ಭಾರಿ ಮಳೆಯಿಂದ ರಸ್ತೆಯಲ್ಲಿ ಚರಂಡಿ ನೀರು ಅತಿಕ್ರಮಣ ತೆರವಿಗೆ : ರಾಘವೇಂದ್ರ ಪಾಲನಕರ ಆಗ್ರಹ

Heavy rains cause encroachment of sewage water on the road to be cleared: Raghavendra guardians dem

 ಭಾರಿ ಮಳೆಯಿಂದ ರಸ್ತೆಯಲ್ಲಿ ಚರಂಡಿ ನೀರು ಅತಿಕ್ರಮಣ ತೆರವಿಗೆ : ರಾಘವೇಂದ್ರ ಪಾಲನಕರ ಆಗ್ರಹ

ಗದಗ 29:  ಅವಳಿ ನಗರವಾದ ಗದಗ - ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪಂಚರ ಹೊಂಡದ ಹತ್ತಿರ ಬಿ ಎಸ್ ಏನ್ ಎಲ್ ಕಚೇರಿ ಮುಂಬಾಗದ ಕಾರ್ನರ ನಲ್ಲಿ ನಗರಸಭೆಯ ರಸ್ತೆ ಹಾಗೂ ಗಟಾರ ಚರಂಡಿಯ ಮೇಲೆಯೇ ಅನಧಿಕೃತ ಹಾಗೂ ಅತಿಕ್ರಮಣದೊಂದಿಗೆ ಬ್ರಹತ್ ಕಟ್ಟಡ ನಿರ್ಮಾಣ ಕಾಮಗಾರಿಯು ಭರದಿಂದ ಸಾಗಿರುತ್ತದೆ. ಈ ಭಾಗದಲ್ಲಿ ಇದೇ ದಿನಾಂಕ 29 ರಂದು ಸುರಿದ ಭಾರಿ ಮಳೆಯಿಂದಾಗಿ ಒಂದನೇ ನಂಬರ್ ಶಾಲೆ ಹಾಗೂ ಪಂಚರ ಹೊಂಡದ ರಸ್ತೆಯ ತುಂಬೆಲ್ಲಾ ಚರಂಡಿ ನೀರು ಮಣಕಾಲು ವರೆಗೂ ಜಮೆಯಾಗಿ ಕೊಳಚೆ ನೀರಿನಲ್ಲಿಯೇ ದ್ವಿಚಕ್ರ ವಾಹನ, ಸೈಕಲ್ ಸವಾರರು ಹಾಗೂ ಪಾದಚಾರಿಗಳು ಸಂಚಾರದಲ್ಲಿ ತುಂಬಾ ತೊಂದರೆಯನ್ನು ಅನುಭವಿಸುವಂತಾಯಿತು. ಅದರಂತೆ ಬಡಾವಣೆಯ ಹಲವಾರು ಮನೆಗಳಿಗೂ ಚರಂಡಿ ನೀರು ಹರಿದು ಬಂದು ಮನೆಯ ಸರಕು ಸರಂಜಾಮುಗಳು ಕೊಳಚೆ ನೀರಿನಿಂದ ಹಾಳಾಗಿ ತುಂಬಾ ಹಾನಿಯಾಗಿರುತ್ತದೆ.ಇಂದು ಮಧ್ಯಾಹ್ನದಿಂದ ನಿರಂತರ ಸುರಿದ ಮಳೆಯಿಂದ ಚರಂಡಿಗೆ ಹೊಂದಿಕೊಂಡು ಅನಧಿಕೃತ ಅತಿಕ್ರಮಣ ಕಟ್ಟಡ ನಿರ್ಮಾಣ ಮಾಡಿದ್ದರಿಂದ ಗಟಾರಗಳು ಮುಚ್ಚಿ ಹೋಗಿದ್ದು ಮಳೆಯ ನೀರು ಸುಗಮವಾಗಿ ಹರಿಯಲು ಸಾಧ್ಯವಾಗದೆ ಆಸುಪಾಸಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು . ಜೋರು ಮಳೆಯಿಂದ ಹಲವೆಡೆ ರಸ್ತೆಗಳಲ್ಲಿ ಅಡಿಗಟ್ಟಲೆ ನೀರು ನಿಂತ ಪರಿಣಾಮ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಮಳೆ ನೀರು ಹರಿದು ಹೋಗಲು ಸಮರ​‍್ಕ ಚರಂಡಿ ಕೊರತೆಯಿಂದ ಜನ ಪರದಾಡುವಂತಾಗಿರುತ್ತದೆ.ಇಂತಹದರಲ್ಲಿ ಪಂಚರ ಹೊಂಡದ ಬಿ ಎಸ್ ಏನ್ ಎಲ್ ಆಫೀಸ್ ಎದುರಿಗೆ ಬ್ರಹತ್ ವಾಣಿಜ್ಯ ಕಟ್ಟಡವು ರಸ್ತೆ ಹಾಗೂ ಚರಂಡಿ ರಸ್ತೆಯ ಮೇಲೆಯೇ ಯಾವುದೇ ಸೆಟ್ ಬ್ಯಾಕ್ ಬಿಡದೇ ಬ್ರಹತ್ ಕಟ್ಟಡ ನಿರ್ಮಾಣವಾಗುತ್ತಿದೆ. ಇದನ್ನು ಜಿಲ್ಲಾ ಆಡಳಿತ, ನಗರಾಭಿವೃದ್ಧಿ ಪ್ರಾಧಿಕಾರ, ಹಾಗೂ ನಗರಸಭೆಯ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ಆಗಿರುವರು. ಈ ಕುರಿತು ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಿಗೆ ಅಗತ್ಯ ಕ್ರಮ ಕೈಗೊಳ್ಳಲು ಇದೇ ದಿನಾಂಕ 08/05/2025 ರಂದು ಲಿಖಿತ ಮನವಿಯನ್ನು ಕೂಡಾ ನೀಡಲಾಗಿದ್ದರೂ, ಮನವಿ ಸಲ್ಲಿಸಿ 20 ದಿನಗಳು ಕಳೆದರೂ ಯಾವುದೇ ಕ್ರಮಕೈಗೊಳ್ಳದಿರುವದು ವಿಷಾದನೀಯ.ರಸ್ತೆ ಹಾಗೂ ಚರಂಡಿಗಳ ಮೇಲೆ ಅತಿಕ್ರಮಣಯುಕ್ತ ಅನಧಿಕೃತ ಕಟ್ಟಡಗಳ ನಿರ್ಮಾಣದಿಂದಾಗಿ ವಿಶಾಲವಾದ, ಮತ್ತು ಸುರಳಿತ ಸುಗಮ ಸಂಚಾರಕ್ಕೆ ನೆರವುದಾಯಕವಾಗಬೇಕಾದ ರಸ್ತೆಗಳು ಅತಿಕ್ರಮಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿಯಿಂದಾಗಿ ವಿಶಾಲವಾದ ರಸ್ತೆಗಳು ಇಂದು ಇಕ್ಕಲು ರಸ್ತೆಗಳಾಗಿ ಮಾರು​‍್ಡತ್ತಿವೆ. ಮತ್ತು ಚರಂಡಿಗಳೆಲ್ಲವೂ ಮುಚ್ಚಿ ಹೋಗಿ ಚರಂಡಿಯ ನೀರೇಲ್ಲಾ ರಸ್ತೆಯಲ್ಲಿಯೇ ಹರಿಯುತ್ತದೆ. ಇದರಿಂದ ಈ ಭಾಗದಲ್ಲಿ ಓಡಾಡುವ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾ ಸವಾರರು, ಮತ್ತು ಸ್ಥಳೀಯ ನಾಗರಿಕರಿಗೂ ತುಂಬಾ ತೊಂದರೆಗಳು ಉಂಟಾಗುತ್ತದೆ. ಹಲವರು ಚರಂಡಿಯಲ್ಲಿ ಬಿದ್ದು ಗಾಯಗೊಂಡಿರುವರು.     

