ಗಡಾದ್ ಮತ್ತು ಉಪಲಾಪುರ್ ಗೆಡಂಬಳ ತಂಡದಿಂದ ಸನ್ಮಾನ

Honored by Gadad and Upalapur Gedamba Team

ಗಡಾದ್ ಮತ್ತು ಉಪಲಾಪುರ್ ಗೆಡಂಬಳ ತಂಡದಿಂದ ಸನ್ಮಾನ

ಕೊಪ್ಪಳ 26: ಅಲ್ಪ ಅಧಿಕಾರ ಅವಧಿಗೆ ಶ್ವೇತಾ ರಾಘವೇಂದ್ರ ಡಂಬಳ್ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಮಾರ್ಗದರ್ಶನ ನೀಡಿ ಜಯ ಸಾಧಿಸಲು ಕಾರ್ಣಿಕರ್ತರಾಗಿರುವ ಈ ಭಾಗದ ಹಿರಿಯರು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಪ್ರಸನ್ನ ಗಡಾದ ಮತ್ತು ಸಮಾಜದ ಮುಖಂಡರು ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರು ಆದ ಅಮರೇಶ್ ಉಪಲಾಪುರ ರವರಿಗೆ ಕಿನ್ನಾಳ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದ ಶ್ವೇತಾ ರಾಘವೇಂದ್ರ ಡಂಬಳ ನೇತೃತ್ವದ ತಂಡದ ಪರವಾಗಿ ಇಬ್ಬರು ಹಿರಿಯ ಮುಖಂಡರನ್ನು ಭೇಟಿ ಮಾಡಿ ಸನ್ಮಾನಿಸಿ ತಮ್ಮ ಆಯ್ಕೆಗೆ ಶ್ರಮಿಸಿರುವುದಕ್ಕೆ ಅವರನ್ನು ಕರ್ತೃಘ್ನತೆ ಸಲ್ಲಿಸಿದರು. 

ಸದಸ್ಯರೆಲ್ಲರ ಸಹಕಾರದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡಿ ಶ್ರಮಿಸುವುದಾಗಿ ಕಿನ್ನಾಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರಾಘವೇಂದ್ರ ಡಂಬಳ ಅಭಿಪ್ರಾಯ ಪಟ್ಟರು,  ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಜಯ ಸಾಧಿಸಿದ ಬಳಿಕ  ಮಾತನಾಡಿ  ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ,ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ನೀಡಿರುವ ಜವಾಬ್ದಾರಿಯನ್ನೂ ಅಧಿಕಾರದ ಅಲ್ಪ ಅವಧಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪ್ರಮಾಣಿಕವಾಗಿ ನಿಭಾಯಿಸುವೆ ಎಂದು ಹೇಳಿದರು, ಪಂಚಾಯತಿಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಅವರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತೇನೆ ಎಂದು ಕಿನ್ನಾಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರಾಘವೇಂದ್ರ ಡಂಬಳ ರವರು ಹೇಳಿದರು,  

ಈ ಸಂದರ್ಭದಲ್ಲಿ ನಾಯಕರಾದ ರಾಘವೇಂದ್ರ ಡಂಬಳ ಯುವ ನಾಯಕರಾದ ಕಾಶಿನಾಥ್ ಡಠರ್, ಮಂಜುನಾಥ್ ಡಠರ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.