ಅರಣ್ಯಪಾಲಕರಾದ ಕಾನಸಿಬ ಕಳಾವಂತ, ಅಶೋಕ ವಾಗ, ದುರುಗಪ್ಪ ಅರಟಗಲ್, ಸಿಪಾಯಿ ಫಕ್ಕೀರ​‍್ಪ ಮಂಜು ಗಡಮ್ಮನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.