ಇಂತಹದರಲ್ಲಿಯೇ ಅವಳಿ ನಗರದ ಗದಗ -ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಸದರ ಈ ಒಂದು  ಅನಧಿಕೃತವಾಗಿ, ಅತಿಕ್ರಮಣದೊಂದಿಗೆ ನಿರ್ಮಾಣವಾಗುತ್ತಿರುವ ಬ್ರಹತ್ ಬಹು ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಯು  ಪ್ರಗತಿಯಲ್ಲಿ ಇರುತ್ತದೆ.  ಆದರೆ ಈ ಒಂದು ಕಟ್ಟಡ ನಿರ್ಮಾಣ ಕಾಮಗಾರಿಗೆ ಗದಗ ಬೆಟಗೇರಿ ನಗರಸಭೆಯಿಂದ  ಜಿಲ್ಲಾ ಆಡಳಿತದಿಂದ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಪ್ರವಾಸೋದ್ಯೆಮ ಇಲಾಖೆ, ಪುರಾತತ್ವ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ವತಿಯಿಂದ ಅಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುವ ಕುರಿತು ಪರವಾನಗಿ ದೊರಕಿದೆಯೇ?  ಹೇಗೆ ಎಂಬುದೇ ಎಕ್ಷ ಪ್ರಶ್ನೆಯಾಗಿರುತ್ತದೆ. 

ಅವೈಜ್ಞಾನಿಕ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಯಾವ ಮಾನದಂಡದ ಅಡಿಯಲ್ಲಿ ಈ ಒಂದು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯ ಪರವಾನಗಿ ನೀಡಲಾಗಿದೆ.   ಹಾಗೂ ಈ ಕಾಮಗಾರಿಯ ರೂಪರೇಷಗಳ ಕುರಿತು ನೀಡಲಾದ ಪರವಾನಗಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಗದಗ ಬೆಟಗೇರಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ, ಪ್ರವಾಸೋಧ್ಯೇಮ ಮತ್ತು ಪುರಾತತ್ವ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ನಿಯಮಗಳ ಅಡಿಯಲ್ಲಿ  

ಪ್ರಾಚೀನ ದೇವಾಲಯಗಳಿಂದ 300 ಮೀಟರ್ ಅಂತರದಲ್ಲಿ ಯಾವುದೇ ಬ್ರಹತ್ ಕಟ್ಟಡ  ಕಟ್ಟಬಾರದು ಅಂತ ಸರಕಾರದ ಸ್ಪಷ್ಟ ಆದೇಶ ಇರುತ್ತದೆ.   

ಆದುದರಿಂದ ಅತೀಕ್ರಮಣಯುಕ್ತ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ತಡೆದು ಬಡಾವಣೆಯ ನಾಗರಿಕರಿಗೆ, ಪಾದಚಾರಿಗಳಿಗೆ, ಸೈಕಲ್ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮೇಲಿಂದ ಮೇಲೆ ಭಾರಿ ಮಳೆಯಿಂದ ಉಂಟಾಗುತ್ತಿರುವ ರಸ್ತೆಯಲ್ಲಿ ಚರಂಡಿ ನೀರು ಬರದಂತೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು  ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.