ಇಟಗಿ ಉತ್ಸವದಲ್ಲಿ ಮಾರುತಿ ಈಳಗೇರಗೆ ಪ್ರಶಸ್ತಿ, ವಿಶೇಷ ಪುರಸ್ಕಾರ
ಕೊಪ್ಪಳ 05: ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ವರ್ಷದಂತೆ ಈ ವರ್ಷವೂ ಸಹ ಜರುಗಲಿರುವ ಇಟಗಿ ಸಾಂಸ್ಕೃತಿಕ ಸಮ್ಮೇಳನ ದಲ್ಲಿ ಇದೆ ದಿನ 12 ರ ರವಿವಾರ ಸಂಜೆ ಜರುಗಲಿರುವ ಸಮಾರೋಪ ಸಮಾರಂಭ ದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿ ಡಿಪೋವಿನ ವಾಹನ ಚಾಲಕ ಬಹು ಪ್ರತಿಭೆ ಯುಳ್ಳ ಕಲಾವಿದ ಗಾಯಕ ಮಾರುತಿ ಈಳಗೇರ್ ರವರಿಗೆ ಸಂಗೀತ ಕ್ಷೇತ್ರದ ಉತ್ತಮ ಸೇವೆಗಾಗಿ ಎರಡನೇ ಬಾರಿಗೆ ಪ್ರಸಕ್ತ ಸಾಲಿನ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ನೀಡಲಾಗುವದು ಎಂದು ಪ್ರಕಟಣೆ ಮೂಲಕ ಉತ್ಸವ ಸಂಘಟಕ ಹಾಗು ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುರ್ವೇ ಪ್ರಕಟಿಸಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಮಾರುತಿ ಈಳಗೇರ್ ಸಂಗೀತ ಮತ್ತು ಜಾನಪದ ಗೀತೆ ಹಾಗು ಕವನ ವಾಚನ ಮಾಡ ಲಿದ್ದಾರೆ, ಮಾರುತಿ ಈಳಗೇರ್ ರವರಿಗೆ ಎರಡನೇ ಬಾರಿಗೆ ಪ್ರಶಸ್ತಿ ಲಾಭಿಸಿರುವಾದಕ್ಕೆ ಸಾರಿಗೆ ಸಂಸ್ಥೆಯ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆ ಗಳು ಹರ್ಷ ವ್ಯಕ್ತ ಪಡಿಸಿ ಶುಭ ಕೋರಿದ್ದಾರೆ.