ಹಾವೇರಿ: ರಾಜಕೀಯ ಕ್ಷೇತ್ರದ ಅರಿವು, ಸಂಸತ್ನ ಕಲಾಪಗಳಲ್ಲಿ ನಡೆಯುವ ಚಚರ್ೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಯುವ ಸಂಸತ್ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಅಂದಾನೆಪ್ಪ ವಡಿಗೇರಿ ಅವರು ಹೇಳಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಗರದ ಎಸ್.ಎಂಎಸ್ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪಧರ್ೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಟವಾಗಿದ್ದು, ಜನಪರ ಕಾಳಜಿ ಇರುವ ಸಾಮಾನ್ಯ ವ್ಯಕ್ತಿಗಳು ಕೂಡ ರಾಜಕೀಯ ನಾಯಕರಾಗಲು ಸಾಧ್ಯವಾಗುತ್ತದೆ. ಶಾಸಕಾಂಗದ ಚಟುವಟಿಕೆಗಳನ್ನು ಅರಿಯಲು ಉತ್ತಮ ಶಾಸಕಾಂಗದ ಜ್ಞಾನ ಹೊಂದಲು ಯುವ ಸಂಸತ್ ಚಟುವಟಿಕೆಗಳು ಪೂರಕವಾಗಿವೆ ಎಂದು ಹೇಳಿದರು.
ಸರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಸಮನ್ವಯಾಧಿಕಾರಿಗಳಾದ ಎಸ್.ಎಸ್.ಅಡಿಗ ಅವರು ಮಾತನಾಡಿ, ಯುವ ಸಂಸತ್ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು, ತಮ್ಮ ವಿಷಯ ಜ್ಞಾನ, ವಿಷಯ ಮಂಡನೆಯ ಚಾಕಚಕ್ಯತೆ, ವಿಷಯ ವಿಶ್ಲೇಷಣೆ ಕುರಿತಂತೆ ತಮ್ಮ ಸಾಮಥ್ರ್ಯವನ್ನು ಪ್ರದಶರ್ಿಸಲು ಉತ್ತಮ ವೇದಿಕೆಯಾಗಿದ್ದು, ಈ ವೇದಿಕೆಯನ್ನು ತಮ್ಮ ಜ್ಞಾನದ ಬೆಳವಣಿಗೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಸಂಸತ್ ಕಲಾಪದಲ್ಲಿ ಭಾಗವಹಿಸಿದ್ದ ವಿದ್ಯಾಥರ್ಿಗಳು ಖಾಸಗಿ ಶಾಲೆಗಳ ಹೆಚ್ಚಳದಿಂದಾಗುವ ಸಮಸ್ಯೆ, ಶಿಕ್ಷಕರ ನೇಮಕಾತಿ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ದುರಸ್ತಿ, ಕೃಷಿ ಇಲಾಖೆಯ ಸಮಸ್ಯೆ, ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ ಹಾಗೂ ನಕಲಿ ವೈದ್ಯರ ಹಾವಳಿ, ಅಕ್ರಮ ಮರಳುಗಾರಿಕೆ, ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಸತ್ನಲ್ಲಿ ಚಚರ್ಿಸುವುದರ ಮೂಲಕ ವಿದ್ಯಾಥರ್ಿಗಳಲ್ಲಿ ವಾಸ್ತವಿಕ ಸಮಸ್ಯೆಗಳ ಅರಿವಿನ ಬಗೆಗೆ ಎಲ್ಲರ ಗಮನ ಸೆಳೆದರು.
ಕಲಾಪ ಸ್ಪಧ್ರೆಯಲ್ಲಿ ಭಾಗವಹಿಸಿದ್ದ ಕುಮಾರಿ ಸುಶ್ಮೀತಾ ಮಾಸಣ್ಣನವರ್ ಪ್ರಥಮ ಸ್ಥಾನ, ದಿವ್ಯ ಪಾಟೀಲ್ ದ್ವೀತಿಯ ಸ್ಥಾನ, ಕಾವ್ಯಾ ಅತ್ತಿಗೆಟ್ಟಿಗೆ ತೃತೀಯ ಸ್ಥಾನ,ವೈಷ್ಣವಿ ಆಕರ್ಾಚಾರಿ ನಾಲ್ಕನೆ ಸ್ಥಾನ ಹಾಗೂ ಸುಧಾ ಕಾಡಪ್ಪನವರ ಮತ್ತು ತ್ರಿಶಾ ವಡಗಿ ವಿದ್ಯಾರ್ಥಿನಿಯರಿಗೆ ಐದನೆ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ವಿಷಯ ಪರೀವಿಕ್ಷಕರಾದ ಮಂಜಪ್ಪ.ಆರ್, ದೇವೇಂದ್ರಪ್ಪ ಬಸಮ್ಮನವರ, ಅಜಗೊಂಡರ್, ಈರಪ್ಪ ಲಮಾಣಿ, ಸಮಾಜ ವಿಜ್ಞಾನ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಸಿ.ಜಿ.ಚಿಕ್ಕಮಠ ಹಾಗೂ ಬಿಎಂಆರ್ಸಿ ಸಮನ್ವಯಾಧಿಕಾರಿಗಳಾದ ಸಿ.ಎಸ್.ಭಗವಂತಗೌಡರ್, ಹಾಗೂ ಜಿಲ್ಲೆಯ ಏಳು ತಾಲೂಕಿನ 15 ಶಾಲೆಯ ವಿದ್ಯಾಥರ್ಿಗಳು, ಶಾಲಾ ಸಿಬ್ಬಂದಿಗಳು, ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಶಿಕ್ಷಕರಾದ ಶಿವಬಸವ ಮರಳಿಹಳ್ಳಿ ಅವರು ನಿರೂಪಣೆ ಮಾಡಿದರು.ಸಿ.ಟಿ.ಪೂಜಾರ ಅವರು ವಂದನಾರ್ಪಣೆ ಮಾಡಿದರು