ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಆಯ್ಕೆ
ಕೊಪ್ಪಳ 25: ನಗರದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ(ರಿ), ಕೊಪ್ಪಳ ಜಿಲ್ಲಾ ಘಟಕದಿಂದ ಸಭೆ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸುರೇಶ ಡೋಣ್ಣಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಹಸಿಕೊಂಡಿದ್ದರು. ನೂತನ ತಾಲೂಕ ಅಧ್ಯಕ್ಷರನ್ನಾಗಿ ಗವಿಸಿದ್ದಪ್ಪ ಕಲ್ಲನವರ ನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಶೇಖರ ಇಂದರಗಿ ಸಾಽ ಗಿಣಿಗೇರಾ ಉಪಾಧ್ಯಕ್ಷರುಗಳಾಗಿ, ಕರಿಯಪ್ಪ ಬೀಡನಾಳ, ಈರಣ್ಣ ಕರ್ಕಿಹಳ್ಳಿ, ಚಿದಾನಂದ ಪೂಜಾರ ಹಾಗೂ ರಂಗಪ್ಪ ಪೂಜಾರ, ಗೌರವ ಅಧ್ಯಕ್ಷರಾಗಿ ಯಮನೂರ್ಪ ನಾಯಕ, ಖಜಾಂಚಿಯಾಗಿ ರಮೇಶ ಚೌಡ್ಕಿ, ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಹ್ಯಾಟಿ, ಯಂಕೋಬ ಪೂಜಾರ, ಕಾರ್ಯದರ್ಶಿಯಾಗಿ ಶಂಕರ ಪೂಜಾರ, ಕಾನೂನು ಸಲಹೆಗಾರರಾಗಿ ವೀರಭದ್ರ್ಪ ನಾಯಕ ವಕೀಲರು, ಯಲ್ಲಪ್ಪ ಬಸರಿಹಾಳ ವಕೀಲರು ಹಾಗೂ ನಗರ ಘಟಕದ ಅಧ್ಯಕ್ಷರಾಗಿ ಪ್ರಕಾಶ ಗುದಗಿ, ಪ್ರಧಾನ ಕಾರ್ಯದರ್ಶಿಯಾಗಿ ಅಜಯ್ ನಾಯಕರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ರನ್ನಾಗಿ ಮಂಜುನಾಥ ಗೊಂಡಬಾಳ ಹಾಗೂ ಜಿಲ್ಲಾ ಉಪಾಧ್ಯಕ್ಷರನ್ನಾಗಿ ದೇವಪ್ಪ ಕಟ್ಟಿಮನಿ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಶಾಂತಪ್ಪ ವಾಲ್ಮೀಕಿ ಇವರುಗಳನ್ನು ಜಿಲ್ಲಾ ಸಮಿತಿಗೆ ಸಿಪಾರಸ್ಸು ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಎಲ್ಲಾ ನಿರ್ಣಯಗಳಿಗೆ ಜಿಲ್ಲಾ ಪ್ರಧಾನಕಾರ್ಯದರ್ಶಿಯಾದ ಶರಣಪ್ಪ ನಾಯಕ ಅನುಮೋದನೆ ನೀಡಿದರು. ಈ ಸಂದರ್ಭದಲ್ಲಿ ರವಿಕುಮಾರ ಬನ್ನಿಕೊಪ್ಪ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಹಾಗೂ ಸತೀಶ ಭಾಗ್ಯನಗರ , ಮಂಜುನಾಥ ಗುದಗಿ ಇನ್ನಿತರ ಸಮಾಜದ ಮುಖಂಡರು ಹಾಜರಿದರು.